ಶ್ರೀ ವೀರಭದ್ರ ರಥೋತ್ಸವ: ಕೆಂಡೋತ್ಸವದಲ್ಲಿ ಪಾಲ್ಗೊಂಡ ಶಾಸಕ, ಮಕ್ಕಳು

| Published : Apr 23 2024, 12:49 AM IST

ಶ್ರೀ ವೀರಭದ್ರ ರಥೋತ್ಸವ: ಕೆಂಡೋತ್ಸವದಲ್ಲಿ ಪಾಲ್ಗೊಂಡ ಶಾಸಕ, ಮಕ್ಕಳು
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ನಗರದ ಹಳೇ ಪೇಟೆಯ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಅಂಗವಾಗಿ ನಗರದಲ್ಲಿ ಕೆಂಡ ತುಳಿದು ಭಕ್ತಿ ಸಮರ್ಪಿಸುವ ಕಾರ್ಯ ಸೋಮವಾರ ನಡೆಯಿತು. ಪ್ರತಿ ಸಲದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಕೆಂಡ ತುಳಿದರೆ, ಈ ಸಲ ಮಕ್ಕಳಾದ ಸಮರ್ಥ, ಶ್ರೇಷ್ಠ ಸಹ ಸಾಥ್ ನೀಡಿದರು.

- ರಾಜ್ಯಾದ್ಯಂತ ಉತ್ತಮ ಮಳೆ, ಬೆಳೆಯಾಗಿ ಸಮೃದ್ಧಿ ನೆಲೆಸಲು ಪ್ರಾರ್ಥನೆ: ಎಸ್‌ಎಸ್‌ಎಂ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ನಗರದ ಹಳೇ ಪೇಟೆಯ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಅಂಗವಾಗಿ ನಗರದಲ್ಲಿ ಕೆಂಡ ತುಳಿದು ಭಕ್ತಿ ಸಮರ್ಪಿಸುವ ಕಾರ್ಯ ಸೋಮವಾರ ನಡೆಯಿತು. ಪ್ರತಿ ಸಲದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಕೆಂಡ ತುಳಿದರೆ, ಈ ಸಲ ಮಕ್ಕಳಾದ ಸಮರ್ಥ, ಶ್ರೇಷ್ಠ ಸಹ ಸಾಥ್ ನೀಡಿದರು.

ಅನಂತರ ಪತ್ನಿ, ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ, ಮಕ್ಕಳು, ಕುಟುಂಬ ಸದಸ್ಯರ ಜೊತೆಗೆ ಶ್ರೀ ಸ್ವಾಮಿಯ ದರ್ಶನ ಮಾಡಿದರು.

ಶ್ರೀ ವೀರಭದ್ರೇಶ್ವರ ದೇವಸ್ಥಾನ ಮುಂಭಾಗದಲ್ಲಿ ಸೋಮವಾರ ಬೆಳಗ್ಗೆ 6 ಗಂಟೆಗೆ ಶ್ರೀ ಸ್ವಾಮಿಗೆ ರುದ್ರಾಭಿಷೇಕ ಮತ್ತು ರುದ್ರ ಸಮರ್ಪಣೆ ನಡೆಯಿತು. ಅನಂತರ ನಡೆದ ಕೆಂಡೋತ್ಸವದಲ್ಲಿ ಸಾವಿರಾರು ಭಕ್ತರು ಕೆಂಡ ಹಾಯ್ದರು.

ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸುದ್ದಿಗಾರರೊಂದಿಗೆ ಮಾತನಾಡಿ, ದಾವಣಗೆರೆ ಹಳೆ ಭಾಗದಲ್ಲಿ ಸಾಕಷ್ಟು ದೇವಸ್ಥಾನಗಳಿವೆ. ಈ ಭಾಗದ ಬಹುತೇಕ ದೇವಸ್ಥಾನಗಳ ಅಭಿವೃದ್ಧಿಗೆ ತಂದೆ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸುಮಾರು ₹15 ಕೋಟಿ ಅನುದಾನ ನೀಡಿದ್ದಾರೆ. ಇದೇ ದೇವಸ್ಥಾನ ಎದುರಿನ ಕಲ್ಯಾಣ ಮಂದಿರ ಅಭಿವೃದ್ಧಿಗೆ ₹3 ಕೋಟಿ ಅನುದಾನ ನೀಡಿದ್ದಾರೆ ಎಂದರು.

ಚಿಕ್ಕಂದಿನಿಂದಲೂ ವೀರಣ್ಣ ಗುಡಿ ಮುಂದೆ ಕೆಂಡ ಹಾಯುತ್ತಾ ಬಂದಿದ್ದೇನೆ. ರಾಜ್ಯಾದ್ಯಂತ ಉತ್ತಮ ಮಳೆ, ಬೆಳೆಯಾಗಿ ಸಮೃದ್ಧಿ ನೆಲೆಸಲಿ ಎಂದು ಬೇಡಿಕೊಂಡಿದ್ದೇನೆ. ದೇವರ ಕೃಪೆ ಎಲ್ಲರ ಮೇಲೂ ಇರಲಿ ಎಂದರು. ಈ ಸಂದರ್ಭ ಪತ್ನಿ, ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಇದ್ದರು.

