ವಿಜಯಪುರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತಿನಿಂದ ಕೊಡಮಾಡುವ ರಾಜ್ಯಮಟ್ಟದ ಕಾಯಕರತ್ನ ಪ್ರಶಸ್ತಿ ಪುರಸ್ಕೃತರಾಗಿರುವ ಜಿಲ್ಲಾಸ್ಪತ್ರೆಯ ರೆಡಿಯಾಲಾಜಿ ಇಮೇಜಿಂಗ್‌ ಅಧಿಕಾರಿ ಗೀತಾ ಗಜಾಕೋಶ ಅವರಿಗೆ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸನ್ಮಾನಿಸಿದರು. ಈ ವೇಳೆ ಸ್ಥಳೀಯ ವೈದ್ಯಾಧಿಕಾರಿ ಡಾ.ಚಂದು ರಾಠೋಡ, ಸಿಬ್ಬಂದಿ ಎಸ್.ಎ.ಮೋಮೀನ, ಸುರೇಂದ್ರ ಮಾನಕರ, ಸಣ್ಣಮ್ಮ, ಆರ್‌.ಆರ್‌.ಪಾಟೀಲ, ಆರ್‌.ಎಂ.ಮಠ, ಕೆ.ಎಚ್.ವಸುಧೇಂದ್ರ, ಸುಜಾತಾ ಸಾಗರ, ಅನೀಲ ಚಟ್ಟರಕಿ, ಸವಿತಾ ಲಿಂಬಿಕಾಯಿ, ಸುಜಾತಾ ಗುದ್ದಿ, ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ಲತಾ ಬಿರಾದಾರ ಇದ್ದರು.