ಕಡೋಲಿಯಲ್ಲಿ ಮಳೆಗೆ ಕುಸಿದ ಮನೆ

| Published : Jul 26 2024, 01:46 AM IST

ಸಾರಾಂಶ

ಬೆಳಗಾವಿ ತಾಲೂಕಿನ ಕಡೋಲಿಯಲ್ಲಿ ಧಾರಾಕಾರ ಸುರಿಯುತ್ತಿರುವ ಮಳೆಗೆ ಹಳೆ ಮನೆಯೊಂದು ಭಾಗಶಃ ಕುಸಿದುಬಿದ್ದಿದೆ.

ಬೆಳಗಾವಿ: ಬೆಳಗಾವಿ ತಾಲೂಕಿನ ಕಡೋಲಿಯಲ್ಲಿ ಧಾರಾಕಾರ ಸುರಿಯುತ್ತಿರುವ ಮಳೆಗೆ ಹಳೆ ಮನೆಯೊಂದು ಭಾಗಶಃ ಕುಸಿದುಬಿದ್ದಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಾಗಿಲ್ಲ.ಪತ್ರಕರ್ತ ಸುನೀಲ ಶಂಕರ ಪಾಟೀಲ ಎಂಬುವರಿಗೆ ಸೇರಿದ ಮನೆಯೇ ಹಾನಿಗೀಡಾಗಿದೆ. ಪಾಟೀಲ ಕುಟುಂಬದ ಸದಸ್ಯರು ಬುಧವಾರ ರಾತ್ರಿ ಊಟ ಮಾಡುತ್ತಿದ್ದ ವೇಳೆ ಮನೆ ಗೋಡೆ ಕುಸಿದು ಬೀಳುತ್ತಿರುವ ಮಾಹಿತಿಯನ್ನು ನೆರೆ ಹೊರೆಯವರು ನೀಡಿದ್ದಾರೆ.ಕೂಡಲೇ ಕುಟುಂಬದ ಸದಸ್ಯರೆಲ್ಲರೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ. ಗುರುವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣಾಬಾಯಿ ಭಂಡಾರಿ, ಗ್ರಾಮ ಲೆಕ್ಕಾಧಿಕಾರಿ ಆರೀಫ್‌ ಮುಲ್ಲಾ, ಪಂಚಾಯತಿ ಅಧ್ಯಕ್ಷ ಸಾಗರ ಪಾಟೀಲ, ಪಂಚಾಯಿತಿ ಸದಸ್ಯರಾದ ರಾಜು ಮಾಯಣ್ಣ, ಪ್ರೇಮಾ ನರೋಟಿ ಮತ್ತಿತರರು ಭೇಟಿ ನೀಡಿ, ಪರಿಶಿಲಿಸಿದರು.