ಹುಕ್ಕೇರಿ ಹಿರೇಮಠದ ದಸರಾ ಉತ್ಸವಕ್ಕೆ ಡಿಸಿಎಂಗೆ ಆಹ್ವಾನ

| Published : Oct 06 2023, 01:22 AM IST

ಹುಕ್ಕೇರಿ ಹಿರೇಮಠದ ದಸರಾ ಉತ್ಸವಕ್ಕೆ ಡಿಸಿಎಂಗೆ ಆಹ್ವಾನ
Share this Article
  • FB
  • TW
  • Linkdin
  • Email

ಸಾರಾಂಶ

ಹುಕ್ಕೇರಿ ಹಿರೇಮಠದ ದಸರಾ ಉತ್ಸವಕ್ಕೆ ಡಿಸಿಎಂ ಡಿಕೆಶಿಗೆ ಆಹ್ವಾನ
ಕನ್ನಡಪ್ರಭ ವಾರ್ತೆ ಹುಕ್ಕೇರಿ ಬೆಂಗಳೂರಿನ ಸ್ವಗೃಹದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಭೇಟಿ ಮಾಡಿ ಹಿರೇಮಠದ ದಸರಾ ಉತ್ಸವಕ್ಕೆ ಆಹ್ವಾನ ನೀಡಿದರು. ಅ.15 ರಿಂದ 24ರವರೆಗೆ ದಸರಾ ಉತ್ಸವ ಜರುಗಲಿದೆ. ಉತ್ಸವ ಸಮಿತಿ ಈ ವರ್ಷದ ರೇಣುಕ ಶ್ರೀ ಪ್ರಶಸ್ತಿಗೆ ಡಾ.ಕರಿಬಸವ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಆಯ್ಕೆ ಮಾಡಿದೆ. ರಾಜ್ಯ, ಹೊರರಾಜ್ಯ ಮತ್ತು ಹೊರದೇಶದ ಶ್ರೀಮಠದ ಭಕ್ತರು ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ತಾವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳಿಗೆ ಪ್ರಶಸ್ತಿ ಪ್ರದಾನ ಮಾಡಬೇಕು ಎಂದು ಶ್ರೀಗಳು ಆಹ್ವಾನಿಸಿದರು. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ ಮಾತನಾಡಿ, ಮೈಸೂರು ಮಾದರಿಯಲ್ಲಿ ನಡೆಯುವ ಹುಕ್ಕೇರಿ ದಸರಾ ಉತ್ಸವಕ್ಕೆ ಆಹ್ವಾನಿಸಿದ್ದು ನನ್ನ ಭಾಗ್ಯ. ತಪ್ಪದೇ ಬರುವುದಾಗಿ ಭರವಸೆ ನೀಡಿದರು. ಈ ವೇಳೆ ಶಾಸಕ ಅಶೋಕ ಪಟ್ಟಣ, ಶಶಿಕಲಾ ಜೊಲ್ಲೆ, ಆನಂದ ಗಡ್ಡದೇವರಮಠ, ಶೀತಲ ಬ್ಯಾಳಿ, ಸುರೇಶ ಜಿನರಾಳಿ, ಚನ್ನಪ್ಪಾ ಗಜಬರ ಮತ್ತಿತರರು ಉಪಸ್ಥಿತರಿದ್ದರು.