ಸ್ವಾತಂತ್ರ್ಯೋತ್ಸವ - ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ : ಡಾ.ಚೂಂತಾರು, ಎಸಿಪಿ ರವೀಶ್ ನಾಯ್ಕ ಆಯ್ಕೆ

| Published : Aug 15 2024, 01:50 AM IST / Updated: Aug 15 2024, 01:22 PM IST

Police
ಸ್ವಾತಂತ್ರ್ಯೋತ್ಸವ - ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ : ಡಾ.ಚೂಂತಾರು, ಎಸಿಪಿ ರವೀಶ್ ನಾಯ್ಕ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವದಲ್ಲಿ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ ಸ್ವೀಕರಿಸಲಿದ್ದಾರೆ.

 ಮಂಗಳೂರು :  ದ.ಕ. ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು ಹಾಗೂ ಮಂಗಳೂರು ನಗರ ಸಿಸಿಆರ್‌ಬಿ ಎಸಿಪಿ ರವೀಶ್ ನಾಯ್ಕ ಅವರು ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕಕ್ಕೆ ಆಯ್ಕೆಯಾಗಿದ್ದಾರೆ.

ವೃತ್ತಿಯಲ್ಲಿ ದಂತ ವೈದ್ಯರಾಗಿರುವ ಡಾ.ಚೂಂತಾರು ಅವರು ಕಳೆದ ಒಂಬತ್ತುವರೆ ವರ್ಷದಿಂದ ದ.ಕ. ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾಗಿದ್ದಾರೆ. ಎಸಿಪಿ ರವೀಶ್ ನಾಯ್ಕ ಅವರು 2001ರಲ್ಲಿ ಪಿಎಸ್‌ಐ ಆಗಿ ಸೇವೆಗೆ ಸೇರ್ಪಡೆಗೊಂಡು ವಿಜಯಪುರದಲ್ಲಿ ಕರ್ತವ್ಯ ಆರಂಭಿಸಿದ್ದರು.

 ಇನ್ಸ್‌ಪೆಕ್ಟರ್ ಆಗಿ ಕಲಬುರಗಿ ಮತ್ತು ಯಾದಗಿರಿಯಲ್ಲಿ ಕರ್ತವ್ಯ ಸಲ್ಲಿಸಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ, ಇಮಿಗ್ರೇಷನ್, ಸಿಎಸ್‌ಪಿ ಉಡುಪಿ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದರು.ಬೆಂಗಳೂರಿನಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವದಲ್ಲಿ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ ಸ್ವೀಕರಿಸಲಿದ್ದಾರೆ.