- - - ಮಹಿಳೆಯರು ಕಾಂಗ್ರೆಸ್ ಕೈಹಿಡಿಯುತ್ತಾರೆ: ಎಸ್ಸೆಸ್ಸೆಂ ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಕಾಂಗ್ರೆಸ್ ಪರ ಜನರ ಒಲವು ಇದ್ದು, ನಾಡಿನ ಜನತೆ ವಿಶೇಷವಾಗಿ ಮಹಿಳೆಯರು ಕಾಂಗ್ರೆಸ್‌ ಪಕ್ಷದ ಕೈ ಹಿಡಿದು, ಆಶೀರ್ವದಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ಗ್ಯಾರಂಟಿಗಳು ಬಡವರು, ಮಹಿಳೆಯರಿಗೆ ಅನುಕೂಲವಾಗಿವೆ. ನಾವು ಕೆಲಸ ಮಾಡಿದ್ದೇವೆ. ನಮಗೆ ಮತ ಕೊಡಿ ಎಂಬುದಾಗಿ ಕೇಳುತ್ತಿದ್ದೇವೆ. ನಮ್ಮ ಯೋಜನೆಗಳಿಂದ ಜನರಲ್ಲಿ ಆರ್ಥಿಕ ಸುಧಾರಣೆ ಕಾಣುತ್ತಿದೆ ಎಂದರು.

ನಾವು ಯಾರನ್ನೂ ಆಪರೇಷನ್ ಮಾಡಿ, ಪಕ್ಷಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಬಿಜೆಪಿಯವರು ದರ್ಪ, ದೌಲತ್ತು ಬಿಡಬೇಕು. ಹಣದಿಂದಲೇ ಎಲ್ಲವನ್ನೂ ಖರೀದಿ ಮಾಡಲು ಹೋದರೆ ಇದೇ ತರಹ ಆಗುತ್ತದೆ. ಬಿಜೆಪಿಯಲ್ಲೇ ಅನೇಕ ಹಿರಿಯ ಮುಖಂಡರಿಗೆ ಅಸಮಾಧಾನವಿದೆ. ಯಡಿಯೂರಪ್ಪ ಬಂದು ರಾಜಿ ಸಂಧಾನ ಮಾಡಿದರು. ಜಾತಿಗೊಬ್ಬ ಮುಖಂಡರನ್ನು ಕರೆಸುತ್ತಿದ್ದಾರೆ. ವೈಯಕ್ತಿಕವಾಗಿ ಬೇಜರಾಗಿ ನಮ್ಮ ಪಕ್ಷಕ್ಕೆ ಬಿಜೆಪಿಯಿಂದ ಅನೇಕರು ಬರುತ್ತಿದ್ದಾರೆ ಎಂದರು.

ಸಂಸದರಾಗಿ ಸಿದ್ದೇಶ್ವರ ಏನೂ ಅಭಿವೃದ್ಧಿ ಕೆಲಸ ಮಾಡಿಲ್ಲ. ನರೇಂದ್ರ ಮೋದಿ ಫೋಟೋ ಇಟ್ಟುಕೊಂಡು, ಅದನ್ನೇ ತೋರಿಸುತ್ತಾರೆ. ವೈಯಕ್ತಿಕವಾಗಿ ಸಾಧನೆ ಶೂನ್ಯ. ವೈಯಕ್ತಿಕವಾಗಿ ಈ ವ್ಯಕ್ತಿಯೇ ಚೊಂಬು ಎಂದು ಸಚಿವ ಮಲ್ಲಿಕಾರ್ಜುನ ಲೇವಡಿ ಮಾಡಿದರು.

- - - (* ಒಂದೇ ಪೋಟೋ ಮಾತ್ರ ಬಳಸಿ)-22ಕೆಡಿವಿಜಿ7:

ದಾವಣಗೆರೆ ಹಳೆ ಪೇಟೆ ಶ್ರೀ ವೀರಭದ್ರೇಶ್ವರ ರಥೋತ್ಸವ ಅಂಗವಾಗಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕೆಂಡ ಹಾಯ್ದು ಭಕ್ತಿ ಮೆರೆದರು. -22ಕೆಡಿವಿಜಿ8:

ದಾವಣಗೆರೆ ಹಳೇ ಪೇಟೆ ಶ್ರೀ ವೀರಭದ್ರೇಶ್ವರ ರಥೋತ್ಸವ ಅಂಗವಾಗಿ ಕೆಂಡ ಹಾಯುತ್ತಿರುವ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪುತ್ರಿ ಶ್ರೇಷ್ಠ ಎಂ.ಶಾಮನೂರು, ಶಾಮನೂರು ಮೊಮ್ಮಗಳು. -22ಕೆಡಿವಿಜಿ9:

ದಾವಣಗೆರೆ ಹಳೆ ಪೇಟೆ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಕೆಂಡ ಹಾದ ನಂತರ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ ಜೊತೆ ದೇವರ ದರ್ಶನಕ್ಕೆ ಸಾಗಿರುವುದು.