ಮಳೆ ನೀರು ಹರಿದು ಹೋಗಲು ದಾರಿ ಮಾಡಿಕೊಡಿ, ಶಾಸಕರಿಗೆ ಆಗ್ರಹ

| Published : Jun 14 2025, 03:38 AM IST

ಮಳೆ ನೀರು ಹರಿದು ಹೋಗಲು ದಾರಿ ಮಾಡಿಕೊಡಿ, ಶಾಸಕರಿಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ನರಗುಂದ ತಾಲೂಕಿನ ಬೆಣ್ಣೆಹಳ್ಳದ ಪ್ರವಾಹ ಪೀಡಿತ ಪ್ರದೇಶಗಳಿಗೆ ಶುಕ್ರವಾರ ಸಿ.ಸಿ. ಪಾಟೀಲರು ಭೇಟಿ ನೀಡಿದ ವೇಳೆ ಹದಲಿ ಗ್ರಾಮದ ಮಹಿಳೆಯರು ಗ್ರಾಮದ ಜನತಾ ಪ್ಲಾಟ್‌ಗಳಲ್ಲಿ ಮಳೆ ಆದರೆ ಮಳೆ ನೀರಿ ಹರಿದು ಹೋಗಲು ಮಾರ್ಗವಿಲ್ಲ. ಹೀಗಾಗಿ ಮನೆಗಳಿಗೆ ನುಗ್ಗುತ್ತದೆ. ನೀರು ಹರಿದು ಹೋಗಲು ದಾರಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ನರಗುಂದ:ತಾಲೂಕಿನ ಬೆಣ್ಣೆಹಳ್ಳದ ಪ್ರವಾಹ ಪೀಡಿತ ಪ್ರದೇಶಗಳಿಗೆ ಶುಕ್ರವಾರ ಸಿ.ಸಿ. ಪಾಟೀಲರು ಭೇಟಿ ನೀಡಿದ ವೇಳೆ ಹದಲಿ ಗ್ರಾಮದ ಮಹಿಳೆಯರು ಗ್ರಾಮದ ಜನತಾ ಪ್ಲಾಟ್‌ಗಳಲ್ಲಿ ಮಳೆ ಆದರೆ ಮಳೆ ನೀರಿ ಹರಿದು ಹೋಗಲು ಮಾರ್ಗವಿಲ್ಲ. ಹೀಗಾಗಿ ಮನೆಗಳಿಗೆ ನುಗ್ಗುತ್ತದೆ. ನೀರು ಹರಿದು ಹೋಗಲು ದಾರಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಸ್ಪಂದಿಸಿದ ಶಾಸಕ ಸಿ.ಸಿ. ಪಾಟೀಲರು ಮಳೆಯಲ್ಲೇ ಛತ್ರಿ ಹಿಡಿದು ಜನತಾ ಪ್ಲಾಟ್‌ಗೆ ತೆರಳಿ ಅಲ್ಲಿನ ಪರಿಸ್ಥಿತಿ ವೀಕ್ಷಣೆ ಮಾಡಿದರು.

ಆನಂತರ ಮಾತನಾಡಿ, ಜನತಾ ಪ್ಲಾಟಿನವರು ಮನೆ ಮುಂದೆ ಚರಂಡಿ ಮಾಡಲು ತಾವೆಲ್ಲರೂ ಪರವಾನಗಿ ನೀಡಿದರೆ ನಾನು ನನ್ನ ಶಾಸಕರ ಅನುದಾನದಲ್ಲಿ ಅನುದಾನ ಬಿಡುಗಡೆ ಮಾಡಿ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡುತ್ತೇನೆಂದು ಮಹಿಳೆಯರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಸವಣ್ಣಪ್ಪ ಸುಂಕದ, ಭೀಮಪ್ಪ ಹಾದಿಮನಿ, ಈರಪ್ಪ ಯಾವಗಲ್, ರಾಜು ಪಾಟೀಲ, ಯಲ್ಲಪ್ಪಗೌಡ ಬನಹಟ್ಟಿ, ಶಶಿಧರಗೌಡ ಅಲ್ಲಪ್ಪಗೌಡ್ರ, ಅಜ್ಜಪ್ಪಗೌಡ ಅಲ್ಲಪ್ಪಗೌಡ್ರ, ಭೀಮಿಶಿ ಯಾವಗಲ್, ಮುತ್ತಪ್ಪ ನವಲಗುಂದ, ಅಬ್ದುಲಸಾಬ ನರಗುಂದ, ದವಲಬಿ ನರಗುಂದ, ಪ್ರೇಮವ್ವ ಹಂಪಣ್ಣವರ, ಯಲ್ಲವ್ವ ರೊಟ್ಟಿ, ಬಸವ್ವ ಹುನಗುಂಡಿ, ಗ್ರಾಪಂ ಸದಸ್ಯರು, ಪಿಡಿಓ ಸೇರಿದಂತೆ ಮುಂತಾದವರು ಇದ್ದರು.