ಮುನಿಯಪ್ಪ ನವರೇ ನಿಮ್ಮ ಅಕ್ಕಿ ಎಲ್ಲಿ: ಸಿ.ಟಿ. ರವಿ ಪ್ರಶ್ನೆ

| Published : Feb 22 2024, 01:47 AM IST

ಮುನಿಯಪ್ಪ ನವರೇ ನಿಮ್ಮ ಅಕ್ಕಿ ಎಲ್ಲಿ: ಸಿ.ಟಿ. ರವಿ ಪ್ರಶ್ನೆ
Share this Article
  • FB
  • TW
  • Linkdin
  • Email

ಸಾರಾಂಶ

ಮುನಿಯಪ್ಪ ನವರೇ ನಿಮ್ಮ ಅಕ್ಕಿ ಎಲ್ಲಿ ? ಅನ್ನಭಾಗ್ಯದ ಅಕ್ಕಿ ಎಲ್ಲಿ ಕೊಟ್ಟಿದ್ದೀರಿ ಎಂದು ಮಾಜಿ ಸಚಿವ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.ಭಾರತ್ ಬ್ರಾಂಡ್‌ ಅಕ್ಕಿ ಕಳಪೆಯಾಗಿದೆ ಎಂಬ ಮುನಿಯಪ್ಪ ಹೇಳಿಕೆಗೆ‌ ಪ್ರತಿಕ್ರಿಯಿಸಿರುವ ಸಿ.ಟಿ.ರವಿ, ರಾಜ್ಯ ಕಾಂಗ್ರೆಸ್ ಸರ್ಕಾರ ಕೇಂದ್ರ ಕೊಡುವ ಅಕ್ಕಿಯನ್ನೇ ಕಡಿತ ಮಾಡಿದೆ. ನಿಮ್ಮ ಪ್ರಣಾಳಿಕೆಯಂತೆ 10 ಕೆಜಿ ಅಕ್ಕಿ ಹೋಗಲಿ, 10 ಗ್ರಾಂ. ಅಕ್ಕಿಯಾದರೂ ನೀಡಿದ್ರಾ ? ಆಂಧ್ರ, ತೆಲಂಗಾಣ ಜತೆ ಮಾತನಾಡುತ್ತೇವೆಂದು ಜನರ ಕಿವಿಗೆ ಹೂವು ಮುಡಿಸಿದ್ದೀರಾ ಎಂದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮುನಿಯಪ್ಪ ನವರೇ ನಿಮ್ಮ ಅಕ್ಕಿ ಎಲ್ಲಿ ? ಅನ್ನಭಾಗ್ಯದ ಅಕ್ಕಿ ಎಲ್ಲಿ ಕೊಟ್ಟಿದ್ದೀರಿ ಎಂದು ಮಾಜಿ ಸಚಿವ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

ಭಾರತ್ ಬ್ರಾಂಡ್‌ ಅಕ್ಕಿ ಕಳಪೆಯಾಗಿದೆ ಎಂಬ ಮುನಿಯಪ್ಪ ಹೇಳಿಕೆಗೆ‌ ಪ್ರತಿಕ್ರಿಯಿಸಿರುವ ಸಿ.ಟಿ.ರವಿ, ರಾಜ್ಯ ಕಾಂಗ್ರೆಸ್ ಸರ್ಕಾರ ಕೇಂದ್ರ ಕೊಡುವ ಅಕ್ಕಿಯನ್ನೇ ಕಡಿತ ಮಾಡಿದೆ. ನಿಮ್ಮ ಪ್ರಣಾಳಿಕೆಯಂತೆ 10 ಕೆಜಿ ಅಕ್ಕಿ ಹೋಗಲಿ, 10 ಗ್ರಾಂ. ಅಕ್ಕಿಯಾದರೂ ನೀಡಿದ್ರಾ ? ಆಂಧ್ರ, ತೆಲಂಗಾಣ ಜತೆ ಮಾತನಾಡುತ್ತೇವೆಂದು ಜನರ ಕಿವಿಗೆ ಹೂವು ಮುಡಿಸಿದ್ದೀರಾ ಎಂದರು.

ನೀವು ವಿರೋಧ ಪಕ್ಷದಲ್ಲಿದ್ದಾಗ ಕಿವಿಯಲ್ಲಿ ಹೂವು ಇಟ್ಟುಕೊಂಡು ಪ್ರತಿಭಟನೆ ಮಾಡಿದ್ರೀ, ಈಗ ಯಾರ ಕಿವಿಗೆ ಹೂವು ಮುಡಿಸುತ್ತೀದ್ದೀರಿ, ನಿಮಗೆ ಒಂದು ಕೆಜಿ ಅಕ್ಕಿ ಕೊಡುವ ಯೋಗ್ಯತೆ ಇಲ್ವಾ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಕೊಡುವ ಭಾರತ್ ಬ್ರಾಂಡ್ ಅಕ್ಕಿ 28 ರು.ಗೆ ಮಾರಾಟ ಮಾಡುತ್ತಿದೆ. ಕಾಳಸಂತೆ ಮತ್ತು ಮಧ್ಯವರ್ತಿಗಳ ನಿಯಂತ್ರಣಕ್ಕೆ ಭಾರತ್ ಬ್ರಾಂಡ್ ಬಂದಿದೆ. ಕಾಂಗ್ರೆಸ್ ಕಾಳಸಂತೆ ಕೋರರ ಪರ ಲಾಭಿ ಮಾಡುತ್ತಿದೆ. ಹಾಗಾಗಿ ಅವರು ಅಪಪ್ರಚಾರ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ಒಬ್ಬ ಗ್ರಾಹಕ ಕಳಪೆ ಎಂದು ಹೇಳಿಲ್ಲ, ದೇಶದ ಎಲ್ಲಾ ಕಡೆ ಮಾರಾಟ ವಾಗುತ್ತಿದ್ದು ಎಲ್ಲೂ ದೂರು ಬಂದಿಲ್ಲ. ಹಾಗಾದರೇ ಮುನಿಯಪ್ಪ ಅವರ ಕಿವಿಗೆ ಹೇಗೆ ಬಂತು ಎಂದು ಪ್ರಶ್ನಿಸಿದ ಸಿ.ಟಿ. ರವಿ, ಇವರು ಕಾಳಸಂತೆ ಪರವಾಗಿ ಇದ್ದಾರೆ ಎಂದು ಆರೋಪಿಸಿದರು.

ಭಾರತ್‌ ಬ್ರಾಂಡ್‌ ಅಕ್ಕಿ ಮಾರುಕಟ್ಟೆಯಿಂದ ಹೊರಗೆ ತಳ್ಳಲು ಯಾವುದೋ ಲಾಭಿ ಕೆಲಸ ಮಾಡುತ್ತಿದೆ. ಆ ಲಾಬಿ ಪರವಾಗಿ ಕಾಂಗ್ರೆಸ್‌ ಇದೆ. ಹಾಗಾಗಿ ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.