ಸಿಂದಗಿ: ಪಟ್ಟಣದ ವಿದ್ಯುತ್ ಪ್ರಸರಣ ಘಟಕದ ಕಚೇರಿ ಕಟ್ಟಡದ ಮೇಲೆ ಮಲಗಲು ಹೋಗಿದ್ದ ಕೆಇಬಿ ನೌಕರ ಹಣಮಂತ (ಮುತ್ತಪ್ಪ) ಡಾoಗೆ (35) ಕಟ್ಟಡದ ಮೇಲಿಂದ ಆಯಾತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಬಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿ ಮೃತ ಪಟ್ಟಿದ್ದಾನೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಸಿಂದಗಿ ಪೊಲೀಸ್‌ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪ್ರಕರಣ ಸಿಂದಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.