ನಿಜಾಮರ ಕಾಲದಿಂದ ಹೈದರಾಬಾದ್‌ನಲ್ಲಿ ನಡೆದು ಬಂದಿರುವ ಪ್ರಸಿದ್ಧ ಮೊಹರಂ ಮೆರವಣಿಗೆಯ ಆಲಂ ಹೊರಲು ಈ ಬಾರಿ ತುಮಕೂರಿನ ಕರಿಬಸವೇಶ್ವರ ಮಠದ ಲಕ್ಷ್ಮೀ ಹೆಸರಿನ ಆನೆಯನ್ನು ಬಳಸಲಾಗಿದೆ.

ಹೈದರಾಬಾದ್‌: ನಿಜಾಮರ ಕಾಲದಿಂದ ಹೈದರಾಬಾದ್‌ನಲ್ಲಿ ನಡೆದು ಬಂದಿರುವ ಪ್ರಸಿದ್ಧ ಮೊಹರಂ ಮೆರವಣಿಗೆಯ ಆಲಂ ಹೊರಲು ಈ ಬಾರಿ ತುಮಕೂರಿನ ಕರಿಬಸವೇಶ್ವರ ಮಠದ ಲಕ್ಷ್ಮೀ ಹೆಸರಿನ ಆನೆಯನ್ನು ಬಳಸಲಾಗಿದೆ.

ಲಕ್ಷ್ಮೀ, ತುಮಕೂರಿನ ಹೊರಕೋಟೆಯ ಶ್ರೀ ಕರಿಬಸವೇಶ್ವರ ಮಠದ ಆನೆಯಾಗಿದ್ದು, ಮೊಹರಂನ 10ನೇ ದಿನ ಚಿನ್ನ ಮತ್ತು ವಜ್ರಲೇಪಿತ ಆಲಂ ಹೊತ್ತು ಹೈದರಾಬಾದ್‌ನ ದಬ್ಬೀರ್‌ಪುರದ ಬಿಬಿ ಕಾ ಅಲಾವಾದಿಂದ ಇಲಾಹಿ ಮಸೀದಿವರೆಗೆ ಮೆರವಣಿಗೆಯಲ್ಲಿ ಸಾಗಲಿದೆ.

ಆನೆಯನ್ನು ತೆಲಂಗಾಣ ಸರ್ಕಾರ ಮತ್ತು ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷ ಜಂಟಿಯಾಗಿ ತುಮಕೂರಿನಿಂದ ಹೈದರಾಬಾದ್‌ಗೆ ಕರೆಸಿಕೊಂಡಿವೆ. ಈ ಆನೆ 5 ದಿನಗಳ ಕಾಲ ಹೈದರಾಬಾದ್‌ನಲ್ಲಿಯೇ ತಂಗಲಿದೆ. ಈ ವೇಳೆ ಪ್ರತಿ ದಿನ ಹಣ್ಣುಗಳು, ಕಬ್ಬು, ಕಾಳುಗಳು, ಅನ್ನ ಸೇರಿ 250 ಕೇಜಿ ಆಹಾರವನ್ನು ಕೊಡಲಾಗುತ್ತದೆ. ಈ ಹಿಂದೆ 2023ರಲ್ಲಿ ಮಾಧುರಿ 2024ರಲ್ಲಿ ರೂಪವತಿ ಎಂಬ ಆನೆಗಳು ಮೆರವಣಿಗೆಯಲ್ಲಿ ಸಾಗಿದ್ದವು.