ಸಾರಾಂಶ
ಪಾಂಡವಪುರ: ತಾಲೂಕಿನ ಕನಗನಮರಡಿ, ಅರಳಕುಪ್ಪೆ ಹಾಗೂ ಕಾವೇರಿಪುರ ಗ್ರಾಮದಲ್ಲಿ ಎಸ್ಸಿಪಿ ಯೋಜನೆಯಡಿ 1.05 ಕೋಟಿ ರು. ಅನುದಾನದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆ ಎಸ್ಸಿಪಿ ಯೋಜನೆಯಡಿ ತಾಲೂಕಿನ ಕನಗನಮರಡಿ ಗ್ರಾಮದಲ್ಲಿ 58 ಲಕ್ಷ ರು., ಅರಳಕುಪ್ಪೆ ಗ್ರಾಮದಲ್ಲಿ 18.50 ಲಕ್ಷ ರು. ಹಾಗೂ ಕಾವೇರಿಪುರ ಗ್ರಾಮದಲ್ಲಿ 28 ಲಕ್ಷ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಸಲ್ಲಿಸಲಾಗಿದೆ. ಪರಿಶಿಷ್ಟ ಜಾತಿ ಕಾಲೋನಿಗಳ ಅಭಿವೃದ್ಧಿಗಾಗಿ ಸರಕಾರದಿಂದ ವಿಶೇಷ ಅನುದಾನ ತಂದು ಗ್ರಾಮ ರಸ್ತೆ ಹಾಗೂ ಚರಂಡಿಗಳನ್ನು ಅಭಿವೃದ್ಧಿಪಡಿಸಲಾಗುವುದು. ಸಾರ್ವಜನಿಕರು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಸಹಕಾರ ನೀಡುವ ಮೂಲಕ ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ದಸಂಸ ಮುಖಂಡ ಕಣಿವೆರಾಮು, ಬನ್ನಂಗಾಡಿ ಬಿ.ಜೆ.ಸ್ವಾಮಿ, ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷ ಬಿ.ಕೆ.ರೇವಣ್ಣ, ಗ್ರಾಮಸ್ಥರಾದ ನಾಗೇಂದ್ರ, ಲಾಲ್ಬಹದ್ದೂರ್ಶಾಸ್ತ್ರಿ, ಕಿರಣ್, ಮಂಜು, ಗ್ರಾಪಂ ಸದಸ್ಯ ಕಿಟ್ಟಿ, ಅರಳಕುಪ್ಪೆ ದೇವರಾಜು, ಅಶೋಕ್, ವೆಂಕಟರಾಮು, ಗಣೇಶ್, ಚಿನ್ನಮುತ್ತು, ಜಗದೀಶ್, ಸೋಮಶೇಖರ್ ಸೇರಿ ಗ್ರಾಮಸ್ಥರು ಭಾಗವಹಿಸಿದ್ದರು.