ಕಾಪು ವಿಧಾನಸಭಾ ಕ್ಷೇತ್ರದ ಕುತ್ಯಾರು ಗ್ರಾಪಂ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿಗೆ 50 ಲಕ್ಷ ರು. ಅನುದಾನ ಮಂಜೂರಾಗಿದ್ದು, ಕಾಮಗಾರಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು.

ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಕುತ್ಯಾರು ಗ್ರಾಪಂ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿಗೆ 50 ಲಕ್ಷ ರು. ಅನುದಾನ ಮಂಜೂರಾಗಿದ್ದು, ಕಾಮಗಾರಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು.

ಕುತ್ಯಾರು ಗ್ರಾಪಂ ವ್ಯಾಪ್ತಿಯ ಕುತ್ಯಾರು ಮುಖ್ಯ ರಸ್ತೆಯಿಂದ ಬಬ್ಬುಸ್ವಾಮಿ ರಸ್ತೆ ಅಭಿವೃದ್ಧಿಗೆ- 10 ಲಕ್ಷ, ಪಡುಗುಡ್ಡೆ ಸುಧಾಕರ್ ಕುಲಾಲ್ ತಾಂಡೂರು ರಸ್ತೆ ಅಭಿವೃದ್ಧಿಗೆ 10 ಲಕ್ಷ, ಕಳತ್ತೂರು ಮುಖ್ಯ ರಸ್ತೆಯಿಂದ ಉದಯ ಭಟ್ರ ಮನೆ ತನಕ ರಸ್ತೆ ಅಭಿವೃದ್ಧಿಗೆ 10 ಲಕ್ಷ, ಕಳತ್ತೂರು ಕಕ್ಕುಂಜೆ ಪೇಡೆ ಮನೆಗೆ ಹೋಗುವ ರಸ್ತೆ ಅಭಿವೃದ್ಧಿಗೆ 10 ಲಕ್ಷ, ಕುತ್ಯಾರು ಮಲಂಗೊಳಿ ಸುಧಾಕರ್ ಕುಲಾಲ್ ಮನೆಯಿಂದ ಸುಶೀಲಾ ಮೂಲ್ಯ ಅವರ ಮನೆ ತನಕ ರಸ್ತೆ ಅಭಿವೃದ್ಧಿಗೆ 10 ಲಕ್ಷ ರು. ಸೇರಿದಂತೆ ಒಟ್ಟು 50 ಲಕ್ಷ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭ ಕುತ್ಯಾರು ಗ್ರಾಪಂ ಅಧ್ಯಕ್ಷ ಜನಾದನ ಆಚಾರ್ಯ, ಸದಸ್ಯರಾದ ಗಣೇಶ್ ಶೆಟ್ಟಿ ಪೈಯಾರು, ಇವ್ಜಿನ್ ಲೋಬೋ, ಸ್ಟ್ಯಾನ್ಲಿ ಕೊಡ್ದಾ, ಸ್ಥಳೀಯರಾದ ಸಂಜೀವ ಕುಲಾಲ್, ಉದಯ್ ಕುಲಾಲ್, ರಾಜೇಶ್ ಕುಲಾಲ್ ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.