ಪಾಲಿಕೆ ಆಯುಕ್ತರ ವರ್ಗಾವಣೆಗೆ ಗುತ್ತಿಗೆದಾರರ ಖಂಡನೆ

| N/A | Published : Jun 20 2025, 12:35 AM IST / Updated: Jun 20 2025, 12:15 PM IST

ಪಾಲಿಕೆ ಆಯುಕ್ತರ ವರ್ಗಾವಣೆಗೆ ಗುತ್ತಿಗೆದಾರರ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

  ರು​ದ್ರೇಶ ಘಾಳಿ ಅ​ವರ ವ​ರ್ಗಾ​ವಣೆ ಆ​ದೇ​ಶ​ವನ್ನು ತಡೆ ಹಿ​ಡಿ​ಯು​ವಂತೆ ಹಾಗೂ ಹಾಲಿ ಸ್ಥ​ಳ​ದ​ಲ್ಲಿಯೇ ಅ​ವ​ರನ್ನು ಮುಂದು​ವ​ರೆ​ಸು​ವಂತೆ ಆ​ಗ್ರ​ಹಿಸಿ ಹು-ಧಾ ಮ​ಹಾ​ನ​ಗರ ಪಾ​ಲಿಕೆ ಗು​ತ್ತಿ​ಗೆ​ದಾ​ರರ ಸಂಘದ ಸ​ದ​ಸ್ಯರು ಗು​ರು​ವಾರ ಇ​ಲ್ಲಿನ ಪಾ​ಲಿಕೆ ಕ​ಚೇರಿ ಎ​ದುರು ಪ್ರ​ತಿ​ಭ​ಟನೆ

ಹುಬ್ಬಳ್ಳಿ: ಹು-ಧಾ ಮ​ಹಾ​ನ​ಗರ ಪಾ​ಲಿಕೆ ಆ​ಯುಕ್ತ ರು​ದ್ರೇಶ ಘಾಳಿ ಅ​ವರ ವ​ರ್ಗಾ​ವಣೆ ಆ​ದೇ​ಶ​ವನ್ನು ತಡೆ ಹಿ​ಡಿ​ಯು​ವಂತೆ ಹಾಗೂ ಹಾಲಿ ಸ್ಥ​ಳ​ದ​ಲ್ಲಿಯೇ ಅ​ವ​ರನ್ನು ಮುಂದು​ವ​ರೆ​ಸು​ವಂತೆ ಆ​ಗ್ರ​ಹಿಸಿ ಹು-ಧಾ ಮ​ಹಾ​ನ​ಗರ ಪಾ​ಲಿಕೆ ಗು​ತ್ತಿ​ಗೆ​ದಾ​ರರ ಸಂಘದ ಸ​ದ​ಸ್ಯರು ಗು​ರು​ವಾರ ಇ​ಲ್ಲಿನ ಪಾ​ಲಿಕೆ ಕ​ಚೇರಿ ಎ​ದುರು ಪ್ರ​ತಿ​ಭ​ಟನೆ ನ​ಡೆ​ಸಿ​ದ​ರು.

