ಜನರು ಸಾಯುವುದಕ್ಕೂ ದುಡ್ಡು ಕೊಡವ ಪರಿಸ್ಥಿತಿ - ಸಂಪೂರ್ಣ ಭ್ರ​ಷ್ಟಾ​ಚಾ​ರ​ದಲ್ಲಿ ಮು​ಳುಗಿದ ‘ಕೈ’: ಸಚಿವ

| N/A | Published : Feb 27 2025, 09:59 AM IST

Prahlad Joshi

ಸಾರಾಂಶ

ಅ​ಭಿ​ವೃದ್ಧಿ ಹಾಗೂ ಗ್ಯಾ​ರಂಟಿ ಹೆ​ಸ​ರಿ​ನಲ್ಲಿ ಅ​ಧಿ​ಕಾ​ರಕ್ಕೆ ಬಂದಿ​ರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಭ್ರ​ಷ್ಟಾ​ಚಾ​ರ​ದಲ್ಲಿ ಮು​ಳುಗಿ ಹೋ​ಗಿದೆ. ಜ​ನರು ಸುಸೂ​ತ್ರ​ವಾಗಿ ಸಾ​ಯುವುದಕ್ಕೂ ದುಡ್ಡು ಕೊ​ಡ​ಬೇ​ಕಾದ ಪ​ರಿ​ಸ್ಥಿತಿ ನಿ​ರ್ಮಾ​ಣ​ವಾ​ಗಿದೆ ಎಂದು  ಪ್ರ​ಹ್ಲಾದ ಜೋಶಿ ಲೇ​ವಡಿ ಮಾ​ಡಿ​ದ​ರು.

 ಹು​ಬ್ಬ​ಳ್ಳಿ : ಅ​ಭಿ​ವೃದ್ಧಿ ಹಾಗೂ ಗ್ಯಾ​ರಂಟಿ ಹೆ​ಸ​ರಿ​ನಲ್ಲಿ ಅ​ಧಿ​ಕಾ​ರಕ್ಕೆ ಬಂದಿ​ರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಭ್ರ​ಷ್ಟಾ​ಚಾ​ರ​ದಲ್ಲಿ ಮು​ಳುಗಿ ಹೋ​ಗಿದೆ. ಜ​ನರು ಸುಸೂ​ತ್ರ​ವಾಗಿ ಸಾ​ಯುವುದಕ್ಕೂ ದುಡ್ಡು ಕೊ​ಡ​ಬೇ​ಕಾದ ಪ​ರಿ​ಸ್ಥಿತಿ ನಿ​ರ್ಮಾ​ಣ​ವಾ​ಗಿದೆ ಎಂದು ಕೇಂದ್ರ ಸ​ಚಿವ ಪ್ರ​ಹ್ಲಾದ ಜೋಶಿ ಲೇ​ವಡಿ ಮಾ​ಡಿ​ದ​ರು.

ಸು​ದ್ದಿ​ಗಾ​ರ​ರೊಂದಿಗೆ ಮಾ​ತ​ನಾ​ಡಿದ ಅ​ವರು, ರಾಜ್ಯ ಸರ್ಕಾರ ಗ್ಯಾ​ರಂಟಿ ಯೋ​ಜ​ನೆಯ ಹೆ​ಸ​ರಿ​ನಲ್ಲಿ ಜನರ ಜೀವನವನ್ನೇ ದುಬಾರಿ ಮಾಡಿದೆ. ಅ​ಗತ್ಯ ವ​ಸ್ತು​ಗಳು ಹಾಗೂ ವಿ​ದ್ಯುತ್‌ ಸೇ​ರಿ ಎಲ್ಲ ವಸ್ತಗಳ ದ​ರ ಏ​ರಿಕೆ ಮಾ​ಡುತ್ತಿದೆ. ರೈ​ತ​ರಿಗೆ ಸ​ಮ​ರ್ಪಕ ವಿ​ದ್ಯುತ್‌ ಪೂ​ರೈಕೆ ಸಹ ಮಾ​ಡು​ತ್ತಿಲ್ಲ ಎಂದು ಆ​ರೋ​ಪಿ​ಸಿ​ದ​ರು.

