ಮಹಾರಾಷ್ಟ್ರದ ನಾಸಿಕ್ನಲ್ಲಿರುವ ತನ್ನ ಕಚೇರಿಯಲ್ಲಿ ಕಾರ್ಪೊರೆಟ್ ಜಿಹಾದ್ ನಡೆದ ಆರೋಪ ಕೇಳಿಬಂದ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಸಿಎಸ್, ‘ಇಂತಹ ಕಿರುಕುಳ ಮತ್ತು ಬಲವಂತದ ಬಗ್ಗೆ ನಾವು ಶೂನ್ಯ ಸಹಿಷ್ಣುಗಳಾಗಿದ್ದೇವೆ’ ಎಂದಿದೆ. ಜತೆಗೆ ತನಿಖೆ ಮುಗಿಯುವ ತನಕ ಆರೋಪಿಗಳನ್ನು ಅಮಾನತು ಮಾಡಿರುವುದಾಗಿಯೂ ತಿಳಿಸಿದೆ.
ಮುಂಬೈ: ಮಹಾರಾಷ್ಟ್ರದ ನಾಸಿಕ್ನಲ್ಲಿರುವ ತನ್ನ ಕಚೇರಿಯಲ್ಲಿ ಕಾರ್ಪೊರೆಟ್ ಜಿಹಾದ್ ನಡೆದ ಆರೋಪ ಕೇಳಿಬಂದ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಸಿಎಸ್, ‘ಇಂತಹ ಕಿರುಕುಳ ಮತ್ತು ಬಲವಂತದ ಬಗ್ಗೆ ನಾವು ಶೂನ್ಯ ಸಹಿಷ್ಣುಗಳಾಗಿದ್ದೇವೆ’ ಎಂದಿದೆ. ಜತೆಗೆ ತನಿಖೆ ಮುಗಿಯುವ ತನಕ ಆರೋಪಿಗಳನ್ನು ಅಮಾನತು ಮಾಡಿರುವುದಾಗಿಯೂ ತಿಳಿಸಿದೆ.
ಪ್ರಧಾನ ಕಚೇರಿಯಿಂದ ಈ ಬಗ್ಗೆ ಹೇಳಿಕೆ ಬಿಡುಗಡೆ
ಮುಂಬೈನಲ್ಲಿರುವ ಕಂಪನಿಯ ಪ್ರಧಾನ ಕಚೇರಿಯಿಂದ ಈ ಬಗ್ಗೆ ಹೇಳಿಕೆ ಬಿಡುಗಡೆ ಆಗಿದ್ದು, ‘ಯಾವುದೇ ರೀತಿಯ ಕಿರುಕುಳ ಅಥವಾ ಬಲವಂತದ ನಡೆಗಳ ಬಗ್ಗೆ ಕಂಪನಿ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ಕಚೇರಿಗಳಲ್ಲಿ ಯಾವಾಗಲೂ ಉದ್ಯೋಗಿಗಳಿಗೆ ಸುರಕ್ಷಿತ ವಾತಾವರಣ ಖಚಿತಪಡಿಸಲಾಗುವುದು. ನಾಸಿಕ್ನಲ್ಲಿ ನಡೆದ ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಕ್ರಮ ಕೈಗೊಳ್ಳಲಾಗಿದೆ. ತನಿಖೆ ಮುಗಿಯುವ ತನಕ ತನಿಖೆಗೆ ಒಳಪಡಿಸಲಾಗುರುವವರನ್ನು ಅಮಾನತುಗೊಳಿಸಲಾಗಿದೆ. ಸಂಸ್ಥೆಯು ಕಾನೂನು ಜಾರಿ ಅಧಿಕಾರಿಗಳಿಗೆ ಸಹಕಾರ ನೀಡುತ್ತಿದೆ’ ಎಂದು ಅದರಲ್ಲಿ ತಿಳಿಸಲಾಗಿದೆ.
ಮಹಿಳಾ ಉದ್ಯೋಗಿಗಳಿಗೆ 2022ರಿಂದ ಲೈಂಗಿಕ ಕಿರುಕುಳ
ಟಿಸಿಎಸ್ನ ಬಿಪಿಒ ವಿಭಾಗದಲ್ಲಿರುವ ಮಹಿಳಾ ಉದ್ಯೋಗಿಗಳಿಗೆ 2022ರಿಂದ ಲೈಂಗಿಕ ಕಿರುಕುಳ ನೀಡಲಾಗುತ್ತಿತ್ತು. ಅಂತೆಯೇ ಸಂಬಳ ಹೆಚ್ಚಳ ಹಾಗೂ ಭಡ್ತಿಯ ಆಮಿಷ ಒಡ್ಡಿ ನಮಾಜ್ ಮಾಡುವಂತೆ ಹಾಗೂ ಮತಾಂತರಗೊಳ್ಳುವಂತೆ ಒತ್ತಾಯಿಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ 9 ಎಫ್ಐಆರ್ಗಳು ದಾಖಲಾಗಿದ್ದು, ತನಿಖೆಗಾಗಿ ಪೊಲೀಸರ ವಿಶೇಷ ತಂಡವನ್ನೂ ರಚಿಸಲಾಗಿದ್ದು, ಎಚ್ಆರ್ ಮ್ಯಾನೇಜರ್ ಸೇರಿ 7 ಜನರನ್ನು ಬಂಧಿಸಲಾಗಿದೆ.
ಈ ನಡುವೆ ಮಹಾರಾಷ್ಟ್ರದಾದ್ಯಂತ ಇರುವ ಇತರೆ ಐಟಿ ಕಂಪನಿಗಳಲ್ಲೂ ಇಂಥ ಬೆಳವಣಿಗೆ ನಡೆದಿರುವ ಬಗ್ಗೆ ತನಿಖೆ ನಡೆಸುವಂತೆ ಮಹಾರಾಷ್ಟ್ರದ ಐಟಿ ಉದ್ಯೋಗಿಗಳ ಸಂಘಟನೆಯು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ಪತ್ರ ಬರೆದು ಆಗ್ರಹ ಮಾಡಿದೆ.