ಅ​ವಳಿ ನ​ಗ​ರ​ದಲ್ಲಿ ಹ​ಲ​ವಾರು ವ​ರ್ಷ​ಗ​ಳಿಂದ ಸ​ಮ​ಸ್ಯೆ​ಯಾ​ಗಿಯೇ ಉ​ಳಿ​ದಿ​ರುವ ಅ​ನೇಕ ಸಮ​ಸ್ಯೆ​ಗ​ಳನ್ನು ಪಾ​ಲಿಕೆ ಆ​ಯುಕ್ತ ರು​ದ್ರೇಶ ಘಾ​ಳಿ​ಯ​ವರು ಹಂತ-ಹಂತ​ವಾಗಿ ಪ​ರಿ​ಹ​ರಿ​ಸುತ್ತಾ ಬಂದಿ​ದ್ದಾರೆ. ಆ​ಯು​ಕ್ತರ ಶ್ರ​ಮದ ಫ​ಲ​ವಾಗಿ ಪಾ​ಲಿ​ಕೆಯ ಆ​ರ್ಥಿಕ ಪ​ರಿ​ಸ್ಥಿ​ತಿಯೂ ಸಹ ಸು​ಧಾ​ರ​ಣೆ​ಯತ್ತ ಸಾ​ಗು​ತ್ತಿದೆ. ಅ​ವರ ಸೇ​ವಾ​ವಧಿ ಇನ್ನೂ ಒಂದೂ​ವರೆ ವರ್ಷ ಬಾಕಿ ಇ​ರು​ವಾ​ಗ​ಲೇ, ಅ​ವ​ರನ್ನು ಬೇರೆ ಇ​ಲಾ​ಖೆಗೆ ವ​ರ್ಗಾ​ವಣೆ ಮಾ​ಡು​ತ್ತಿ​ರು​ವ ಸ​ರ್ಕಾ​ರದ ಕ್ರಮ ಖಂಡ​ನೀಯ ಎಂದು ಪ್ರ​ತಿ​ಭ​ಟ​ನಾ​ಕಾ​ರರು ಆ​ಕ್ರೋಶ ವ್ಯ​ಕ್ತ​ಪ​ಡಿ​ಸಿ​ದ​ರು.

ಜ​ನ​ಪ್ರ​ತಿ​ನಿ​ಧಿ​ಗಳು ಹಾಗೂ ಪ್ರ​ಭಾ​ವಿ​ಗಳ ಒ​ತ್ತ​ಡಕ್ಕೆ ಮ​ಣಿ​ಯದೇ, ದಿಟ್ಟಕ್ರ​ಮ​ಗ​ಳನ್ನು ಕೈ​ಗೊ​ಳ್ಳುತ್ತಾ ಬಂದಿ​ರುವ, ದಕ್ಷ ಹಾಗೂ ಪ್ರಾ​ಮಾ​ಣಿ​ಕ​ತೆಗೆ ಹೆ​ಸ​ರಾ​ಗಿ​ರುವ ಘಾ​ಳಿ​ಯ​ವ​ರನ್ನು ಸ​ರ್ಕಾರ ಪ್ರ​ಭಾ​ವಿ​ಗಳ ಒ​ತ್ತ​ಡಕ್ಕೆ ಮ​ಣಿದು, ವ​ರ್ಗಾಣೆ ಮಾ​ಡಿ​ರು​ವುದು ಸ​ರಿ​ಯಾದ ಕ್ರ​ಮ​ವ​ಲ್ಲ. ಹಿಂದಿನ ಆ​ಯು​ಕ್ತರು ಪಾ​ಲಿಕೆ ಗು​ತ್ತಿ​ಗೆ​ದಾ​ರರ ಬಿಲ್‌ ಪಾ​ವತಿ ಮಾ​ಡದೇ, ಅ​ನ್ಯಾಯ ಮಾ​ಡುತ್ತಾ ಬಂದಿ​ದ್ದರು. ಅ​ದರ ಪ​ರಿ​ಣಾಮ ಅ​ನೇಕ ಗು​ತ್ತಿ​ಗೆ​ದಾ​ರರು ಆ​ತ್ಮ​ಹ​ತ್ಯೆ ಮಾ​ಡಿ​ಕೊ​ಳ್ಳುವ ಹಂತಕ್ಕೆ ಬಂದಿ​ದ್ದ​ರು. ಆ​ದರೆ, ಘಾ​ಳಿ​ಯ​ವರ ಅ​ಧಿ​ಕಾ​ರಾ​ವ​ಧಿ​ಯಲ್ಲಿ ಗು​ತ್ತಿ​ಗೆ​ದಾ​ರ​ರಿಗೆ ನ್ಯಾಯ ಒ​ದ​ಗಿ​ಸುವ ಕೆ​ಲಸ ಮಾ​ಡಿ​ದ್ದಾರೆ. ಜ​ತೆಗೆ ಪೌ​ರ​ಕಾ​ರ್ಮಿ​ಕರು, ಪಾ​ಲಿಕೆ ಸಿ​ಬ್ಬಂದಿ​ಗ​ಳಿಗೆ ಸ​ಕಾ​ಲಕ್ಕೆ ವೇ​ತನ ಹಾಗೂ ಇ​ತರೆ ಸೇವಾ ಸೌ​ಲಭ್ಯ ಕ​ಲ್ಪಿ​ಸುವಲ್ಲಿ ಶ್ರ​ಮಿ​ಸಿ​ದ್ದಾರೆ. ಕೂ​ಡಲೇ ಸ​ರ​ಕಾರ ತನ್ನ ಆ​ದೇ​ಶ​ವನ್ನು ರ​ದ್ದು​ಗೊ​ಳಿ​ಸುವ ಮೂ​ಲಕ, ಪುನಃ ಘಾ​ಳಿ​ಯ​ವ​ರನ್ನು ಪಾ​ಲಿಕೆ ಆ​ಯು​ಕ್ತ​ರ​ನ್ನಾಗಿ ಕ​ನಿಷ್ಠ 2 ವರ್ಷ ಮುಂದು​ವ​ರೆ​ಸ​ಬೇಕು ಎಂದು ಆ​ಗ್ರ​ಹಿ​ಸಿ​ದ​ರು.

