ಸಾರಾಂಶ
ಕೊಪ್ಪಳ ತಾಲೂಕು ಕೆಡಿಪಿ ಸದಸ್ಯೆ ಹೇಳಿಕೆ, ಗ್ಯಾರಂಟಿ ಯೋಜನೆ ಸಮಿತಿ ಸಭೆ
ಕನ್ನಡಪ್ರಭ ವಾರ್ತೆ ಕೊಪ್ಪಳಗ್ಯಾರಂಟಿ ಯೋಜನೆಗಳು ಬಡವರ್ಗದ ಜನರ ಬದುಕು ಹಸನು ಮಾಡಿವೆ ಎಂದು ತಾಲೂಕು ಕೆಡಿಪಿ ಸದಸ್ಯೆ ನಾಗರತ್ನಾ ಪೂಜಾರ ಹೇಳಿದರು.
ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಜರುಗಿದ ಗ್ಯಾರಂಟಿ ಯೋಜನೆ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಭರವಸೆಯಂತೆ ೫ ಗ್ಯಾರಂಟಿ ಯೋಜನೆಗಳು ಜಾರಿಗೆ ತರುವ ಮೂಲಕ ರಾಜ್ಯದ ಬಡ ಜನತೆಯ ಬಾಳು ಹಸನಾಗಿಸಿದೆ ಎಂದು ಹೇಳಿದರು.ಜನರ ಕಲ್ಯಾಣಕ್ಕಾಗಿ ಅನುಷ್ಠಾನಗೊಂಡ ಗ್ಯಾರಂಟಿ ಯೋಜನೆಗಳನ್ನು ಮುಂಬರುವ ದಿನಗಳಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರು ಜನರ ಮನೆ ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಬರುವ ಲೋಕಸಭಾ ಚುನಾವಣೆಗೆ ವಿಷೇಶವಾಗಿ ಮಹಿಳೆಯರು ಜನರ ಬಳಿ ಮತಯಾಚನೆ ಮಾಡಬೇಕು. ಕಾಂಗ್ರೆಸ್ ಸರ್ಕಾರ ಜನಪರ ಸರ್ಕಾರವಾಗಿದ್ದು, ಜನರ ಕಲ್ಯಾಣವೆ ಇದರ ಗುರಿಯಾಗಿದೆ. ಈಗಾಗಲೇ ಕೇಂದ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಬಂದರೆ ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ನಾರಿ ನ್ಯಾಯ ಗ್ಯಾರಂಟಿ, ಮಹಾಲಕ್ಷ್ಮೀ ಯೋಜನೆ, ಪ್ರತಿ ಮಹಿಳೆಗೆ ವರ್ಷಕ್ಕೆ ₹೧ ಲಕ್ಷ, ದೇಶದ ಅರ್ಧ ಜನಸಂಖ್ಯೆಯ ಸಂಪೂರ್ಣ ಹಕ್ಕು, ಸ್ತ್ರೀ ಶಕ್ತಿಗೆ ಗೌರವ, ಅಧಿಕಾರದಲ್ಲಿ ಮೈತ್ರಿ, ದೇಶದಲ್ಲಿ ಸಾವಿತ್ರಿ ಬಾಯಿ ಪುಲೆ ವಸತಿ ನಿಲಯ ನಿರ್ಮಾಣ ಹಾಗೂ ಇನ್ನಿತರ ಯೋಜನೆಗಳು ಮಹಿಳೆಯರ ಸಬಲೀಕರಣಕ್ಕಾಗಿ ಅನುಷ್ಠಾನಗೊಳಿಸಲು ನಿಶ್ಚಿತವಾಗಿದೆ. ಇದರಿಂದ ಮಹಿಳೆಯರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಾಲಚಂದ್ರನ್, ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ ಪಾಷಾ ಪಲ್ಟನ್, ಯುವ ಕಾಂಗ್ರೆಸ್ ನಾಯಕ ಸೋಮಶೇಖರ ಹಿಟ್ನಾಳ, ಚಾಮದ್ ಪಾಷಾ ಕಿಲ್ಲೆದಾರ, ಜ್ಯೋತಿ ಗೊಂಡಬಾಳ, ಈರಣ್ಣ ಹುಲಗಿ, ವಿಜಯಕುಮಾರ ಹುಲಗಿ, ಮಾನ್ವಿ ಪಾಷಾ, ಉಮಾ ಪಾಟೀಲ್, ಅರುಣ ಅಪ್ಪು ಶೆಟ್ಟಿ, ರೇಷ್ಮಾ ಬೇಗಂ, ಕಾವೇರಿ ರ್ಯಾಗಿ, ಪದ್ಮಾವತಿ ಕಂಬಳಿ, ಅಜ್ಜಪ್ಪ ಸ್ವಾಮಿ, ದೇವರಾಜ, ಸವಿತ ಗೋರಂಟ್ಲಿ ಇನ್ನಿತರರಿದ್ದರು.