ಅಯೋಧ್ಯೆ: ಉಡುಪಿಯ ವೈದಿಕರಿಂದ ಶ್ರೀ ಚಕ್ರಪೂಜೆ

| Published : Feb 17 2024, 01:21 AM IST

ಸಾರಾಂಶ

ಅಯೋಧ್ಯೆ ಶ್ರೀ ರಾಮದೇವರ ಮಂಡಲೋತ್ಸವದಲ್ಲಿ ಗುರುವಾರ ಸಂಜೆ ಉಡುಪಿಯ ವೈದಿಕರಿಂದ ಶ್ರೀಚಕ್ರ ಮಂಡಲ ಪೂಜೆ ವೈಭವದಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿಅಯೋಧ್ಯೆಯಲ್ಲಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀ ರಾಮದೇವರ ಮಂಡಲೋತ್ಸವದಲ್ಲಿ ಗುರುವಾರ ಸಂಜೆ ಉಡುಪಿಯ ವೈದಿಕರಿಂದ ಶ್ರೀಚಕ್ರ ಮಂಡಲ ಪೂಜೆ ವೈಭವದಿಂದ ನೆರವೇರಿತು.* ಧ್ವನಿಸಿದ ವರಾಹ ರೂಪಂಕರ್ನಾಟಕ ರಾಮನಗರದ ವಿಜಯ್ ಕುಮಾರ್ ಮತ್ತು ಬಳಗದ ನಾಗಸ್ವರ ಕಲಾವಿದರು ಗುರುವಾರ ಸಂಜೆ ರಾಮಮಂದಿರದಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ರಾಮದೇವರ ಅಷ್ಟಾವಧಾನ ಸೇವೆಯ ಹೊತ್ತಲ್ಲಿ ಜಗತ್ತಿನ ಕೋಟ್ಯಂತರ ಜನರನ್ನು ಆಕರ್ಷಿಸಿದ ಚಲನಚಿತ್ರ ಕಾಂತಾರದ ವರಾಹರೂಪಂ ಕೃತಿಯನ್ನು ನುಡಿಸಿ ಗಮನಸೆಳೆದರು.

------------

ಸೂರ್ಯ ನಮಸ್ಕಾರದ ಮೂಲಕ ರಥಸಪ್ತಮಿ ಆಚರಣೆ

ರಥಸಪ್ತಮಿಯ ಪರ್ವದಿನ ಶುಕ್ರವಾರ ಶ್ರೀಕೃಷ್ಣ ಮಠದಲ್ಲಿ ಸಾಮೂಹಿಕವಾಗಿ ಸೂರ್ಯ ನಮಸ್ಕಾರವನ್ನು ಮಾಡುವ ಮೂಲಕ ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಯಿತು. ಸೂರ್ಯೋದಯಕ್ಕೆ ಮುನ್ನ ಆದಿತ್ಯಹೃದಯ ಹೋಮವನ್ನೂ ಮಾಡಿ ಆದಿತ್ಯನನ್ನು ಪೂಜಿಸಲಾಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ನಮಸ್ಕಾರ ಪ್ರಿಯನಾದ ಸೂರ್ಯನ ಮತ್ತು ಸೌರಶಕ್ತಿಯ ವೈಭವವನ್ನು ವಿವರಿಸಿ ಜಗನ್ನಿಯಾಮಕ ಸೂರ್ಯನಾರಾಯಣನ ಅನುಗ್ರಹ ಎಲ್ಲರ ಮೇಲಿರಲಿ ಎಂದು ಹಾರೈಸಿದರು.

ಕಾರ್ಯಕ್ರಮವನ್ನು ಪತಂಜಲಿ ಯೋಗ ಶಿಕ್ಷಣ ಸಮಿತಿಯವರು ಆಯೋಜಿಸಿದ್ದರು. ಸಮಾರಂಭದಲ್ಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷೆ ಸರೋಜಾ ರಾವ್, ಯೋಗ ಶಿಕ್ಷಕರಾದ ಬಿರಾದರ್, ಸುದರ್ಶನ್ ಸರಲಿತ್ತಾಯ, ವಾಸುದೇವ ಭಟ್, ರಮೇಶ್, ಶೇಖರ, ದಿವಾಕರ, ಲಲಿತ ಮತ್ತಿತರರು ಉಪಸ್ಥಿತರಿದ್ದರು.