ಸಾರಾಂಶ
ನಷ್ಟದ ನೆಪ ಹೇಳಿ ಹಾಲು ಉತ್ಪಾದಕರಿಗೆ ದರ ಕಡಿತ ಮಾಡಿದ್ದ ಹಾವೇರಿ ಹಾಲು ಒಕ್ಕೂಟ (ಹಾವೆಮುಲ್) ಕೊನೆಗೂ ಲೀಟರ್ಗೆ ₹4 ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಹಾವೇರಿ : ನಷ್ಟದ ನೆಪ ಹೇಳಿ ಹಾಲು ಉತ್ಪಾದಕರಿಗೆ ದರ ಕಡಿತ ಮಾಡಿದ್ದ ಹಾವೇರಿ ಹಾಲು ಒಕ್ಕೂಟ (ಹಾವೆಮುಲ್) ಕೊನೆಗೂ ಲೀಟರ್ಗೆ ₹4 ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಸರ್ಕಾರ ₹4 ಹೆಚ್ಚಳ ಮಾಡಿದ್ದರೂ ಒಕ್ಕೂಟ, ಹಾಲು ಉತ್ಪಾದಕರಿಗೆ ಕೊಡುವ ದರದಲ್ಲಿ ₹3.50 ಕಡಿತಗೊಳಿಸಿ, ನಂತರ ಕೇವಲ 50 ಪೈಸೆ ಹೆಚ್ಚಿಸುವ ಮೂಲಕ ರೈತರ ಕೆಂಗಣ್ಣಿಗೆ ಗುರಿಯಾಗಿತ್ತು. ಬಳಿಕ ಎಚ್ಚೆತ್ತ ಒಕ್ಕೂಟ ₹2.50 ಹೆಚ್ಚಿಸಿತ್ತು. ಆದರೆ, ಸಂಪೂರ್ಣವಾಗಿ ₹4 ಹೆಚ್ಚಿಸುವಂತೆ ರೈತ ಸಂಘ ಪ್ರತಿಭಟನೆ ನಡೆಸಿತ್ತು.
ಈ ವಿಷಯ ಸಿಎಂವರೆಗೆ ತಲುಪಿತ್ತು. ₹4 ಸಂಪೂರ್ಣವಾಗಿ ರೈತರಿಗೆ ಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಒಕ್ಕೂಟ ಮತ್ತೆ ₹2.50ನಿಂದ ಸಂಪೂರ್ಣವಾಗಿ ₹4 ದರ ಹೆಚ್ಚಿಸಿ ಆದೇಶಿಸಿದೆ. ಈ ಮೂಲಕ ಸದ್ಯ ಆಕಳ ಹಾಲಿಗೆ ₹35.55 ಹಾಗೂ ಎಮ್ಮೆ ಹಾಲಿಗೆ ₹48.05 ದರ ರೈತರಿಗೆ ಸಿಗಲಿದೆ.