ರಾಜ್ಯದಲ್ಲಿ ಬರ ಅಧ್ಯಯನ ಪ್ರಕ್ರಿಯೆ ಮುಂದುವರೆದಿದ್ದು ಈಗಾಗಲೇ ಘೋಷಿಸಿರುವ 101 ತಾಲೂಕುಗಳ ಜೊತೆಗೆ ಇನ್ನೂ 30ರಿಂದ 40ರಿಂದ 50 ತಾಲೂಕುಗಳು ಬರಪೀಡಿತ ವ್ಯಾಪ್ತಿಗೆ ಬರುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಘೋಷಿಸಲಾಗುವುದು

ಬೆಂಗಳೂರು : ರಾಜ್ಯದಲ್ಲಿ ಬರ ಅಧ್ಯಯನ ಪ್ರಕ್ರಿಯೆ ಮುಂದುವರೆದಿದ್ದು ಈಗಾಗಲೇ ಘೋಷಿಸಿರುವ 101 ತಾಲೂಕುಗಳ ಜೊತೆಗೆ ಇನ್ನೂ 30ರಿಂದ 40ರಿಂದ 50 ತಾಲೂಕುಗಳು ಬರಪೀಡಿತ ವ್ಯಾಪ್ತಿಗೆ ಬರುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಘೋಷಿಸಲಾಗುವುದು ಎಂದು ಉಪಮುಖ್ಯಮಂತ್ರಿ .ಜಿ.ಪರಮೇಶ್ವರ್‌ ಹೇಳಿದ್ದಾರೆ.

101 ತಾಲ್ಲೂಕುಗಳನ್ನು ಸದ್ಯ ಬರ ಪೀಡಿತ

ಕಂದಾಯ ಸಚಿವರೂ ಆದ ಅವರು ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ಬರ ಅಧ್ಯಯನ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಕೇಂದ್ರದ ಮಾನದಂಡಗಳ ಅನುಸಾರ ಇದುವರೆಗೆ 101 ತಾಲ್ಲೂಕುಗಳನ್ನು ಸದ್ಯ ಬರ ಪೀಡಿತ ಎಂದು ಘೋಷಿಸಲಾಗಿದೆ.

ಬರ ಅಧ್ಯಯನ ನಿರಂತರ ಪ್ರಕ್ರಿಯೆ

ಬರ ಅಧ್ಯಯನ ನಿರಂತರ ಪ್ರಕ್ರಿಯೆ ಆಗಿರುವುದರಿಂದ ಮುಂದಿನ ದಿನಗಳ ಅಧ್ಯಯನದಲ್ಲಿ ಇನ್ನೂ 30ರಿಂದ 40 ತಾಲ್ಲೂಕುಗಳು ಬರಪೀಡಿತ ವ್ಯಾಪ್ತಿಗೆ ಬರುವ ವ್ಯಾಪ್ತಿಗೆ ಬರುವ ಸಾಧ್ಯತೆ ಇದೆ. ಅಂತಿಮ ವರದಿಯಲ್ಲಿ ಘೋಷಿಸಲಾಗುವುದು. ಬಳಿಕ ಕೇಂದ್ರ ಸರ್ಕಾರಕ್ಕೆ ಸೂಕ್ತ ಬರ ಪರಿಹಾರ ಕೋರಿ ಬೇಡಿಕೆ ಸಲ್ಲಿಸಲಾಗುವುದು ಎಂದರು.