ಮಲೆನಾಡಲ್ಲಿ ಮುಂದುವರಿದ ಮಳೆ

| Published : May 17 2024, 12:37 AM IST

ಸಾರಾಂಶ

ಚಿಕ್ಕಮಗಳೂರು: ಶೃಂಗೇರಿ, ಮೂಡಿಗೆರೆ ಸೇರಿದಂತೆ ಮಲೆನಾಡಿನ ಕೆಲವೆಡೆ ಗುಡುಗು ಸಹಿತ ಗುರುವಾರವೂ ಮಳೆ ಮುಂದುವರಿದಿತ್ತು.

ಚಿಕ್ಕಮಗಳೂರು: ಶೃಂಗೇರಿ, ಮೂಡಿಗೆರೆ ಸೇರಿದಂತೆ ಮಲೆನಾಡಿನ ಕೆಲವೆಡೆ ಗುಡುಗು ಸಹಿತ ಗುರುವಾರವೂ ಮಳೆ ಮುಂದುವರಿದಿತ್ತು.

ತರೀಕೆರೆ, ಅಜ್ಜಂಪುರ ಹಾಗೂ ಕಡೂರು ತಾಲೂಕಿನಲ್ಲಿ ಸಂಜೆ ವರೆಗೆ ಮಳೆ ಬಂದಿರಲಿಲ್ಲ, ನಂತರ ಮೋಡ ಕವಿದ ವಾತಾವರಣ ಮುಂದುವರಿದಿತ್ತು. ಚಿಕ್ಕಮಗಳೂರು ನಗರದಲ್ಲಿ ಸಂಜೆ ವೇಳೆಗೆ ತುಂತುರು ಮಳೆ ಬಂದು ನಂತರ ಬಿಡುವು ನೀಡಿತು. ಆದರೆ, ಮುತ್ತೋಡಿ ಸುತ್ತಮುತ್ತ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಭಾರೀ ಮಳೆ ಯಾಗಿದೆ, ಮೂಡಿಗೆರೆ ತಾಲೂಕಿನಲ್ಲಿ ಸಂಜೆ 4 ಗಂಟೆಗೆ ಆರಂಭವಾದ ಮಳೆ 6 ಗಂಟೆವರೆಗೆ ಸಾಧಾರಣವಾಗಿ ಬಂದಿತು. ಗುಡುಗು ಮತ್ತು ಮಿಂಚಿನ ಆರ್ಭಟ ಜೋರಾಗಿತ್ತು. ಕೊಪ್ಪ ಪಟ್ಟಣದಲ್ಲಿ ಮಳೆ ಬರಲಿಲ್ಲ, ಆದರೆ, ಜಯಪುರ, ಹರಿಹರಪುರ ಸೇರಿದಂತೆ ಹಲವೆಡೆ ಮಳೆ ಬಂದಿದೆ.

ಎನ್‌.ಆರ್‌. ಪುರ ಪಟ್ಟಣದಲ್ಲಿ ಮಳೆ ಇರಲಿಲ್ಲ, ಬಾಳೆಹೊನ್ನೂರು, ಸಂಗಮೇಶ್ವರ ಪೇಟೆ, ಖಾಂಡ್ಯ, ಕಣತಿ ಭಾಗದಲ್ಲಿ ಮಳೆ ಬಂದಿತು. ಶೃಂಗೇರಿಯಲ್ಲಿ ಮಧ್ಯಾಹ್ನ 3.30ಕ್ಕೆ ಆರಂಭವಾದ ಮಳೆ ರಾತ್ರಿ 8 ಗಂಟೆಯವರೆಗೆ ಮುಂದುವರೆದಿತ್ತು. ಗುಡುಗು ಸಹಿತ ಭಾರೀ ಮಳೆ ಬಂದಿದೆ.