ಆತ್ಮಸಾಕ್ಷಿ ಅನುಗುಣ ಕಾರ್ಯನಿರ್ವಹಿಸಿ: ಕೋರಿಶೆಟ್ಟಿ

| Published : Oct 31 2024, 12:58 AM IST

ಸಾರಾಂಶ

ವಿದೇಶಗಳ ಮೇಲೆ ಅತಿಯಾದ ಅವಲಂಬನೆಯೂ ಭ್ರಷ್ಟಾಚಾರದ ಮೂಲ ಕಾರಣವಾಗಿದೆ. ಸಮಾಜಕ್ಕೆ ಅಂಟಿದ ಭ್ರಷ್ಟಾಚಾರವೆಂಬ ಪಿಡುಗು ನಿವಾರಿಸಬೇಕಾಗಿದ್ದರೆ ನಿಸ್ವಾರ್ಥ ಜೀವನ ನಮ್ಮದಾಗಬೇಕು

ಬಾಗಲಕೋಟೆ: ಪ್ರತಿಯೊಬ್ಬರು ಪಾರದರ್ಶಕವಾಗಿ ಮತ್ತು ಆತ್ಮಸಾಕ್ಷಿಯಿಂದ ತಮ್ಮ ಜವಾಬ್ದಾರಿ ಹಾಗೂ ಕರ್ತವ್ಯ ನಿರ್ವಹಿಸಬೇಕು ಎಂದು ವಿದ್ಯಾಗಿರಿ ಬಸವೇಶ್ವರ ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಟಿ.ಬಿ.ಕೋರಿಶೆಟ್ಟಿ ಹೇಳಿದರು.

ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಅಡಿಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದೇಶಗಳ ಮೇಲೆ ಅತಿಯಾದ ಅವಲಂಬನೆಯೂ ಭ್ರಷ್ಟಾಚಾರದ ಮೂಲ ಕಾರಣವಾಗಿದೆ. ಸಮಾಜಕ್ಕೆ ಅಂಟಿದ ಭ್ರಷ್ಟಾಚಾರವೆಂಬ ಪಿಡುಗು ನಿವಾರಿಸಬೇಕಾಗಿದ್ದರೆ ನಿಸ್ವಾರ್ಥ ಜೀವನ ನಮ್ಮದಾಗಬೇಕು. ಭ್ರಷ್ಟಾಚಾರವು ನಿರಂತರ ಸೇವೆ ಪ್ರಾಮಾಣಿಕತೆ ತಿಂದು ಹಾಕುತ್ತದೆ. ಸಮಾಜ ಕಲುಷಿತಗೊಂಡರೆ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದರು.

ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ಶಿವಶಕ್ತಿ ಘಂಟಿಮಠರವರು ಪ್ರತಿಜ್ಞಾವಿಧಿ ಬೋಧಿಸಿದರು. ವೇದಿಕೆಯಲ್ಲಿ ಕುಮಾರ ಸಂತೋಷ ಮೇಟಿ ಚಂದ್ರಕಾಂತ ಚೌಕಿಮಠ ಪ್ರಭುಸ್ವಾಮಿ ಗದ್ದಗಿಮಠ ಶ್ರೀಶೈಲ ಹೆರಕಲ ಇತರರಿದ್ದರು.