ಸಾರಾಂಶ
ಪ್ರತಿಭೆಗೆ ಪೂರಕವಾಗಿರುವ ಸಂಗೀತ ಕಲೆಯಲ್ಲಿ ಮಕ್ಕಳಿಗೆ ಹೆಚ್ಚು ಆಸಕ್ತಿ ಮೂಡಿಸಲು ಪಾಲಕರು ಮುಂದಾಗಬೇಕು.
ಗಣಪತಿ ದೇವಸ್ಥಾನದ ಸಮುದಾಯ ಭವನದಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಜಾನಪದ ಅಕಾಡೆಮಿ ಸದಸ್ಯ
ಕನ್ನಡಪ್ರಭ ವಾರ್ತೆ ಗಂಗಾವತಿಪ್ರತಿಭೆಗೆ ಪೂರಕವಾಗಿರುವ ಸಂಗೀತ ಕಲೆಯಲ್ಲಿ ಮಕ್ಕಳಿಗೆ ಹೆಚ್ಚು ಆಸಕ್ತಿ ಮೂಡಿಸಲು ಪಾಲಕರು ಮುಂದಾಗಬೇಕು ಎಂದು ಜಾನಪದ ಅಕಾಡೆಮಿ ಸದಸ್ಯ ಮೆಹಬೂಬ ಕಿಲ್ಲೇದಾರ ತಿಳಿಸಿದರು.
ಯುವ ಸಂಕಲ್ಪ ಗ್ರಾಮೀಣಾಭಿವೃದ್ಧಿ ಹಾಗೂ ಶೈಕ್ಷಣಿಕ ಸಾಂಸ್ಕೃತಿಕ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವುಗಳ ಸಹಯೋಗದಲ್ಲಿ ನಗರದ ಗದಿಗೇಪ್ಪ ಕಾಲನಿಯ ಶ್ರೀ ಗಣಪತಿ ದೇವಸ್ಥಾನದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ಹಲವು ವರ್ಷಗಳಿಂದ ಸಂಗೀತ ಸೇವೆಯಲ್ಲಿ ನಿರತರಾಗಿರುವ ರಾಜಾಸಾಬ್ ಮುದ್ದಾಬಳ್ಳಿ ಹಲವಾರು ಕಲಾವಿದರನ್ನು ಪ್ರೋತ್ಸಾಹಿಸಿದ್ದಾರೆ. ನಾನು ಕೂಡಾ ಇಂದು ಜನಪದ ಕಲಾವಿದನಾಗಲು ಅವರ ಹಾರೈಕೆ ಮತ್ತು ಪ್ರೋತ್ಸಾಹವಿದೆ. ಜಾತಿ, ಧರ್ಮವನ್ನು ಮೀರಿರುವ ಸಂಗೀತ ಕಲೆಗೆ ರಾಜಾಸಾಬ್ ಮುದ್ದಾಬಳ್ಳಿ ಮತ್ತು ಅವರ ಪುತ್ರ ರಿಜ್ವಾನ್ ಮುದ್ದಾಬಳ್ಳಿ ನಿರಂತರ ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಅಕಾಡೆಮಿಯಿಂದ ಪ್ರಶಸ್ತಿ ನೀಡಲು ನಾನು ಬಯಸುತ್ತೇನೆ. ಜನಪದ ಕಲೆ ಉಳಿಸಿ, ಬೆಳೆಸಬೇಕಿದೆ. ಜಿಲ್ಲೆಯಲ್ಲಿ ಕಲಾವಿದರಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸುವ ಚಿಂತನೆ ನಡೆಸಲಾಗುತ್ತಿದೆ ಎಂದರು.ಇದೇ ವೇಳೆ ರೈತ ಮುಖಂಡ ನಾರಾಯಣಪ್ಪ ನಾಯಕ, ಪತ್ರಕರ್ತ ಹರೀಶ ಕುಲಕರ್ಣಿ, ಶಿಕ್ಷಕ ರಮೇಶ, ನಾಗರಾಜ ನಾಗಲೀಕರ, ದರೋಜಿ, ರಿಜ್ವಾನ್ ಮುದ್ದಾಬಳ್ಳಿ ಮೆಹಬೂಬ ಕಿಲ್ಲೇದಾರ ಅವರನ್ನು ಸನ್ಮಾನಿಸಿದರು. ನಂತರ ರಾಜಾಸಾಬ್ ಮುದ್ದಾಬಳ್ಳಿಯಿಂದ ತಬಲಾ ಸೋಲು ನಡೆಯಿತು. ಸಂಗೀತ ಶಿಕ್ಷಕ ಪಂಚಾಕ್ಷರಿ ನಿರ್ವಹಿಸಿ ನಂತರ ಸಂಗೀತ ಕಾರ್ಯಕ್ರಮ ನಡೆಸಿದರು. ಈ ಸಂದರ್ಭದಲ್ಲಿ ಸಂಗೀತ ಶಾಲೆ, ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿದ್ದರು.