ಡಿಕೆಶಿ ಮೇಲಿನ ಸಿಬಿಐ ಪ್ರಕರಣ ವಾಪಸ್‌- ಸಚಿವ ಲಾಡ್‌ ಸಮರ್ಥನೆ

| Published : Nov 25 2023, 01:15 AM IST

ಡಿಕೆಶಿ ಮೇಲಿನ ಸಿಬಿಐ ಪ್ರಕರಣ ವಾಪಸ್‌- ಸಚಿವ ಲಾಡ್‌ ಸಮರ್ಥನೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಧಾರವಾಡಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಮೇಲಿನ ಸಿಬಿಐ ಪ್ರಕರಣ ವಾಪಸ್‌ ಪಡೆದಿರುವ ರಾಜ್ಯ ಸರ್ಕಾರದ ಪರ ನಿಲ್ಲುತ್ತೇನೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರಗಳಿಗೆ ಈ ರೀತಿಯ ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿದೆ. ಕ್ಯಾಬಿನೆಟ್‌ ಅಂದರೆ ಸರ್ಕಾರ ಇದ್ದಂತೆ. ಹೀಗಾಗಿ ಕ್ಯಾಬಿನೆಟ್‌ ನಿರ್ಣಯದ ಬಗ್ಗೆ ವಾದ-ವಿವಾದಗಳು ಸಾಮಾನ್ಯ. ಆದರೆ, ಸರ್ಕಾರ ತೆಗೆದುಕೊಂಡ ನಿರ್ಧಾರ ಅಂತಿಮ.

ಕನ್ನಡಪ್ರಭ ವಾರ್ತೆ ಧಾರವಾಡ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಮೇಲಿನ ಸಿಬಿಐ ಪ್ರಕರಣ ವಾಪಸ್‌ ಪಡೆದಿರುವ ರಾಜ್ಯ ಸರ್ಕಾರದ ಪರ ನಿಲ್ಲುತ್ತೇನೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರಗಳಿಗೆ ಈ ರೀತಿಯ ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿದೆ. ಕ್ಯಾಬಿನೆಟ್‌ ಅಂದರೆ ಸರ್ಕಾರ ಇದ್ದಂತೆ. ಹೀಗಾಗಿ ಕ್ಯಾಬಿನೆಟ್‌ ನಿರ್ಣಯದ ಬಗ್ಗೆ ವಾದ-ವಿವಾದಗಳು ಸಾಮಾನ್ಯ. ಆದರೆ, ಸರ್ಕಾರ ತೆಗೆದುಕೊಂಡ ನಿರ್ಧಾರ ಅಂತಿಮ. ಕಾನೂನಿನಡಿಯಲ್ಲಿ ಮೇಲ್ಮನವಿಗೆ ಹೋದರೆ ಹೋಗಬಹುದು ಎಂದ ಅವರು, ಇದಕ್ಕಾಗಿ ಸಂಪುಟ ಸಭೆಯಲ್ಲಿ ಡಿಕೆಶಿ ಒತ್ತಡ ಹೇರಿದ್ದಾರೆ ಎಂಬ ಆರೋಪಕ್ಕೆ ಎಲ್ಲರೂ ಸೇರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ನಾನು ಸಭೆಯಲ್ಲಿ ಇರಲಿಲ್ಲ. ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ಇದ್ದೇ. ಹೀಗಾಗಿ ಸಭೆಯ ನಿರ್ಣಯಗಳ ಬಗ್ಗೆ ಹೆಚ್ಚು ಮಾಹಿತಿ ಇಲ್ಲ ಎಂದರು ಸಂತೋಷ ಲಾಡ್‌.