ಒಂದು ವೇಳೆ ಸ​ರ್ಕಾರ ಗು​ತ್ತಿ​ಗೆ​ದಾ​ರರ ಮ​ನ​ವಿ​ಯನ್ನು ಪ​ರಿ​ಗ​ಣಿ​ಸದೇ ಹೋ​ದಲ್ಲಿ ಸ​ದ್ಯ​ದ​ಲ್ಲಿಯೇ ಹು​ಬ್ಬ​ಳ್ಳಿಯ ಸ್ಟೇ​ಶನ್‌ ರ​ಸ್ತೆಯ ಡಾ.​ಬಾ​ಬಾ​ಸಾ​ಹೇಬ್‌ ಅಂಬೇ​ಡ್ಕರ್‌ ಪು​ತ್ಥ​ಳಿ​ಯಿಂದ ಧಾ​ರ​ವಾಡ ಜಿ​ಲ್ಲಾ​ಧಿ​ಕಾರಿ ಕ​ಚೇ​ರಿ​ಯ ​ವ​ರೆಗೆ ಬೃ​ಹತ್‌ ಪ್ರ​ತಿ​ಭ​ಟನೆ ನ​ಡೆ​ಸ​ಲಾ​ಗು​ವುದು ಎಂದು ಎ​ಚ್ಚ​ರಿ​ಸಿ​ದ​ರು.

ಈ ವೇಳೆ ಸಂಘದ ಅ​ಧ್ಯಕ್ಷ ಮೋ​ಹನ ಜಿ. ​ಗೌ​ಡರ, ಪ್ರ​ಧಾನ ಕಾ​ರ್ಯ​ದರ್ಶಿ ಪಂಪಣ್ಣ ಐ.ಎ, ಉ​ಪಾ​ಧ್ಯಕ್ಷ ವಾ​ಸಿಮ್‌ ಸ​ನದಿ, ಮ​ದನ ಪಂಚ​ಪುತ್ರ, ಪ್ರ​ಶಾಂತ ಅ​ಣ್ಣಿ​ಗೇರಿ, ವಿ​ವೇ​ಕಾ​ನಂದ ಭೋವಿ, ಶಂಕರ ಬೋ​ಜ​ಗಾ​ರ, ​ಜಾ​ವಿದ್‌ ಕೊ​ಪ್ಪಳ, ಶ​ಶಿ​ಧರ ಚಟ್ನಿ, ಇ​ಜಾಜಿ ಬೇ​ಪಾರಿ ಸೇ​ರಿ​ದಂತೆ ಅ​ನೇ​ಕ​ರಿ​ದ್ದ​ರು.

Read more Articles on