ಫಾರಿನ್‌ಗೆ ಅನ್ನಭಾಗ್ಯ ಅಕ್ಕಿ 2 ರೈಸ್‌ಮಿಲ್‌ ಜಫ್ತಿ: ಕೇಸು

| N/A | Published : Sep 10 2025, 02:04 AM IST / Updated: Sep 10 2025, 05:51 AM IST

ಫಾರಿನ್‌ಗೆ ಅನ್ನಭಾಗ್ಯ ಅಕ್ಕಿ 2 ರೈಸ್‌ಮಿಲ್‌ ಜಫ್ತಿ: ಕೇಸು
Share this Article
  • FB
  • TW
  • Linkdin
  • Email

ಸಾರಾಂಶ

ಬಡವರಿಗೆ ಸರ್ಕಾರದಿಂದ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಪಾಲಿಶ್‌ ಮಾಡಿ ವಿದೇಶಕ್ಕೆ ರಫ್ತು ಮಾಡಲು ಭಾರಿ ಪ್ರಮಾಣದಷ್ಟು ಅಕ್ಕಿ ಚೀಲಗಳನ್ನು ದಾಸ್ತಾನು ಮಾಡಿದ್ದ ಯಾದಗಿರಿ ಜಿಲ್ಲೆ ಗುರುಮಠಕಲ್‌ನ 2 ರೈಸ್‌ಮಿಲ್‌ಗಳನ್ನು ಜಪ್ತಿ ಮಾಡಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

 ಯಾದಗಿರಿ :  ಬಡವರಿಗೆ ಸರ್ಕಾರದಿಂದ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಪಾಲಿಶ್‌ ಮಾಡಿ ವಿದೇಶಕ್ಕೆ ರಫ್ತು ಮಾಡಲು ಭಾರಿ ಪ್ರಮಾಣದಷ್ಟು ಅಕ್ಕಿ ಚೀಲಗಳನ್ನು ದಾಸ್ತಾನು ಮಾಡಿದ್ದ ಯಾದಗಿರಿ ಜಿಲ್ಲೆ ಗುರುಮಠಕಲ್‌ನ 2 ರೈಸ್‌ಮಿಲ್‌ಗಳನ್ನು ಜಪ್ತಿ ಮಾಡಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ರೈಸ್‌ಮಿಲ್‌ಗಳಲ್ಲಿ ಪತ್ತೆಯಾದ ಅನ್ನಭಾಗ್ಯ ಅಕ್ಕಿ ದಾಸ್ತಾನು ಸಂಗ್ರಹಕ್ಕೆ ಸಂಬಂಧಿಸಿದಂತೆ ಗುರುಮಠಕಲ್‌ ಪೊಲೀಸ್‌ ಠಾಣೆಯಲ್ಲಿ, ಶ್ರೀ ಲಕ್ಷ್ಮೀ ವೆಂಕಟೇಶ್ವರ ಹಾಗೂ ಶ್ರೀ ಲಕ್ಷ್ಮೀ ಬಾಲಾಜಿ ಇಂಡಸ್ಟ್ರೀಸ್‌ ಪಾಲುದಾರರು/ಮಾಲೀಕರಾದ ನರೇಂದ್ರ ರಾಠೋಡ್‌, ಅಯ್ಯಪ್ಪ ರಾಠೋಡ್‌, ಚಂದ್ರಿಕಾ ನೀಲಕಂಠ ಹಾಗೂ ಲಕ್ಷ್ಮೀಬಾಯಿ ರಾಠೋಡ್‌ ಅವರ ವಿರುದ್ಧ ದೂರು (ಅಪರಾಧ ಸಂಖ್ಯೆ 0169/2025) ದಾಖಲಾಗಿದೆ. ಈ ಎರಡೂ ರೈಸ್‌ಮಿಲ್‌ಗಳನ್ನು ಸೀಝ್‌ ಮಾಡಲಾಗಿದೆ.

ಆರೋಪಿ ನರೇಂದ್ರ ರಾಠೋಡ್‌ ಹಾಗೂ ಅಯ್ಯಪ್ಪ ರಾಠೋಡ್‌ ಅವರು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರ ತಂದೆ ಹಾಗೂ ಸಹೋದರಾಗಿದ್ದಾರೆ. ₹1.21 ಕೋಟಿ ಮೌಲ್ಯದ 3,985 ಕ್ವಿಂಟಾಲ್‌ ಅಕ್ಕಿ ದಾಸ್ತಾನು ಹಾಗೂ ₹45 ಲಕ್ಷ ಮೌಲ್ಯದ ಎರಡು ಲಾರಿಗಳನ್ನು ಜಪ್ತಿ ಮಾಡಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಪಡಿತರ ವ್ಯವಸ್ಥೆ ಮೂಲಕ ವಿತರಣೆ ಇರುವ ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಮಿಲ್ಲಲ್ಲಿ ಸಂಗ್ರಹಿಸಿದ್ದ ಆರೋಪಿಗಳು

ಈ ಅಕ್ಕಿಗೆ ಪಾಲಿಶ್‌ ಮಾಡಿ ಫ್ರಾನ್ಸ್, ಸಿಂಗಾಪುರ, ದುಬೈಗೆ ವಿಮಾನ, ಹಡಗಿನ ಮೂಲಕ ಸಾಗಿಸಿದ್ದ ಪ್ರಕರಣ

ಇತ್ತೀಚೆಗೆ ಮಿಲ್‌ ಮೇಲೆ ರೇಡ್‌ ಮಾಡಿದ್ದ ಆಹಾರ ಇಲಾಖೆ ಅಧಿಕಾರಿಗಳು. ಇದೀಗ ಎಣಿಕೆ ಬಳಿಕ ಮಿಲ್‌ ಜಪ್ತಿ

Read more Articles on