ಉಡುಪಿಯಲ್ಲಿ ಧಮ್ಮದೀಕ್ಷಾ ದಿನಾಚರಣೆ

| Published : Oct 16 2025, 02:01 AM IST

ಸಾರಾಂಶ

ಧಮ್ಮದೀಕ್ಷಾ ದಿನಾಚರಣೆ ಪ್ರಯುಕ್ತ ವಿಶೇಷ ಬುದ್ಧವಂದನೆ, ಧ್ಯಾನ, ಮೈತ್ರಿ ಧ್ಯಾನ ಕಾರ್ಯಕ್ರಮಗಳು ಜರುಗಿತು. ನಂತರ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಂತಹ ಅಂಬೇಡ್ಕರ್ ಅನುಯಾಯಿಗಳು ಬೌದ್ಧಧಮ್ಮ ಧೀಕ್ಷೆಯನ್ನು ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಹಾವಂಜೆಯ ಬೋಧಿಸತ್ವ ಬುದ್ಧ ಫೌಂಡೇಶನ್ ವತಿಯಿಂದ ಬುದ್ಧ ವಿಹಾರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಧಮ್ಮದೀಕ್ಷಾ ದಿನಾಚರಣೆ ಕಾರ್ಯಕ್ರಮ ನಡೆಯಿತು.ಈ ಪ್ರಯುಕ್ತ ವಿಶೇಷ ಬುದ್ಧವಂದನೆ, ಧ್ಯಾನ, ಮೈತ್ರಿ ಧ್ಯಾನ ಕಾರ್ಯಕ್ರಮಗಳು ಜರುಗಿತು. ನಂತರ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಂತಹ ಅಂಬೇಡ್ಕರ್ ಅನುಯಾಯಿಗಳು ಬೌದ್ಧಧಮ್ಮ ಧೀಕ್ಷೆಯನ್ನು ಸ್ವೀಕರಿಸಿದರು.ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಬೋಧಿಸತ್ವ ಬುದ್ಧ ಫೌಂಡೇಶನ್‌ನ ಅಧ್ಯಕ್ಷ ಶೇಖರ್ ಹಾವಂಜೆ, ಉಡುಪಿ ಜಿಲ್ಲೆಯಲ್ಲಿ ಬೌದ್ಧ ಧಮ್ಮದೀಕ್ಷೆ ಸ್ವೀಕರಿಸಿದ ಐತಿಹಾಸಿಕ ದಿನ ಇದಾಗಿದೆ. ಇದು ಉಡುಪಿ ಜಿಲ್ಲೆಯ ಮಟ್ಟಿಗೆ ಹೆಮ್ಮೆಯ ವಿಚಾರ. ಬೌದ್ಧ ಧರ್ಮವನ್ನು ಹಾಗೂ‌ ಬಾಬಾ ಸಾಹೇಬರನ್ನು ಅರಿತುಕೊಂಡವರಿಗೆ ಮಾತ್ರ ಇದು ಸಾಧ್ಯ. ಇಂದು ದೀಕ್ಷೆ ಸ್ವೀಕರಿಸಿದವರು ಮುಂದಿನ ದಿನಗಳಲ್ಲಿ ಇಡೀ‌ ಜಿಲ್ಲೆಗೆ ಧಮ್ಮದ ಮಹತ್ವವನ್ನು ತಿಳಿಸುವ ಮಹಾನ್ ವ್ಯಕ್ತಿಗಳಾಗಲಿ ಎಂದು ಹಾರೈಸಿದರು.ಕಾರ್ಯಕ್ರಮದಲ್ಲಿ ಹಿರಿಯ ಧಮ್ಮಾಚಾರಿಗಳಾದ ಮಂಗಳೂರಿನ ಎಸ್.ಆರ್. ಲಕ್ಷ್ಮಣ್, ಉಡುಪಿಯ ಶಂಭು ಸುವರ್ಣ ಕೊಡವೂರು, ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದದ ಜಿಲ್ಲಾ ಸಂಘಟನಾ ಸಂಚಾಲಕ ಗೋಪಾಲ್ ಶಿವಪುರ, ಹಿರಿಯ ಉಪನ್ಯಾಸಕ ವಿಠಲ್ ಸಾಲಿಕೇರಿ, ಶಿಕ್ಷಕಿ ರವಿಕಲಾ ಎಸ್.ಕೆ., ಸುಜಾತ ಎಸ್. ಹಾವಂಜೆ, ಅನಿಲ್ ಫರ್ನಾಂಡಿಸ್ ಬಾರ್ಕೂರು, ಪ್ರಭಾಕರ್ ಮೆಸ್ತಾ ಆಗಮಿಸಿದ್ದರು. ಜಯಶೀಲಾ ಬಿ. ರೋಟೆ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಪೃಥ್ವಿ ಒಳಗುಡ್ಡೆ ವಂದಿಸಿದರು.