ಉತ್ತರ ಪ್ರದೇಶ ಸರ್ಕಾರದ ಬುಲ್ಡೋಜರ್‌ ನೀತಿಗೆ ಮತ್ತೆ ಸುಪ್ರೀಂ ಕೋರ್ಟ್‌ ತೀವ್ರ ಆಕ್ರೋಶ

| N/A | Published : Apr 02 2025, 01:03 AM IST / Updated: Apr 02 2025, 04:32 AM IST

ಸಾರಾಂಶ

ಉತ್ತರ ಪ್ರದೇಶದ ''ಬುಲ್ಡೋಜರ್‌ ನೀತಿ'' ಇದೀಗ ಮತ್ತೆ ಸುಪ್ರೀಂ ಕೋರ್ಟ್‌ ಕೆಂಗಣ್ಣಿಗೆ ಗುರಿಯಾಗಿದೆ. ಸೂಕ್ತ ಕಾನೂನು ಪ್ರಕ್ರಿಯೆ ನಡೆಸದೆ ವಕೀಲ ಸೇರಿ ಐವರ ಮನೆಯನ್ನು ಕೆಡವಿದ ಉತ್ತರ ಪ್ರದೇಶ ಸರ್ಕಾರ ಮತ್ತು ಪ್ರಯಾಗರಾಜ್‌ ಡೆವಲಪ್‌ಮೆಂಟ್‌ ಅಥಾರೆಟಿ ವಿರುದ್ಧ ಕೋರ್ಟ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ನವದೆಹಲಿ: ಉತ್ತರ ಪ್ರದೇಶದ ಬುಲ್ಡೋಜರ್‌ ನೀತಿ' ಇದೀಗ ಮತ್ತೆ ಸುಪ್ರೀಂ ಕೋರ್ಟ್‌ ಕೆಂಗಣ್ಣಿಗೆ ಗುರಿಯಾಗಿದೆ. ಸೂಕ್ತ ಕಾನೂನು ಪ್ರಕ್ರಿಯೆ ನಡೆಸದೆ ವಕೀಲ ಸೇರಿ ಐವರ ಮನೆಯನ್ನು ಕೆಡವಿದ ಉತ್ತರ ಪ್ರದೇಶ ಸರ್ಕಾರ ಮತ್ತು ಪ್ರಯಾಗರಾಜ್‌ ಡೆವಲಪ್‌ಮೆಂಟ್‌ ಅಥಾರೆಟಿ ವಿರುದ್ಧ ಕೋರ್ಟ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಸರ್ಕಾರ ಮತ್ತು ಸ್ಥಳೀಯ ಪ್ರಾಧಿಕಾರದ ನಡೆಯನ್ನು ಅಕ್ರಮ ಮತ್ತು ಸಂವೇದನಾಶೀಲರಹಿತ ಎಂದು ಕರೆದಿರುವ ನ್ಯಾಯಾಲಯ, ಮನೆ ಕಳೆದುಕೊಂಡ ಪ್ರತಿಯೊಬ್ಬರಿಗೂ 6 ವಾರಗಳೊಳಗೆ ತಲಾ 10 ಲಕ್ಷ ರು. ಪರಿಹಾರ ನೀಡಲು ಸೂಚಿಸಿದೆ. ಜೊತೆಗೆ ಮನೆ ನೆಲಸಮದ ವೇಳೆ ಪುಟ್ಟ ಬಾಲಕಿಯೊಬ್ಬಳು ತನ್ನ ಮನೆಯಿಂದ ಪುಸ್ತಕ ಹಿಡಿದು ಓಡುತ್ತಿರುವ ವಿಡಿಯೋ ಪ್ರಸ್ತಾಪಿಸಿದ ನ್ಯಾಯಪೀಠ, ಇಂಥ ದೃಶ್ಯಗಳು ಎಲ್ಲರ ಮನಕಲಕುತ್ತವೆ ಎಂದಿದೆ.

2023ರಲ್ಲಿ ಪೊಲೀಸ್‌ ಎನ್‌ಕೌಂಟರ್‌ಗೆ ಬಲಿಯಾದ ಗ್ಯಾಂಗ್‌ಸ್ಟರ್‌-ರಾಜಕಾರಣಿ ಆತಿಕ್‌ ಅಹಮದ್‌ಗೆ ಸೇರಿದ ಜಾಗವೆಂದು ತಪ್ಪಾಗಿ ತಿಳಿದು ತಮ್ಮ ಮನೆಗಳನ್ನು ಕೆಡವಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.