ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಕೋಟೆನಾಡಪ್ರಭು ಕೆಂಪೇಗೌಡರ ದೂರದೃಷ್ಠಿಯ ವ್ಯಕ್ತಿತ್ವದ ಪರಿಣಾಮವಾಗಿ ಇಂದು ಬೃಹತ್ ಬೆಂಗಳೂರು ನಿರ್ಮಾಣವಾಗಿದೆ. ಇದು ಕೆಂಪೇಗೌಡರು ಬಿಟ್ಟು ಹೋದ ಕುರುಹು ಎಂದು ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.ನಗರದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಪುತ್ಥಳಿಗೆ ಪುಷ್ಪ ಮಾಲೆ ಅರ್ಪಿಸಿ ಮಾತನಾಡಿದರು.ನಾವು ಅವತಿ ನಾಡಪ್ರಭು ಕೆಂಪೇಗೌಡ ವಂಶಸ್ಥರಾಗಿದ್ದು ಅನೇಕ ಪ್ರಾಂತ್ಯಗಳಲ್ಲಿ ನಮ್ಮ ಗೌಡ ಸಮುದಾಯವು ನಾನಾ ರೀತಿಯಲ್ಲಿ ತನ್ನದೆ ಆದ ಸಾಮಾಜಿಕ ಕೊಡುಗೆ ನೀಡಿದ್ದಾರೆ. ವಿಶ್ವದಲ್ಲಿಯೇ ಗುರುತಿನ ಚುಕ್ಕಿಯಾಗಿರುವ ಬೆಂಗಳೂರು ನಗರವನ್ನು ಕಟ್ಟಿದ ಮಹಾಪುರುಷ ಕೆಂಪೇಗೌಡ ಹೆಸರು ಅಜರಾಮರವಾಗಿ ಉಳಿಯುವ ಕೆಲಸವನ್ನು ಸರ್ಕಾರ ಮುಂದಿನ ದಿನಗಳಲ್ಲಿ ಮಾಡಲಿದೆ. ಈಗಾಗಲೇ ಕೆಐಎಎಲ್ನಲ್ಲಿ 108 ಅಡಿಗಳ ಪ್ರತಿಮೆ ಸ್ಥಾಪನೆ ಮಾಡಿರುವುದು ಹರ್ಷದ ವಿಚಾರ ಎಂದರು. ಬಿಎಂಆರ್ಡಿಎ ಮಾಜಿ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ಜಗತ್ತಿನಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಬೆಳವಣಿಗೆ ಹೊಂದುತ್ತಿರುವ ನಗರದಲ್ಲಿ ಬೆಂಗಳೂರು ಒಂದಾಗಿದೆ. ಇಂತಹ ನಗರವನ್ನು ಕ್ರಿಶ 1537 ಅಂದರೆ 500 ವರ್ಷಗಳ ಹಿಂದೆ ನಿರ್ಮಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದರು.ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತೇಗೌಡ, ತಹಸೀಲ್ದಾರ್ ಸೋಮಶೇಖರ್, ಡಿವೈಎಸ್ಪಿ ಮಲ್ಲೇಶಯ್ಯ, ಬಿಎಂಆರ್ಡಿಎ ಸದಸ್ಯರಾದ ಕೊರಳೂರು ಸುರೇಶ್, ಖಾಜಿ ಹೊಸಹಳ್ಳಿ ಶಿವಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಚಿಕ್ಕಹುಲ್ಲೂರು ಬಚ್ಚೇಗೌಡ, ತಾಪಂ ಮಾಜಿ ಅದ್ಯಕ್ಷ ಕೆಂಚೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ರಾಜ್ಗೊಪಾಲ್ ಇದ್ದರು.ಫೋಟೋ: 27 ಹೆಚ್ಎಸ್ಕೆ 6 ಹೊಸಕೋಟೆ ನಗರದಲ್ಲಿ ನಡೆದ 516ನೇ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ಸೇರಿದಂತೆ ಒಕ್ಕಲಿಗ ಸಮುದಾಯದ ಮುಖಂಡರು ಹಾಜರಿದ್ದರು.