ವಿಜಯಪುರ: ತಾಲೂಕಿನ ಬುರಣಾಪೂರದ ಶ್ರೀ ಮಲ್ಲಿಕಾರ್ಜುನ ದೇವಾಲಯದ ಧರ್ಮದರ್ಶಿ ಲಕ್ಷ್ಮಣ ಶಿವಶರಣರು ಲೋಕಕಲ್ಯಾಣಕ್ಕಾಗಿ ಮಹಾಶಿವಯೋಗ ಆರಂಭಿಸಿದ್ದಾರೆ.

ಎಲ್ಲರೂ ಧರ್ಮದ ಮಾರ್ಗದಲ್ಲಿ ನಡೆಯಬೇಕು. ಸರ್ವರಿಗೂ ಶಾಂತಿ, ಸಮಾಧಾನ ದೊರೆಯಬೇಕು ಹಾಗೂ ಸಕಲ ಜೀವರಾಶಿಗಳಿಗೆ ಒಳಿತಾಗಬೇಕೆಂದು ಜಗದೊಡೆಯನಾದ ಶ್ರೀಗಿರಿಯ ಮಲ್ಲಿಕಾರ್ಜುನನಿಗೆ ಸಹಸ್ರ ನಾಮಾವಳಿಯ ಮಹಾಶಿವಪೂಜೆ ಸಲ್ಲಿಸಿ ಲೋಕೋದ್ಧಾರಕ್ಕಾಗಿ 208 ಕೋಟಿ ಶಿವಪಂಚಾಕ್ಷರಿ ಮಹಾಮಂತ್ರ ಜಪಯಜ್ಞವನ್ನು ಪೂರ್ಣಗೊಳಿಸಲು ಶುಭ ಸಂಕಲ್ಪ ಮಾಡಿದ್ದಾರೆ ಎಂದು ಸಮಾಜ ಸೇವಕ ಹಣಮಂತ ಪುಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.