ತತ್ವಪದಕಾರರಿಂದ ಮೌಲ್ಯಯುತ ವಿಚಾರಗಳ ಪ್ರಸಾರ: ಶಾವಂತಗೇರಾ ಅಭಿಮತ

| Published : Oct 27 2024, 02:03 AM IST

ತತ್ವಪದಕಾರರಿಂದ ಮೌಲ್ಯಯುತ ವಿಚಾರಗಳ ಪ್ರಸಾರ: ಶಾವಂತಗೇರಾ ಅಭಿಮತ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರಿನ ನಂದಿನಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ತತ್ವಪದಕಾರರ ಕುರಿತು ಮಾಸಿಕ ಉಪನ್ಯಾಸ ಕಾರ್ಯಕ್ರಮವನ್ನು ಆಹಾರ ಇಲಾಖೆಯ ಉಪನಿರ್ದೇಶಕ ಕೃಷ್ಣ ಶಾವಂತಗೇರಾ ಚಾಲನೆ ನೀಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ತತ್ವ ಎಂದರೆ ಮೌಲ್ಯಯುತವಾದ ವಿಚಾರಗಳನ್ನು ವಿಸ್ತ್ರತ ರೂಪದಲ್ಲಿ ಪದಗಳ ಮೂಲಕ ರಚನೆ ಮಾಡಿ ಜನರಿಗೆ ತಲುಪಿಸುವಂತಹ ಮಹತ್ವದ ಕಾರ್ಯವನ್ನು ತತ್ವಪದಕಾರರಿಂದ ನಡೆಸುತ್ತಿದ್ದರು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಕೃಷ್ಣ ಶಾವಂತಗೇರಾ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ನಂದಿನಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಡಾ.ನರಸಿಂಹಲು ನಂದಿನಿ ಸ್ಮಾರಕ ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಲಿಂಗೈಕ್ಯ ಸಾತ್ವಿರಮ್ಮ ಗುರುಲಿಂಗಪ್ಪ ಸಾವಳಗಿ ದತ್ತಿ ಮತ್ತು ಚೆನ್ನಪ್ಪ ಸ್ಮಾರಕ ದತ್ತಿ ಪ್ರಶಸ್ತಿ ಪ್ರದಾನ ಹಾಗೂ ತತ್ವಪದಕಾರರ ಕುರಿತು ಮೂರನೇ ಮಾಸಿಕ ಉಪನ್ಯಾಸ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಲುಷಿತ ವಾತಾವರಣದಲ್ಲಿ ಹಾಗೂ ವಿಷಮ ಪರಿಸ್ಥಿತಿಯಲ್ಲಿ ಕನ್ನಡತನ ಮತ್ತು ನಮ್ಮತನವನ್ನು ಉಳಿಸಿಕೊಳ್ಳಲು, ನಾವು ನಂಬಿರುವಂತಹ ತತ್ವಗಳು ಮೌಲ್ಯಯುತವಾದ ಚಿಂತನೆ ಮಾಡಬೇಕು.

ವಿಶೇಷವಾಗಿ ಪ್ರಶಿಕ್ಷಣಾರ್ಥಿಗಳು ಶಿಕ್ಷಕರಾದವರು ಶಿಕ್ಷಣ ಮಾಧ್ಯಮದಲ್ಲಿ ಹೊಸ ಹೊಸ ವಿಚಾರಗಳನ್ನು ಮೌಲ್ಯಗಳನ್ನು ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ವಿದ್ಯಾರ್ಥಿಗಳಿಗೆ ತಿಳಿ ಪಡಿಸುವ ಮೂಲಕ ಹೊಸ ಮನ್ವಂತರಕ್ಕೆ ನಾಂದಿ ಹಾಡಬೇಕು. ಆದರ್ಶ ಶಿಕ್ಷಕರಾಗಿ ವಿದ್ಯಾರ್ಥಿಗಳ ಪಾಲಿನ ದೈವವಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಶಿವಯ್ಯ ಹಿರೇಮಠ ಅವರು ಮಾತನಾಡಿ, ಭಾಷೆ ಮತ್ತು ಶಿಕ್ಷಣ ಕುರಿತು ಮಾತನಾಡುತ್ತಾ ಕನ್ನಡ ಭಾಷೆಗೆ ಸರಿಸುಮಾರು ೨ಸಾವಿರ ವಷಯಗಳ ಇತಿಹಾಸವನ್ನು ಹೊಂದಿದೆ ಎಂದು ಹೇಳಿದರು.

ನವೋದಯ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಧರ್ಮಾವತಿ ಎಸ್.ನಾಯಕ ಮಾತನಾಡಿ, ಅರಿವಿನ ಮೌಲ್ಯವನ್ನು ಮನಮುಟ್ಟುವಂತೆ ತಿಳಿಯ ಪಡಿಸುವುದೇ ತತ್ವಪದ. ಸಂತ ಶಿಶುನಾಳ ಶರೀಫ ಕಡಕೋಳ ಮಡಿವಾಳಪ್ಪ ಹಾಗೆ ರಮಾನಂದ ಶರಣರು ತಮ್ಮ ತತ್ವಪದಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ಓರೆಕೋರೆಗಳನ್ನು ತಿದ್ದುವಂತಹ ಕೆಲಸವನ್ನು ತತ್ವಪದಗಳ ಮೂಲಕ ಅರಿವಿನ ಜ್ಞಾನದ ಮೂಲಕ ಉಣಬಡಿಸಿದವರು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲ್ಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಮಾತನಾಡಿ, ನಮ್ಮಲ್ಲಿ ಅಹಂಕಾರ ಸ್ವೆಚ್ಛಾಚಾರ ಇರಬಾರದು. ವಿದ್ಯಾರ್ಥಿಗಳ ವೈಯೋಮಾನಕ್ಕೆ ಅನುಗುಣವಾಗಿ ದತ್ತಿ ಉಪನ್ಯಾಸವನ್ನು ಮಾಡಿ ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವನ್ನು ನೀಗಿಸುವಂತಹ ಕಾರ್ಯವನ್ನು ಪರಿಷತ್ತು ಮಾಡುತ್ತಿದೆ ಎಂದು ವಿವರಿಸಿದರು.

ದಿನ್ನಿಯ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರಾದ ಎಂ.ಗಿರಿಯಪ್ಪ ಮತ್ತು ಮಲಿಯಾಬಾದಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪುಷ್ಪ್ಪಲತಾ ಅವರಿಗೆ ಚೆನ್ನಪ್ಪ ಸ್ಮಾರಕ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಅಲಿಷಾ ಜೋಸೆಫ್, ಕಸಾಪ ಕೋಶಾಧ್ಯಕ್ಷರಾದ ವಿಜಯ ರಾಜೇಂದ್ರ, ಮಲ್ಲೇಶ್ ನಾಯಕ ಹಾಗೂ ಮತ್ತಿತರರಿದ್ದರು.