ಪ್ರವಾಸಕ್ಕೆ ಬನ್ನಿ: ಭಾರತೀಯರಿಗೆ ಮಾಲ್ಡೀವ್ಸ್‌ ಸಚಿವ ಮನವಿ

| Published : May 07 2024, 01:02 AM IST / Updated: May 07 2024, 07:30 AM IST

ಪ್ರವಾಸಕ್ಕೆ ಬನ್ನಿ: ಭಾರತೀಯರಿಗೆ ಮಾಲ್ಡೀವ್ಸ್‌ ಸಚಿವ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್‌ ಸರ್ಕಾರದ ಭಾರತ ವಿರೋಧಿ ಧೋರಣೆಗೆ ಬೇಸತ್ತು ಅಲ್ಲಿಗೆ ಹೋಗುವುದನ್ನೇ ಕಡಿಮೆ ಮಾಡಿದ್ದಾರೆ. ಇದರಿಂದ ಕಂಗೆಟ್ಟಿರುವ ಮಾಲ್ಡೀವ್ಸ್‌ ಸರ್ಕಾರ, ‘ನಮ್ಮ ಆರ್ಥಿಕತೆ ಪ್ರವಾಸೋದ್ಯಮವನ್ನೇ ಅವಲಂಬಿಸಿದೆ.

ದುಬೈ: ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್‌ ಸರ್ಕಾರದ ಭಾರತ ವಿರೋಧಿ ಧೋರಣೆಗೆ ಬೇಸತ್ತು ಅಲ್ಲಿಗೆ ಹೋಗುವುದನ್ನೇ ಕಡಿಮೆ ಮಾಡಿದ್ದಾರೆ. ಇದರಿಂದ ಕಂಗೆಟ್ಟಿರುವ ಮಾಲ್ಡೀವ್ಸ್‌ ಸರ್ಕಾರ, ‘ನಮ್ಮ ಆರ್ಥಿಕತೆ ಪ್ರವಾಸೋದ್ಯಮವನ್ನೇ ಅವಲಂಬಿಸಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ದೇಶಕ್ಕೆ ಬಂದು ಆರ್ಥಿಕತೆಗೆ ಕೊಡುಗೆ ನೀಡಬೇಕು’ ಎಂದು ಮನವಿ ಮಾಡಿದೆ.

ದುಬೈನಲ್ಲಿ ಪಿಟಿಐ ವಿಡಿಯೋ ಸುದ್ದಿಸಂಸ್ಥೆ ಜತೆ ಮಾತನಾಡಿದ ಮಾಲ್ಡೀವ್ಸ್‌ ಪ್ರವಾಸೋದ್ಯಮ ಸಚಿವ ಇಬ್ರಾಹಿಂ ಫೈಸಲ್, ‘ನಮ್ಮ ಹೊಸ ಚುನಾಯಿತ ಸರ್ಕಾರ ಭಾರತದೊಂದಿಗೆ ಒಟ್ಟಾಗಿ ಕೆಲಸ ಮಾಡಲು ಬಯಸುತ್ತದೆ. ನಾವು ಯಾವಾಗಲೂ ಶಾಂತಿ ಮತ್ತು ಸೌಹಾರ್ದ ವಾತಾವರಣ ಉತ್ತೇಜಿಸುತ್ತೇವೆ. ನಾವು ಭಾರತೀಯರಿಗೆ ಆತ್ಮೀಯ ಸ್ವಾಗತ ನೀಡುತ್ತೇವೆ. ಪ್ರವಾಸೋದ್ಯಮ ಸಚಿವನಾಗಿ, ದಯವಿಟ್ಟು ಮಾಲ್ಡೀವ್ಸ್‌ ಪ್ರವಾಸೋದ್ಯಮದ ಭಾಗವಾಗಲು ನಾನು ಭಾರತೀಯರಿಗೆ ಕೋರುವೆ. ನಮ್ಮ ಆರ್ಥಿಕತೆ ಪ್ರವಾಸೋದ್ಯಮದ ಮೇಲೇ ಅವಲಂಬಿತವಾಗಿದೆ’ ಎಂದರು.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಲಕ್ಷದ್ವೀಪವನ್ನು ಮಾಲ್ಡೀವ್ಸ್‌ಗೆ ಪ್ರವಾಸಿ ತಾಣ ಮಾಡಲು ಕರೆ ನೀಡಿದ್ದರು. ಆಗ ಮಾಲ್ಡೀವ್ಸ್‌ ಸರ್ಕಾರ ಭಾರತ ವಿರೋಧಿ ಧೋರಣೆ ತಾಳಿದ್ದರಿಂದ ಪ್ರವಾಸಿಗರ ಪ್ರಮಾಣ ಗಣನೀಯವಾಗಿ ಕುಸಿದಿತ್ತು.