ಸಾರಾಂಶ
ಅಮೆರಿಕನ್ ಸಾಮ್ರಾಜ್ಯಶಾಹಿಗಳು ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿ ಇರಾನ್ ಮೇಲೆ ನಡೆಸಿರುವ ಮಿಲಿಟರಿ ದಾಳಿ ಸರಿಯಲ್ಲ. ಅದೇ ರೀತಿ ಪ್ಯಾಲಿಸ್ಟೈನ್ ಮೇಲೆ ಇಸ್ರೇಲ್ ದಾಳಿ ಮಾಡಿ ಅಲ್ಲಿನ ಸಾಮಾನ್ಯ ಜನ ಮಕ್ಕಳು ಮಹಿಳೆಯರೆನ್ನದೆ ಕೊಲೆ ಮಾಡಿದೆ.
ಧಾರವಾಡ: ಅಮೆರಿಕ ಹಾಗೂ ಇಸ್ರೇಲ್ ಸಾಮ್ರಾಜ್ಯ ಶಾಹಿಗಳಿಂದ ಇರಾನ್ ಹಾಗೂ ಪ್ಯಾಲೆಸ್ಟೈನ್ ಮೇಲಿನ ಮಿಲಿಟರಿ ದಾಳಿ ಖಂಡಿಸಿ ಎಸ್.ಯು.ಸಿ.ಐ(ಸಿ), ಸಿಪಿಐ(ಎಂ) ಹಾಗೂ ಸಿಪಿಐ ಪಕ್ಷಗಳಿಂದ ಮಂಗಳವಾರ ಇಲ್ಲಿಯ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.
ಅಮೆರಿಕನ್ ಸಾಮ್ರಾಜ್ಯಶಾಹಿಗಳು ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿ ಇರಾನ್ ಮೇಲೆ ನಡೆಸಿರುವ ಮಿಲಿಟರಿ ದಾಳಿ ಸರಿಯಲ್ಲ. ಅದೇ ರೀತಿ ಪ್ಯಾಲಿಸ್ಟೈನ್ ಮೇಲೆ ಇಸ್ರೇಲ್ ದಾಳಿ ಮಾಡಿ ಅಲ್ಲಿನ ಸಾಮಾನ್ಯ ಜನ ಮಕ್ಕಳು ಮಹಿಳೆಯರೆನ್ನದೆ ಕೊಲೆ ಮಾಡಿದೆ. ಅಮೆರಿಕಾ ಮೊದಲು ಮಧ್ಯಪ್ರಾಚ್ಯದಲ್ಲಿ ತಮ್ಮ ಮುಂಚೂಣಿ ಕಚೇರಿಯಾದ ಝಿಯೋನಿಸ್ಟ್ ಇಸ್ರೇಲ್ಗೆ ಸಹಾಯ ಮಾಡಿ, ಪ್ರಚೋದಿಸಿ, ಗಾಜಾದಲ್ಲಿ ಲಕ್ಷಾಂತರ ನಿರಪರಾಧಿಗಳಾದ ಪ್ಯಾಲೆಸ್ಟೀನಿಯರನ್ನು ಕೊಂದು ಸಾಮೂಹಿಕ ನರಮೇಧವನ್ನು ಆಯೋಜಿಸಿದರು.ಈಗ ಇರಾನ್ ತಮ್ಮ ಆದೇಶಗಳಿಗೆ ಬಗ್ಗುವಂತೆ ಮಾಡಲು, ತಮ್ಮ ಪ್ರಾಬಲ್ಯವನ್ನು ವಿಸ್ತರಿಸಲು ಮತ್ತು ಮಧ್ಯಪ್ರಾಚ್ಯದಲ್ಲಿ ತಮ್ಮ ಹಿಡಿತ ಕಾಪಾಡಿಕೊಳ್ಳುವ ಯೋಜನೆಗೆ ಯಾವುದೇ ಸವಾಲು ಎದುರಾಗದಂತೆ ಖಾತ್ರಿಪಡಿಸಿಕೊಳ್ಳಲು, ಇರಾನ್ ಮೇಲೆ ಅಪ್ರಚೋದಿತವಾದ ಮಾರಕ ಮಿಲಿಟರಿ ದಾಳಿಯನ್ನು ಅಮೆರಿಕ ಆರಂಭಿಸಿದೆ. ಆದರೆ, ಇರಾನ್ ಜನರ ದಿಟ್ಟ ಪ್ರತಿರೋಧವು ಈ ಘೋರ ಷಡ್ಯಂತ್ರವನ್ನು ವಿಫಲಗೊಳಿಸುತ್ತಿದೆ ಎಂದು ಸಂಘಟನೆಗಳ ಮುಖ್ಯಸ್ಥರಾದ ಲಕ್ಷ್ಮಣ ಜಡಗಣ್ಣವರ, ಬಿ.ಎನ್. ಪೂಜಾರ ಮಾತನಾಡಿದರು.
ಮಹೇಶ್ ಪತ್ತಾರ, ಬಿ.ಐ. ಈಳಗೇರ್, ಎ.ಎಂ. ಖಆನ, ಬಸಿರ್ ಮುಧೋಳ್, ಪೀರಸಾಬ್ ನದಾಫ್, ದೀಪಾ ಧಾರವಾಡ, ಶರಣು ಗೊನವರ, ಗಂಗಾಧರ ಬಡಿಗೇರ್ ಸೇರಿದಂತೆ ಹಲವರಿದ್ದರು.