ಸಾರಾಂಶ
, ಕೇವಲ ಒಂದು ದಿನಕ್ಕೆ ಇದು ಸೀಮಿತವಾಗಬಾರದು.
ಕನ್ನಡಪ್ರಭ ವಾರ್ತೆ ಮೈಸೂರು
ಯೋಗ ಎಂಬುವುದು ಆರೋಗ್ಯ ವೃದ್ಧಿಸಲು ಹಾಗೂ ನಮ್ಮ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿ ಅಭಿವೃದ್ಧಿಯಾಗಲು ಮೂಲ ಮಂತ್ರ ಎಂದು ಬಿಜೆಪಿ ನಗರಾಧ್ಯಕ್ಷ ಮಾಜಿ ಶಾಸಕ ಎಲ್. ನಾಗೇಂದ್ರ ತಿಳಿಸಿದರು.ನಗರದ ಬಿಜೆಪಿ ಕಚೇರಿ ಮುಂಭಾಗದಲ್ಲಿ ಬಿಜೆಪಿ ನಗರ ಯುವ ಮೋರ್ಚಾ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಿಶ್ವ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕೇವಲ ಒಂದು ದಿನಕ್ಕೆ ಇದು ಸೀಮಿತವಾಗಬಾರದು. ಪ್ರತಿದಿನ ಪ್ರತಿಯೊಬ್ಬರು ಯೋಗವನ್ನು ಅನುಸರಿಸಿ ಮನೆಯಲ್ಲಿ ಅಥವಾ ಇನ್ನಿತರ ಸ್ಥಳಗಳಲ್ಲಿ ನಮ್ಮ ಜೊತೆ ನಮ್ಮ ಸ್ನೇಹಿತರು ಯೋಗವನ್ನು ಕಲಿಸುವುದರೊಂದಿಗೆ ಜೀವನಪರ್ಯಂತ ನಾವು ಮಾಡಿಕೊಂಡು ಹೋಗಿದ್ದಲ್ಲಿ ಮಾತ್ರ ಆರೋಗ್ಯ ವೃದ್ಧಿಯಾಗಲು ಸಾಧ್ಯ ಎಂದು ಹೇಳಿದರು.ಮಾಜಿ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಮಾತನಾಡಿ, ನಾವೆಲ್ಲರೂ ವ್ಯಾಯಾಮ, ಯೋಗ, ವಾಯುವಿಹಾರ, ಮಾಡಿದರೆ ಮಾತ್ರ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಪ್ರತಿಯೊಬ್ಬರೂ ಯೋಗ ಮಾಡಿದರೆ ಹೆಚ್ಚಿನ ವರ್ಷ ಯಾವುದೇ ಕಾಯಿಲೆಗಳು ಇಲ್ಲದೆ ಬದುಕಬಹುದು, ಸುಖಿಯಾಗಿರಬಹುದು ಎಂದರು.ಯುವ ಮೋರ್ಚಾ ನಗರಾಧ್ಯಕ್ಷ ಆರ್. ರಾಕೇಶ್ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಡಿ. ಲೋಹಿತ್, ಆರ್. ಸಚಿನ್, ಪದಾಧಿಕಾರಿಗಳಾದ ಅನಿಲ್ ಥಾಮಸ್, ಬಿ.ಎಂ. ರಘು, ಯೋಗ ಗುರುಗಳಾದ ಮುತ್ತಣ್ಣ ಬಿಡುನಾಳು, ಅರ್ಜುನ್, ಮೋಹನ್, ಮಧು ಮೊದಲಾದವರು ಇದ್ದರು.