ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಖ್ಯಾತ ಕೈಗಾರಿಕೋದ್ಯಮಿ ಹಾಗೂ ವಿಧಾನ ಪರಿಷತ್ತು ಸದಸ್ಯ ಎಸ್.ರುದ್ರೇಗೌಡ ಅವರ ಅಭಿನಂದನಾ ಕಾರ್ಯಕ್ರಮದ ಅಂಗವಾಗಿ ಜ.27ರಂದು ಪ್ಲೇಟ್ ಬ್ಯಾಂಕ್ನ್ನು ಅಭಿನಂದನಾ ಸಮಿತಿಯು ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘಕ್ಕೆ ಲೋಕಾರ್ಪಣೆಗೊಳಿಸಲಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಡಿ.ಜಿ. ಬೆನಕಪ್ಪ ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದ ಹಾಗೂ ಜಿಲ್ಲೆಯ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸವೇಶ್ವರ ವೀರಶೈವ ಸೇವಾ ಸಮಾಜ, ಎಸ್.ರುದ್ರೇಗೌಡರ ಅಭಿನಂದನಾ ಸಮಿತಿ, ರುದ್ರೇಗೌಡರ ಅಭಿಮಾನಿ ಬಳಗದ ಸಹಯೋಗದಲ್ಲಿ ಈ ಯೋಜನೆಯನ್ನು ಬೆಂಗಳೂರಿನ ಅದಮ್ಯ ಚೇತನ ಫೌಂಡೇಷನ್ನ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಲೋಕಾರ್ಪಣೆ ಮಾಡಲಿದ್ದಾರೆ. ಸಾರ್ವಜನಿಕರು ಹಮ್ಮಿಕೊಳ್ಳುವ ಯಾವುದೇ ಸಭೆ, ಸಮಾರಂಭ ಇತರೆ ಕಾರ್ಯಗಳಲ್ಲಿ ಪ್ಲಾಸ್ಟಿಕ್, ಪೇಪರ್ ತಟ್ಟೆಗಳನ್ನು ಬಳಸದೇ ಶೂನ್ಯ ತ್ಯಾಜ್ಯ ಪದ್ಧತಿ ಪ್ರೋತ್ಸಾಹಿಸುವುದು ಇದರ ಉದ್ದೇಶ ಎಂದರು.
ಪ್ಲೇಟ್ ಬಳಕೆಯಿಂದ ಕನಿಷ್ಠ ಶೇ.25ರಷ್ಟು ಘನತ್ಯಾಜ್ಯ ಕಡಿಮೆ ಮಾಡಬಹುದು. ಈ ನಿಟ್ಟಿನಲ್ಲಿ ಪ್ಲೇಟ್ ಸಹಕಾರಿಯಾಗಲಿದೆ. 4000 ಸಾವಿರ ಊಟದ ಸ್ಟೀಲ್ ತಟ್ಟೆ, 2000 ಸಾವಿರ ಲೋಟ, ಟೀ ಮತ್ತು ಕಾಫಿ ಕಪ್ಗಳು ಹಾಗೂ ಚಮಚಗಳು ಪ್ಲೇಟ್ ಬ್ಯಾಂಕ್ನಲ್ಲಿ ಲಭ್ಯವಿರುತ್ತದೆ. ಅಗತ್ಯ ಸಂದರ್ಭಗಳಲ್ಲಿ ಎಲ್ಲರೂ ಉಪಯೋಗವನ್ನು ಪಡೆದುಕೊಳ್ಳಬಹುದು ಎಂದರು.ನಗರದ ನೆಹರೂ ರಸ್ತೆಯ ಶ್ರೀ ಬಸವೇಶ್ವರ ಸಮಾಜಕ್ಕೆ ಪ್ಲೇಟ್ ಬ್ಯಾಂಕನ್ನು ಹಸ್ತಾಂತರ ಮಾಡಿದ ನಂತರ ಸಮಾಜವು ಅದರ ನಿರ್ವಹಣೆ ಮಾಡಲಿದೆ. ಸ್ಟೀಲ್ ಪರಿಕರಗಳು ಅಗತ್ಯವಿದ್ದಲ್ಲಿ ಮುಂಗಡವಾಗಿ ಹಣವನ್ನು ಕಾಯ್ದಿರಿಸಿ, ವಸ್ತುಗಳನ್ನು ವಾಪಾಸು ಕೊಟ್ಟ ನಂತರ ಹಣವನ್ನು ನೀಡಲಾಗುತ್ತದೆ. ಈ ಸೇವೆ ಸಂಪೂರ್ಣ ಉಚಿತವಾಗಿದ್ದು, ಡಿಶ್ ವಾಷರ್ ಕೊಡಲಾಗುತ್ತದೆ. ಇದೊಂದು ಮಾದರಿಯ ಕಾರ್ಯವಾಗಿದೆ ಎಂದರು.