ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಅಸಾಧ್ಯವಾದುದು ಯಾವುದು ಇಲ್ಲ. ಆದರೆ ಅದನ್ನು ಸಾಧಿಸಲು ಕಠಿಣ ಪರಿಶ್ರಮ ಬೇಕು ಎಂದು ಪ್ರಾದೇಶಿಕ ಆಯುಕ್ತರ ಕಚೇರಿ ಹೆಚ್ಚುವರಿ ಆಯುಕ್ತೆ ಕವಿತಾ ರಾಜಾರಾಂ ಅಭಿಪ್ರಾಯಪಟ್ಟರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ನಡೆದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ರಾಷ್ಟ್ರೀಯ ಕೆಡೆಟ್ ಕಾಪ್ಸ್, ಯುವ ರೆಡ್ ಕ್ರಾಸ್ ಮತ್ತು ರೇಂಜರ್ಸ್ ಚಟುವಟಿಕೆಗಳ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳು ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕು. ಅದಕ್ಕೆ ಕೇವಲ ಪುಸ್ತಕ ಮಾತ್ರ ಓದಿದರೆ ಮಾತ್ರ ಸಾಲದು, ಓದುವುದರ ಜತೆಗೆ ಸಹ ಪಠ್ಯ ಚಟುವಟಿಕೆ ಗಳಲ್ಲಿ ಭಾಗವಹಿಸಿ ಮಾನಸಿಕ ಸಧೃಡ ಕಾಪಾಡಿಕೊಳ್ಳಬೇಕು, ಕನಸು ಕಾಣುವುದು ಮತ್ತು ಸಾಧಿಸುವುದು ಎರಡೂ ಮುಖ್ಯ ಎಂದರು. ಹೆಣ್ಣು ಮಕ್ಕಳು ಏನೇ ಎಂದುಕೊಂಡರೂ ಅದನ್ನು ಸಾಧಿಸುವ ಛಲ ನಮ್ಮಲ್ಲಿದೆ ಎಂದ ಅವರು, ಸಮಾಜ ಕಟ್ಟುವ ಕೆಲಸ ಮಾಡುತ್ತಿರುವ ಎಲ್ಲ ಹೆಣ್ಣು ಮಕ್ಕಳು ಅಭಿನಂದನೆಗೆ ಅರ್ಹರು ಎಂದರು.ಪ್ರಾಂಶುಪಾಲ ಪ್ರೊ.ಎಂ. ಅಬ್ದುಲ್ ರಹಿಮಾನ್, ಸಾಂಸ್ಕೃತಿಕ ಸಮಿತಿ ಖಜಾಂಚಿ ಜಿ.ಎಲ್. ಬಸವರಾಜು, ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿಗಳಾದ ಎಚ್. ಭೀಮೇಶ್, ಎಚ್.ಎಂ. ಲತರಾಣಿ,ದೈಹಿಕ ಶಿಕ್ಷಣ ನಿರ್ದೇಶಕ ಕೆ.ಆರ್. ಪ್ರತಿಮಾ, ಎನ್.ಸಿ.ಸಿ.ಅಧಿಕಾರಿ ಎಂ. ಮಮತಾ, ರೇಂಜರ್ ಅಧಿಕಾರಿ ಮಂಜುಳಾ ಶೇಷಗಿರಿ, ಯುವ ರೆಡ್ ಕ್ರಾಸ್ ಸಂಚಾಲಕ ಎಂ.