ನಿರ್ದೇಶನಗೊಂಡ ಆನಂದ್‌ ಕುಮಾರ್‌ಗೆ ಬೇಲೂರಲ್ಲಿ ಅಭಿನಂದನೆ

| Published : Nov 24 2025, 01:45 AM IST

ನಿರ್ದೇಶನಗೊಂಡ ಆನಂದ್‌ ಕುಮಾರ್‌ಗೆ ಬೇಲೂರಲ್ಲಿ ಅಭಿನಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ರಾಜ್ಯ ಸಂಘಕ್ಕೆ ರಾಜ್ಯ ಪರಿಷತ್ ಸದಸ್ಯರಾಗಿ ನಾಮ ನಿರ್ದೇಶನಗೊಂಡಿರುವ ಬಿ.ಎನ್. ಆನಂದಕುಮಾರ್‌ ಅವರನ್ನು ಬೇಲೂರು ಶಾಖೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಬೇಲೂರು ಶಾಖೆಯಿಂದ ರಾಜ್ಯ ಮಟ್ಟದ ಪ್ರತಿನಿಧಿತ್ವ ಸಿಕ್ಕಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ನೌಕರರ ಹಿತಾಸಕ್ತಿಯ ಪರವಾಗಿ ಆನಂದಕುಮಾರ್ ಅವರು ಸದಾ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯ ಮಟ್ಟದಲ್ಲಿಯೂ ಅವರು ಸಂಸ್ಥೆಗೆ ಗೌರವ ತಂದುಕೊಡಲಿದ್ದಾರೆ ಎಂಬ ವಿಶ್ವಾಸ ಇದೆ. ಈ ಹುದ್ದೆಯನ್ನು ಬೇಲೂರು ತಾಲೂಕಿಗೆ ನೀಡಿದ ರಾಜ್ಯಾಧ್ಯಕ್ಷರಾದ ಸಿ.ಎಸ್ ಷಡಾಕ್ಷರಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ರಾಜ್ಯ ಸಂಘಕ್ಕೆ ರಾಜ್ಯ ಪರಿಷತ್ ಸದಸ್ಯರಾಗಿ ನಾಮ ನಿರ್ದೇಶನಗೊಂಡಿರುವ ಬಿ.ಎನ್. ಆನಂದಕುಮಾರ್‌ ಅವರನ್ನು ಬೇಲೂರು ಶಾಖೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಪಟ್ಟಣದ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ನೌಕರರ ಸಂಘದ ಅಧ್ಯಕ್ಷರು ಹಾಗೂ ಪಧಾಧಿಕಾರಿಗಳು ಸನ್ಮಾನಿಸಿದರು. ನೌಕರರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಬೇಲೂರು ಶಾಖೆಯಿಂದ ರಾಜ್ಯ ಮಟ್ಟದ ಪ್ರತಿನಿಧಿತ್ವ ಸಿಕ್ಕಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ನೌಕರರ ಹಿತಾಸಕ್ತಿಯ ಪರವಾಗಿ ಆನಂದಕುಮಾರ್ ಅವರು ಸದಾ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯ ಮಟ್ಟದಲ್ಲಿಯೂ ಅವರು ಸಂಸ್ಥೆಗೆ ಗೌರವ ತಂದುಕೊಡಲಿದ್ದಾರೆ ಎಂಬ ವಿಶ್ವಾಸ ಇದೆ. ಈ ಹುದ್ದೆಯನ್ನು ಬೇಲೂರು ತಾಲೂಕಿಗೆ ನೀಡಿದ ರಾಜ್ಯಾಧ್ಯಕ್ಷರಾದ ಸಿ.ಎಸ್ ಷಡಾಕ್ಷರಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.

ಸಭೆಯಲ್ಲಿ ತಾಲೂಕು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಗೌಡ ಮಾತನಾಡಿ, ನೌಕರರ ಹಕ್ಕು-ಹಿತಗಳನ್ನು ಕಾಪಾಡಲು ಬಲವಾದ ನಾಯಕತ್ವ ಅತ್ಯಗತ್ಯ. ಆನಂದಕುಮಾರ್ ಅವರ ಸಂಯಮ, ಸಂಘಟನಾ ಶಕ್ತಿ ಹಾಗೂ ಸೇವಾ ಮನೋಭಾವ ರಾಜ್ಯ ಪರಿಷತ್ತಿನಲ್ಲೂ ಪರಿಣಾಮಕಾರಿಯಾಗಿ ಕೆಲಸ ಮಾಡಲು ನೆರವಾಗುತ್ತದೆ. ಬೇಲೂರು ಶಾಖೆಯ ಧ್ವನಿಯನ್ನು ರಾಜ್ಯ ಮಟ್ಟಕ್ಕೆ ತಲುಪಿಸುವಲ್ಲಿ ಅವರು ಸೇತುವೆಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ರವಿ, ಸಂತೋಷ್, ಹೇಮಂತ್ ಕುಮಾರ್‌, ವೀರಭದ್ರಪ್ಪ ಸೇರಿದಂತೆ ಹಲವು ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.