ಬೆಂಗಳೂರಿಗೆ ಅ​ಗ​ತ್ಯ​ವಿ​ರುವ ಮೂಲಭೂತ ಸೌಕರ್ಯ ಕಲ್ಪಿಸುವುದಕ್ಕೆ ಆಗಲ್ಲ ಅಂತ ಉಪಮುಖ್ಯಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ಹೇ​ಳಿಕೆ ನೀ​ಡಿ​ದ್ದಾರೆ. ಜ​ತೆಗೆ ಮೂಲಭೂತ ಸೌಕರ್ಯಗಳ ಬಗ್ಗೆ ಟ್ವೀಟ್‌ ಮಾಡಿದ ಉದ್ಯಮಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಅಪಮಾನ ಮಾಡಿದ್ದಾರೆ. ಉದ್ಯಮಿ ಮೋಹನ್‌ ದಾಸ್‌ ಪೈ ಟ್ವೀಟ್‌ಗೆ ಸ​ಚಿವ ಪ್ರಿಯಾಂಕ ಖರ್ಗೆ ಖಾರವಾಗಿ ಉತ್ತರಿಸಿದ್ದಾರೆ. ಪ್ರಿಯಾಂಕ್‌ ಖರ್ಗೆ ಅವರ ತಂದೆಯನ್ನು ನೋಡಿ ಕಲಿಯಬೇಕು. ಬಹಳ ದುರಹಂಕಾರಿ ವರ್ತನೆ ಸರಿ ಅಲ್ಲ ಎಂದು ಸ​ಚಿವ ಜೋಶಿ ಎ​ಚ್ಚ​ರಿ​ಸಿ​ದ್ದಾ​ರೆ.

ಬೆ​ಳ​ಗಾ​ವಿ​ಯಲ್ಲಿ ಕಂಡ​ಕ್ಟರ್‌ ಮೇಲೆ ನ​ಡೆದ ಹಲ್ಲೆ ಪ್ರ​ಕ​ರ​ಣ ಸಂಬಂಧ ಮಾತನಾಡಿ, ನೆ​ಪ​ದಲ್ಲಿ ಎ​ರಡೂ ರಾ​ಜ್ಯ​ಗಳ ಬಸ್‌ ಸಂಚಾರ ಸ್ಥ​ಗಿ​ತ​ಗೊ​ಳಿ​ಸು​ವುದು ಸ​ರಿ​ಯಲ್ಲ. ಇ​ದ​ರಿಂದ ಪ್ರ​ಯಾ​ಣಿ​ಕ​ರಿಗೆ ಬ​ಹ​ಳಷ್ಟು ಸ​ಮಸ್ಯೆಯಾಗುತ್ತಿದೆ. ಎರಡೂ ರಾಜ್ಯಗಳ ಸಂಘಟನೆಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಕಂಡಕ್ಟರ್‌ ಮೇಲಿ​ನ ಹಲ್ಲೆ ಪ್ರಕರಣ ಅಕ್ಷಮ್ಯ ಅಪರಾಧ. ಹಲ್ಲೆಕೋ​ರರ ಮೇಲೆ ಕಟ್ಟುನಿಟ್ಟಿನ ಕ್ರಮ ಆಗಬೇಕು. ಇ​ದಕ್ಕೆ ನಮ್ಮ ಬೆಂಬ​ಲ​ವಿ​ದೆ. ಆ​ದರೆ, ಅದೇ ಕಾ​ರ​ಣಕ್ಕೆ ಎ​ರಡೂ ರಾ​ಜ್ಯ​ಗಳ ಮಧ್ಯ ಬಸ್‌ ಸ್ಥ​ಗಿ​ತ​ಗೊ​ಳಿ​ಸು​ವುದು ಸ​ರಿ​ಯಲ್ಲ ಎಂದ​ರು.