ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರತೀವ್ರ ಕುತೂಹಲ ಕೆರಳಿಸಿದ್ದ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ೧೨ ನಿರ್ದೇಶಕರ ಸ್ಥಾನಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಬ್ಯಾಂಕ್ನ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ೧೨ ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. ಈ ಮೊದಲೇ ೬ ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ಮಾಡಲಾಗಿತ್ತು. ಒಟ್ಟು ೧೨ ಕ್ಷೇತ್ರಗಳಲ್ಲಿ ೪ ಕ್ಷೇತ್ರಗಳ ಫಲಿತಾಂಶಕ್ಕೆ ಕೋರ್ಟ್ ತಡೆ ನೀಡಿದೆ.ಬ್ಯಾಂಕಿನ ಕಾರ್ಯವ್ಯಾಪ್ತಿಗೆ ಬರುವ ಇನ್ನಿತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಗೋವಿಂದಗೌಡರು ೨೯ ಮತ ಪಡೆದರೆ, ಶಾಸಕ ಕೆ.ವೈ.ನಂಜೇಗೌಡರ ಆಪ್ತ ಬಿ.ಆರ್.ಶ್ರೀನಿವಾಸ್ ೧೭ ಮತ ಪಡೆದು ಹೀನಾಯ ಸೋಲು ಅನುಭವಿಸಿದ್ದಾರೆ. ವಿಜೇತ ಅಭ್ಯರ್ಥಿಗಳು: ಬಂಗಾರಪೇಟೆ ತಾಲೂಕು ಕೃಷಿಪತ್ತಿನ ಸಹಕಾರ ಸಂಘಗಳಿಂದ ಕೆ.ಎನ್.ರಂಗನಾಥಾಚಾರಿ, ಮುಳಬಾಗಿಲು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಅಭ್ಯರ್ಥಿ ವಿ.ರಘುಪತಿರೆಡ್ಡಿ, ಶ್ರೀನಿವಾಸಪುರ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಸ್ಪರ್ಧಿಸಿದ್ದ ಎ.ಸಿ.ನಾಗರತ್ನ, ಗುಡಿಬಂಡೆ ತಾಲ್ಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಲ್ಲಿ ೫ ಮತ ಪಡೆದ ಹೆಚ್.ಎನ್.ಮಂಜುನಾಥರೆಡ್ಡಿ, ಗೌರಿಬಿದನೂರು ಮತಕ್ಷೇತ್ರದಲ್ಲಿ ಕೆ.ಎನ್.ವೆಂಕಟರಾಮರೆಡ್ಡಿ, ಚೇಳೂರು ತಾಲೂಕಿನಲ್ಲಿ ಸ್ಪರ್ಧೆಗಿಳಿದಿದ್ದ ಕೆ.ವಿ.ಭಾಸ್ಕರರೆಡ್ಡಿ, ಕೋಲಾರ ಜಿಲ್ಲೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಹೆಚ್.ವಿ.ವಿನೋದ್ ಕುಮಾರ್ ಜ.ಗಳಿಸಿದ್ದಾರೆ.
ತಡೆಹಿಡಿದ ಫಲಿತಾಂಶಉಳಿದಂತೆ ಕೋಲಾರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಎಂ.ಆನಂದ್ ಕುಮಾರ್ ೬ ಮತ ಪಡೆದಿದ್ದು, ಪ್ರತಿಸ್ಪರ್ಧಿ ಕೆ.ಎಂ.ಮುನಿರಾಜ ೫ ಮತ ಪಡೆದಿದ್ದು, ಹೈಕೋರ್ಟ್ ನಿರ್ದೇಶನದಂತೆ ಫಲಿತಾಂಶ ಪ್ರಕಟಿಸಿಲ್ಲ.
ಚಿಂತಾಮಣಿ ತಾಲೂಕಿನಿಂದ ಸದರಿ ಕ್ಷೇತ್ರದಲ್ಲಿ ಎನ್.ನಾಗಿರೆಡ್ಡಿ ೮ ಮತ ಪಡೆದಿದ್ದು, ಜಿ.ಚಂದ್ರಾರೆಡ್ಡಿ ೬ ಮತ ಪಡೆದಿದ್ದರೂ, ಉಚ್ಯ ನ್ಯಾಯಾಲಯದ ಆದೇಶದಂತೆ ಫಲಿತಾಂಶ ತಡೆಹಿಡಿಯಲಾಗಿದೆ.ಚಿಕ್ಕಬಳ್ಳಾಪುರ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಲ್ಲಿ ಪಿ.ಎನ್.ಮುನೇಗೌಡ ೮ ಮತ ಪಡೆದಿದ್ದು, ಎಂ.ಎನ್.ಕೃಷ್ಣಮೂರ್ತಿ ೭ ಮತ ಪಡೆದಿದ್ದು ಈ ಕ್ಷೇತ್ರದ ಫಲಿತಾಂಶ ಹೈಕೋರ್ಟ್ ನಿರ್ದೇಶನದಂತೆ ಕಾಯ್ದಿರಿಸಲಾಗಿದೆ.ಚಿಕ್ಕಬಳ್ಳಾಪುರ ಜಿಲ್ಲೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಲ್ಲಿ ಹೆಚ್.ಎಸ್.ಮೋಹನ್ ರೆಡ್ಡಿ ೮೦ ಮತ ಪಡೆದಿದ್ದು, ಎಂ.ರಾಮಯ್ಯ ೬೫ ಮತ ಪಡೆದಿದ್ದು, ಈ ಕ್ಷೇತ್ರದ ಚುನಾವಣೆ ಫಲಿತಾಂಶವನ್ನು ಹೈಕೋರ್ಟ್ ನಿರ್ದೇಶನದಂತೆ ತಡೆಹಿಡಿಯಲಾಗಿದೆ.