ಉಡುಪಿ: ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ನಿರ್ದೇಶನದಂತೆ ಹಾಗೂ ಕರ್ನಾಟಕ ರಾಜ್ಯ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಸಂಘದ ಉಡುಪಿ ಜಿಲ್ಲಾ ಶಾಖೆಯು ಮೇ 2ರಂದು ದೇಶಾದ್ಯಂತ ಔಷಧಿ ಅಂಗಡಿಗಳನ್ನು ಬಂದ್ ಮಾಡಿ ಮುಷ್ಕರ ಹಮ್ಮಿಕೊಳ್ಳುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಅವರಿಗೆ ಮನವಿ ನೀಡಿ, ತಮ್ಮ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲು ಸರ್ಕಾರವನ್ನು ಒತ್ತಾಯಿಸಲಾಯಿತು.

ಔಷಧಿಗಳ ಆನ್ಲೈನ್ ಮಾರಾಟವನ್ನು ನಿಲ್ಲಿಸಬೇಕು, ಔಷಧಿ ಕಂಪನಿಗಳಿಂದ ಅತಿಯಾದ ರಿಯಾಯಿತಿ ನೀಡುವುದನ್ನು ನಿಲ್ಲಿಸಬೇಕು, ನಕಲಿ ಔಷಧಿಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಸೂಕ್ತ ಕ್ರಮ ಕ್ಕೆಗೊಳ್ಳಬೇಕು ಎಂಬ ಬೇಡಿಕೆಗಳಿರುವ ಮನವಿಯನ್ನು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಅಧ್ಯಕ್ಷ ಅಮ್ಮುಂಜೆ ರಮೇಶ ನಾಯಕ್, ಕಾರ್ಯದರ್ಶಿ ಸುಬ್ರಹ್ಮಣ್ಯ ರಾವ್ ಯು, ಕೋಶಾಧಿಕಾರಿ ಗುರುಕೃಪಾ ವಿ. ರಾವ್, ಕಾರ್ಯಕಾರಿ ಸದಸ್ಯರಾದ ವಿ. ಜಿ. ಶೆಟ್ಟಿ, ಮಧುಸೂದನ ಹೇರೂರು ಮತ್ತು ಸುನೀತಾ ಮಧುಸೂಧನ ಉಪಸ್ಥಿತರಿದ್ದರು