ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಬಾದ್
ಪ್ರತಿಯೊಬ್ಬರು ತಮ್ಮ ಆರೋಗ್ಯ ಮತ್ತು ದೇಹದ ಸದೃಢತೆಯನ್ನು ಕಾಪಾಡಿಕೊಳ್ಳಲು ಕ್ರೀಡೆಯ ಬಹು ಮುಖ್ಯ ಪಾತ್ರ ವಹಿಸುತ್ತದೆ, ಪ್ರತಿಯೊಬ್ಬರು ದಿನನಿತ್ಯ ಕ್ರೀಡೆಯನ್ನು ಆಡಬೇಕು, ವಿದ್ಯಾರ್ಥಿಗಳು ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಯಿಂದ ಕ್ರೀಡೆಯನ್ನು ಆಡಬೇಕು ಎಂದು ತಾಲೂಕು ತಹಸೀಲ್ದಾರ್ ಜಗದೀಶ ಚೌರ್ ಸಲಹೆ ನೀಡಿದರು.ನಗರದ ಬಾಲ ವಿದ್ಯಾ ಮಂದಿರ ಶಾಲೆಯ ಮೈದಾನದಲ್ಲಿ ಐದು ದಿನಗಳ ಕಾಲ ನಡೆಯುವ ಶಹಾಬಾದ ವಲಯ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.
ಯೋಗ ಮತ್ತು ಕ್ರೀಡೆಯಿಂದ ಜೀವನದದಲ್ಲಿ ಸದೃಢ ವ್ಯಕ್ತಿಗಾಳಾಗಿ ಬೆಳೆಯಬಹುದು. ಜೀವನದಲ್ಲಿಯ ಉದ್ದೇಶ ಈಡೇರಿಸಿಕೊಳ್ಳಲು ಆರೋಗ್ಯವಂತ ಮನಸ್ಸು ಮತ್ತು ಶರೀರದ ಅವಶ್ಯಕತೆ ಇದೆ. ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಕ್ರೀಡೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು. ಕಾಡ ಅಧ್ಯಕ್ಷರಾದ ಡಾ. ಎಂ.ಎ ರಶೀದ್ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಚಾಲನೆ ನೀಡಿದರು.ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಚನ್ನಬಸಪ್ಪ ಕೊಲ್ಲೂರ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ದೈಹಿಕ ಶಿಕ್ಷಣ ತುಂಬಾ ಅಗತ್ಯವಾಗಿದೆ. ದೈಹಿಕ ಮಾನಸಿಕವಾಗಿ ಅವರು ಸದೃಢರಾಗಲು ದೈಹಿಕ ಶಿಕ್ಷಣ ಅತ್ಯವಶ್ಯಕವಾಗಿ ಬೇಕು. ಆದರೆ ಸರ್ಕಾರ 17 ವರ್ಷದಿಂದ ದೈಹಿಕ ಶಿಕ್ಷಕರ ನೇಮಕಾತಿ ಮಾಡಿಕೊಳ್ಳದೆ ಇರುವುದು ನೋವಿನ ಸಂಗತಿ ಎಂದರು. ದೈಹಿಕ ಶಿಕ್ಷಕರು ಇಲ್ಲದೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕಗಳು ಪಡೆಯುವುದು ಹೀಗೆ ಎಂದು ಕಳವಳ ವ್ಯಕ್ತಪಡಿಸಿದರು.
ಚಿತ್ತಾಪೂರ ಬಿಆರ್ಸಿ ಮಲ್ಲಿಕಾರ್ಜುನ್ ಸೇಡಂ, ಶಿವಶರಣಪ್ಪ ಮಠಾಳೆ, ಬಸವರಾಜ ಬಳ್ಳೋಡಗಿ, ಚಿದಾನಂದ ಕುಡ್ಡನ, ಶಿವಪುತ್ರಪ್ಪ ಕರಣಿಕ, ಬಿವಿಎಮ್ ಶಾಲೆಯ ಮುಖ್ಯಗುರು ಗಂಗಾಧರಪ್ಪ, ಎಎಸ್ಐ ಶ್ರೀಕಾಂತ ನಾಯಕ, ಗಜಾನನ ಕಾಕರೇ, ಸಂತೋಷ ಸಲಗಾರ, ರತನರಾಜ ಕೋಬಾಳಕರ್, ಈರಣ್ಣ ಕೆಂಬಾವಿ, ಎಚ್. ವೈ .ರೆಡ್ಡಿ, ಸಿದ್ದಲಿಂಗ ಬುಳ್ಳ, ಪ್ರವೀಣ್ ಹೇರೂರ ಈರಣ್ಣ ಕೊಲ್ಲೂರ, ವೆಂಕಟೇಶ ಚಿನ್ನೂರ, ಮಾಹಾದೇವ ನಾಟೀಕಾರ, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.ಈ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಒಟ್ಟು 29 ಶಾಲೆಯಿಂದ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳ ತಂಡಗಳು ಮತ್ತು ಶಿಕ್ಷಕರು ಆಗಮಿಸಿದ್ದರು, ದೈಹಿಕ ಶಿಕ್ಷಕರಾದ ಬನ್ನಪ್ಪ ಸೈದಾಪುರ ಕಾರ್ಯಕ್ರಮವನ್ನು ನಿರ್ವಹಿಸಿದ್ದರು..ಕ್ರೀಡಾ ಪಟುಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಿ, ಕ್ರೀಡಾಕೂಟ ಯಶಸ್ವಿ ಮಾಡಿಕೊಡಬೇಕು. ನಿರ್ಣಾಯಕರು ಹೇಳಿದ ತೀರ್ಪಿಗೆ ಬದ್ಧರಾಗಿ ಎಲ್ಲರೂ ಪ್ರತಿಯೊಬ್ಬರಿಗೆ ಸಹಕರಿಸಬೇಕು.
– ಮಲ್ಲಿಕಾರ್ಜುನ ಸೇಡಂ, ಬಿಆರ್ಪಿ