ಮುದ್ನಾಳ್‌ ಅಭಿವೃದ್ಧಿಪರ ನಾಯಕ : ಪ್ರಭು ಚವ್ಹಾಣ

| Published : Sep 23 2024, 01:22 AM IST

ಸಾರಾಂಶ

ಔರಾದ್‌ ಹಾಲಿ ಶಾಸಕ ಪ್ರಭು ಚವ್ಹಾಣ್‌ ಅವರು ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ್‌ ಅವರ ಯಾದಗಿರಿ ನಿವಾಸಕ್ಕೆ ಭೇಟಿ ನೀಡಿ, ಪುತ್ರ ಮಹೇಶರಡ್ಡಿ ಮುದ್ನಾಳ ಮತ್ತು ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ ಅವರು ಸದಾ ಅಭಿವೃದ್ಧಿಗಾಗಿ ಚಿಂಚಿಸುತ್ತಿದ್ದ ನಾಯಕರಾಗಿದ್ದರು. ಅವರ ನಿಧನದಿಂದ ಕ್ಷೇತ್ರ ಅಷ್ಟೇ ಅಲ್ಲ ಜಿಲ್ಲೆಗೆ, ಪಕ್ಷಕ್ಕೆ ನಷ್ಟವಾಗಿದೆ ಎಂದು ಔರಾದ್‌ ಶಾಸಕ ಪ್ರಭು ಚವ್ಹಾಣ ಸಂತಾಪ ವ್ಯಕ್ತಪಡಿಸಿದರು.

ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ್‌ ಅವರ ನಿವಾಸಕ್ಕೆ ಭೇಟಿ ನೀಡಿ, ಪುತ್ರ ಮಹೇಶರಡ್ಡಿ ಮುದ್ನಾಳ ಮತ್ತು ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ ನಂತರ ಮಾಧ್ಯಮಗಳವರೊಂದಿಗೆ ಮಾತನಾಡಿದ ಅವರು, ವೆಂಕಟರಡ್ಡಿ ಅವರ ಜೊತೆಗೆ ಕೆಲಸ ಮಾಡಿದ ದಿನಗಳು ಮೆಲುಕು ಹಾಕಿದರು.

ಅಭಿವೃದ್ಧಿ ವಿಷಯಕ್ಕೆ ಜಗಳವಾಡುತ್ತಿದ್ದ ಅವರು ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಏಕೈಕ ಕಾರಣಕ್ಕೆ ಅವರು ಹಟ ಹಿಡಿದು ಮೆಡಿಕಲ್ ಕಾಲೇಜು ಸೇರಿದಂತೆ ವಿವಿಧ ಕಾರ್ಯಗಳನ್ನು ಮಾಡಿಸಿಕೊಂಡಿದ್ದರು. ಇಂತಹ ಜನಪರ ನಿಲುವಿನ ನಾಯಕನ ಅಗಲಿಕೆ ತುಂಬಲಾರದ ನಷ್ಟ ಎಂದು ಶೋಕ ವ್ಯಕ್ತಪಡಿಸಿದರು.

ಈ ವೇಳೆ ವೆಂಕಟರೆಡ್ಡಿ ಮುದ್ನಾಳ್‌ರ ಸಹೋದರರಾದ ಹಣಮಂತರಡ್ಡಿ ಮುದ್ನಾಳ, ರಾಚಣ್ಣಗೌಡ ಮುದ್ನಾಳ, ದೇವಿಂದ್ರನಾಥ ನಾದ, ಖಂಡಪ್ಪ ದಾಸನ, ವೆಂಕಟರೆಡ್ಡಿ ಅಬ್ಬೆತುಮಕೂರು, ಗುರು ಕಾಮಾ, ರುದ್ರಗೌಡ ಪಾಟೀಲ್, ಮಹಾದೇವಪ್ಪ ಯಲಸತ್ತಿ, ರಮೇಶ್ ದೊಡಮನಿ, ಮಲ್ಲು ಸ್ವಾಮಿ ಗುರುಸುಣಗಿ, ಲಕ್ಷ್ಮಿಪುತ್ರ ಮಾಲಿಪಾಟೀಲ್ ಸೇರಿದಂತೆ ಬಿಜೆಪಿ ಮುಖಂಡರು ಇದ್ದರು.