ಶೃಂಗೇರಿಯಲ್ಲಿ ಮುಸ್ಲಿಂ ಭಾಂದವರಿಂದ ಸಂಭ್ರಮ ಸಡಗರದ ಬಕ್ರೀದ್ ಆಚರಣೆ

| Published : Jun 08 2025, 02:40 AM IST

ಶೃಂಗೇರಿಯಲ್ಲಿ ಮುಸ್ಲಿಂ ಭಾಂದವರಿಂದ ಸಂಭ್ರಮ ಸಡಗರದ ಬಕ್ರೀದ್ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ: ತಾಲೂಕಿನಾದ್ಯಂತ ಶನಿವಾರ ಮುಸ್ಲಿಂ ಭಾಂದವರು ಬಕ್ರೀದ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಬೆಳಿಗ್ಗೆ ಪಟ್ಟಣದ ಜಾಮೀಯ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧಾರ್ಮಿಕ ಉಪನ್ಯಾಸ, ಕುರಾನ್ ಪಠಣ ನಡೆಯಿತು. ನಮಾಜ್ ನಂತರ ಮಸೀದಿಯಲ್ಲಿ, ಮಸೀದಿ ಎದುರು ಹಿರಿಯರು, ಮಕ್ಕಳು ಎನ್ನದೇ ಪರಸ್ಪರ ಹಸ್ತಲಾಘವ, ಆಲಿಂಗನ ಮಾಡಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಶೃಂಗೇರಿ: ತಾಲೂಕಿನಾದ್ಯಂತ ಶನಿವಾರ ಮುಸ್ಲಿಂ ಭಾಂದವರು ಬಕ್ರೀದ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಬೆಳಿಗ್ಗೆ ಪಟ್ಟಣದ ಜಾಮೀಯ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧಾರ್ಮಿಕ ಉಪನ್ಯಾಸ, ಕುರಾನ್ ಪಠಣ ನಡೆಯಿತು. ನಮಾಜ್ ನಂತರ ಮಸೀದಿಯಲ್ಲಿ, ಮಸೀದಿ ಎದುರು ಹಿರಿಯರು, ಮಕ್ಕಳು ಎನ್ನದೇ ಪರಸ್ಪರ ಹಸ್ತಲಾಘವ, ಆಲಿಂಗನ ಮಾಡಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಜಾಮೀಯ ಮಸೀದಿಯ ಧರ್ಮಗುರು ಮೌಲಾನಾ ಶಾಹಿದ್ ನೂರಿ ರಿಜ್ವಿ ಹಬ್ಬದ ಸಂದೇಶ ನೀಡಿ ಬಕ್ರೀದ್ ಹಬ್ಬ ತ್ಯಾಗ ಬಲಿದಾನಗಳ ಸಂಕೇತ. ಧಾರ್ಮಿಕ ಸೀಮೆಗಳನ್ನು ದಾಟದೇ ಶಾಂತಿಯುತವಾಗಿ ಹಬ್ಬ ಆಚರಿಸಿದಾಗ ಅರ್ಥಪೂರ್ಣ ವಾಗುತ್ತದೆ. ಸಮಾಜದಲ್ಲಿ ಪರಸ್ಪರ ಸಹಬಾಳ್ವೆ, ಸಹೋದರತ್ವ, ಸಾಮರಸ್ಯದ ಜೀವನ ನಡೆಸಬೇಕು. ಮಾನವೀಯ ನೈತಿಕ ಮೌಲ್ಯಗಳಿಗೆ ಆದ್ಯತೆ ನೀಡಬೇಕು ಎಂದರು.

ನಂತರ ಮಸೀದಿ ಮುಂಬಾಗದಿಂದ ಹಬ್ಬದ ಮೆರವಣಿಗೆ ಹೊರಟು ಭಾರತೀ ಬೀದಿಯಲ್ಲಿ ಶಾಂತಿಯುತವಾಗಿ ಸಾಗಿತು. ಗೋರಿಗುಡ್ಡೆಯಲ್ಲಿರುವ ಹಜರತ್ ಮೆಹಬೂಬ್ ಆಸ್ತಾನೆ ಜಹೂರ್ ಶಾ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪಟ್ಟಣದ ಅಲ್ ಬದ್ರಿಯಾ ಮಸೀದಿಯಲ್ಲಿಯೂ ಬೆಳಿಗ್ಗೆ ಸಾಮೂಹಿಕ ಈದ್ ನಮಾಜ್ ನಡೆಯಿತು. ಧಾರ್ಮಿಕ ಉಪನ್ಯಾಸ,ಕುರಾನ್ ಪಠಣ ನೆಡೆಯಿತು.

ತಾಲೂಕಿನ ಅಡ್ಡಗದ್ದೆ, ಕಿಗ್ಗಾ, ಬೇಗಾರು ಮಸೀದಿಗಳಲ್ಲಿ ಹಬ್ಬದ ಅಂಗವಾಗಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಧಾರ್ಮಿಕ ಉಪನ್ಯಾಸ ನಡೆಯಿತು. ನಂತರ ಮನೆ ಮನೆಗ‍ಳಲ್ಲಿ ಹಬ್ಬದ ಅಡುಗೆಗಳ‍ನ್ನು ಮಾಡಿ ಸಂಭ್ರಮಿಸಿದರು.

7 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದಲ್ಲಿ ಮುಸ್ಲಿಂ ಭಾಂದವರು ಶನಿವಾರ ಬಕ್ರೀದ್ ಅಂಗವಾಗಿ ಹಬ್ಬದ ಮೆರವಣಿಗೆ ನಡೆಸಿದರು.