ಸಾರಾಂಶ
ಉಡುಪಿಯ ಉದ್ಯಮಿ ನರಸಿಂಹ ಶೆಣೈ ಅವರ ಮನೆಯಲ್ಲಿ ಘರ್ ಘರ್ ಭಜನೆ ಕಾರ್ಯಕ್ರಮ ನಡೆಯಿತು. ಉಡುಪಿಯಲ್ಲಿ ಈಗಾಗಲೇ ಸುಮಾರು 140ಕ್ಕೂ ಹೆಚ್ಚಿನ ಮನೆಯಲ್ಲಿ ಭಜನೆ ಮಾಡಿ ಪ್ರಸಿದ್ಧವಾಗಿರುವ ‘ಘರ್ ಘರ್ ಭಜನಾ ಮಂಡಳಿ’ ವತಿಯಿಂದ ಭಜನೆ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಕಾಶೀಮಠಾಧಿಪತಿ ಸದ್ಗುರು ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಪಾದಂಗಳವರ ಜನ್ಮಶತಾಬ್ದಿ ಮಹೋತ್ಸವ ಆಚರಣೆ ಅಭಿಯಾನದ ಪ್ರಯುಕ್ತ (ಮನೆಮನೆ) ಘರ್ ಘರ್ ಭಜನೆ ಕಾರ್ಯಕ್ರಮ ಚೇಂಪಿ ರಾಮಚಂದ್ರ ಅನಂತ್ ಭಟ್ ಅವರ ಮಾರ್ಗದರ್ಶನದಲ್ಲಿ ಉಡುಪಿಯ ಉದ್ಯಮಿ ನರಸಿಂಹ ಶೆಣೈ ಅವರ ಮನೆಯಲ್ಲಿ ಭಾನುವಾರ ಸಂಜೆ ನಡೆಯಿತು.ಮನೆಯ ದೇವರ ಸನ್ನಿಧಿಯಲ್ಲಿ ರಾಮದಾಸ್ ಭಟ್ ಪ್ರಾರ್ಥನೆಗೈದು, ಶ್ರೀ ಲಕ್ಷ್ಮೀ ವೆಂಕಟೇಶ ಭಜನಾ ಮಂಡಳಿ ಅಧ್ಯಕ್ಷ ಸತೀಶ್ ಕಿಣಿ ಮತ್ತು ಆತಿಥೇಯ ನರಸಿಂಹ ಶೆಣೈ ದಂಪತಿ ದೀಪ ಪ್ರಜ್ವಲನ ಮಾಡಿ ಭಜನಾ ಸಂಕೀರ್ತನೆ ಚಾಲನೆ ನೀಡಿದರು.
ನಂತರ ಉಡುಪಿಯಲ್ಲಿ ಈಗಾಗಲೇ ಸುಮಾರು 140ಕ್ಕೂ ಹೆಚ್ಚಿನ ಮನೆಯಲ್ಲಿ ಭಜನೆ ಮಾಡಿ ಪ್ರಸಿದ್ಧವಾಗಿರುವ ‘ಘರ್ ಘರ್ ಭಜನಾ ಮಂಡಳಿ’ ವತಿಯಿಂದ ಭಜನೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಹಾರ್ಮೋನಿಯಂನಲ್ಲಿ ನಿತ್ಯಾನಂದ ನಾಯಕ್, ತಬಲಾದಲ್ಲಿ ಪುರಂದರ್ ಕಿಣಿ, ಅಚ್ಚುತ್ ಪೈ, ಭಜನೆಯಲ್ಲಿ ಜಯಂತ್ ನಾಯಕ್, ಶಾಂತಾರಾಮ ಪೈ, ಗಣಪತಿ ಶಾನಭೋಗ್, ರವೀಂದ್ರ ನಾಯಕ್, ದೇವದಾಸ್ ಕಾಮತ್ ಸಹಕರಿಸಿದರು. ಸಿಂಧೂ ಕಾಮತ್, ಸುಧೀಂದ್ರ ವಾಣಿಯನ್ನು ವಾಚಿಸಿದರು.