ಉಳಿದೆಲ್ಲವೂ ಭೂಮಿಯನ್ನು ಸೇರುತ್ತಿದೆ. ಹೀಗೆ ಭೂಮಿಗೆಸೆಯುವ ಪ್ಲಾಸಿಕ್ ಗಾಳಿ, ನೀರು ಹಾಗೂ ಆಹಾರದ ಮೂಲಕ ಕಣಗಳ ರೂಪದಲ್ಲಿ ಮನುಷ್ಯನ ದೇಹವನ್ನು ಗೊತ್ತಿಲ್ಲದ ಹಾಗೆ ಸೇರಿಕೊಳ್ಳುತ್ತಿದೆ. ಒಬ್ಬ ಮನುಷ್ಯ ಒಂದು ವರ್ಷಕ್ಕೆ ಏನಿಲ್ಲವೆಂದರೂ ಒಂದು ಎಟಿಎಂ ಕಾರ್ಡ್ಷ್ಟು ಪ್ಲಾಸ್ಟಿಕ್ ನ್ನು ಸೇವಿಸುತ್ತಿದ್ದಾನೆ. ಮನುಷ್ಯನ ನಿಷ್ಕಾಳಜಿಯಿಂದಾಗಿ ಕುಡಿಯುವ ನೀರು, ಗಾಳಿ, ಮಣ್ಣು ಎಲ್ಲವೂ ಕುಲುಷಿತಗೊಳ್ಳುತ್ತಿದೆ. ಶಿವಮೊಗ್ಗ ನಗರವೊಂದರಿಂದಲೇ ಅನುಪಿನಕಟ್ಟೆ ತ್ಯಾಜ್ಯ ವಿಲೇ ಘಟಕ್ಕೆ ಪ್ರತಿ ದಿನ 161 ಮೆಟ್ರಿಕ್ ಟನ್ ತ್ಯಾಜ್ಯವಿಲೇ ಆಗುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆ, ಬೆಳೆಯುತ್ತಿರುವ ಪಟ್ಟಣ, ನಗರ ಹಾಗೂ ಮಹಾನಗರ ಪ್ರದೇಶಗಳಲ್ಲಿ ತ್ಯಾಜ್ಯ ಹೆಚ್ಚುತ್ತಲೇ ಇದೆ, ವಿಲೇವಾರಿಯೂ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಉದ್ಯಮಿ ರುದ್ರೇಶ್, ಉದ್ಯಮಿ ಬಾಳೆಕಾಯಿ ಮೋಹನ್ , ಬಳ್ಳೆಕೆರೆ ಸಂತೋಷ್ , ಓಪನ್ ಮೈಂಡ್ಸ್ ಸ್ಕೂಲ್ ನ ಕಿರಣ್ ಕುಮಾರ್ ಕೆ.ಮತ್ತಿತರರು ಹಾಜರಿದ್ದರು.- - - ಬಾಕ್ಸ್ ಪ್ಲೇಟ್ ಬ್ಯಾಂಕ್ ಪ್ರಯೋಜನ ಪಡೆಯಿರಿಮಹಾನಗರ ಮುಂಬೈನಲ್ಲಿ ಪ್ರತಿ ದಿನಕ್ಕೆ 7,5000 ಟನ್, ದೆಹಲಿಯಲ್ಲಿ ಪ್ರತಿದಿನ 11332 ಟನ್ ಘನತ್ಯಾಜ್ಯ ಉತ್ಪಾದನೆಯಾದರೆ, ಇದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೇ 689.8 ಟನ್ ಉತ್ಪಾದನೆಯಗುತ್ತಿದೆ. ಇದು ಭಾರತದ ಮೆಟ್ರೋಪಾಲಿಟನ್ ನಗರಗಳಲ್ಲಿ ಅತ್ಯಧಿಕ. ಹಾಗೆಯೇ ಕೋಲ್ಕತ್ತಾ ಮತ್ತು ಚೆನ್ನೈ 429.5 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಮಹಾನಗರಗಳಲ್ಲಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹ ಆಗುತ್ತಿರುವುದು ಸಮರ್ಪಕ ವಿಲೇವಾರಿಗೆ ಸಮಸ್ಯೆಯಾದರೆ, ಮತ್ತೊಂದೆಡೆ ಪರಿಸರ ಹಾಗೂ ಜನರ ಆರೋಗ್ಯದ ಮೇಲೂ ದುಷ್ಪರಿಣಾಮವನ್ನು ಬೀರುತ್ತಿದೆ. ಪ್ಲೇಟ್ ಬ್ಯಾಂಕ್ನಂತಹ ಯೋಜನೆ ಪರಿಸ್ನೇಹಿಯಾಗಲಿದೆ. ಇದರ ಲಾಭವನ್ನು ಅಗತ್ಯ ಇದ್ದವರು ಪಡೆದುಕೊಳ್ಳಬಹುದು ಎಂದು ಬೆನಕಪ್ಪ ತಿಳಿಸಿದರು.
- - -