ಎಸ್. ಕುಮಾರ್, ಪತ್ರಾಂಕಿತ ವ್ಯವಸ್ಥಾಪಕಿ ಆರ್. ಮೀನಾಕ್ಷಿ, ವಿದ್ಯಾರ್ಥಿ ಸಂಸತ್ ನ ಅಧ್ಯಕ್ಷ ಕಾವ್ಯ ಎಂ. ಕಟ್ಟಿ, ಉಪಾಧ್ಯಕ್ಷ ಎಂ. ಜೀವಿತ, ಎಸ್. ದೀಕ್ಷಿತ, ಸಾಂಸ್ಕೃತಿಕ ಕಾರ್ಯದರ್ಶಿ ಎಚ್.ಕೆ. ರಕ್ಷಿತಾ, ಜಂಟಿ ಕಾರ್ಯದರ್ಶಿ ಜೆ. ಜರೀನ, ಕನ್ನಡ ಸಂಪಾದಕಿ ಭೂಮಿಕಾ, ಇಂಗ್ಲಿಷ್ ಸಂಪಾದಕಿ ಎ. ಬೃಂದಾ, ಎನ್.ಎಸ್.ಎಸ್. ಕಾರ್ಯದರ್ಶಿ ಜಿ.ಎಂ. ಶ್ರೀರಕ್ಷ, ಲೇಖನ ಅರಸ್, ಎನ್.ಸಿ.ಸಿ ಕಾರ್ಯದರ್ಶಿ ಎಂ. ದಿವ್ಯಶ್ರೀ ಎಂ, ರೇಂಜರ್, ಕಾರ್ಯದರ್ಶಿ ಜಿ. ಅಮೃತ, ಕ್ರೀಡಾ ಕಾರ್ಯದರ್ಶಿ ಕೆ.ಎಸ್. ಲಕ್ಷ್ಮೀ, ಜಿ.ಎನ್. ಕಾವೇರಿ, ವಿದ್ಯಾರ್ಥಿಗಳು, ಅಧ್ಯಾಪಕರು ಇದ್ದರು.ಸದ್ಬಳಕೆ ಮಾಡಿಕೊಳ್ಳಿ:
ಮೈಸೂರು ನಗರಪಾಲಿಕೆಯ ಆಯುಕ್ತ ಆಶಾದ್ ಉರ್ ರೆಹಮಾನ್ ಮಾತನಾಡಿ, ಯಶಸ್ಸು ಎಂದರೆ ಶ್ರಮ ಮತ್ತು ಅವಕಾಶ ಸದ್ಬಳಕೆ ಮಾಡಿಕೊಳ್ಳುವುದು. ಹಾಗಾಗಿ ಎಲ್ಲರೂ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ತಿಳಿಸಿದರು. ಜೀವನದಲ್ಲಿ ಗುರಿ ಇರಬೇಕು. ಅದೇ ಮುಖ್ಯ. ಅದನ್ನು ತಲುಪಲು ನಾವು ಪ್ರಯತ್ನ ಪಡಬೇಕು. ಇದಕ್ಕೆ ಕನಸು ಕಾಣವುದು ಮುಖ್ಯ. ಕನಸನ್ನು ನನಸು ಮಾಡಲು ಪೂರಕವಾಗಿ ಕೆಲಸ ಮಾಡಬೇಕು. ಅದೇನಂದರೆ, ಚೆನ್ನಾಗಿ ಅಧ್ಯಯನ ಮಾಡುವುದು ಎಂದು ಹೇಳಿದ ಅವರು, ಛಲ ಬೇಕು ಏನಾದರೂ ಸಾದಿಸಬೇಕಾದರೆ, ಆ ಛಲ ನಿಮ್ಮಲ್ಲಿರಲಿ ಎಂದು ಆಶಿಸಿದರು.ನಿಮ್ಮ ಆಸೆಯನ್ನು ಸಸಿಯ ಹಾಗೆ ಪೋಷಿಸಿ. ಕಾಪಾಡಿ. ಅದು ಎತ್ತರಕ್ಕೆ ಬೆಳೆಯಲು ಬಿಡಿ, ಎಲ್ಲದರ ಬಗ್ಗೆ ನಂಬಿಕೆ ಇಡಿ ಎಂದು ಅವರು ಹೇಳಿದರು. ಅದರತ್ತ ನಡೆಯಿರಿ. ನಿಮ್ಮ ಮೇಲೆ ನಂಬಿಕೆ ಇರಲಿ. ಅದು ನಿಮ್ಮ ಸಾಧನೆ ಗೆ ದಾರಿಯಾಗಲಿ ಎಂದರು. ಎಲ್ಲರಿಗೂ ಸಮಸ್ಯೆ ಸಹಜ. ಆದರೆ ಅದರಿಂದ ನಮ್ಮನ್ನು ಹೊರಗೆ ತರುವುದೇ ಜೀವನ. ಅದಕ್ಕಾಗಿ ನಾವು ಶ್ರಮ ಪಡಬೇಕು ಎಂದು ಕಿವಿ ಮಾತು ಹೇಳಿದರು.