ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು ಕಿತ್ತೂರು ರಾಣಿ ಚೆನ್ನಮ್ಮ ಕನ್ನಡಿಗರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೆಚ್ಚಿಸಿದ ಮೊದಲ ಮಹಿಳೆ ಆಗಿದ್ದರೆಂದು ತಹಸೀಲ್ದಾರ್ ಜೆ. ಮಂಜುನಾಥ್ ಅಭಿಪ್ರಾಯಪಟ್ಟರು.ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ ರೀತಿ, ತೋರಿದ ಶೌರ್ಯ, ಸಾಹಸಗಳ ಮೂಲಕ 18ನೇ ಶತಮಾನದಲ್ಲಿ ರಾಜ್ಯದ ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜನರ ಬಾಯಲ್ಲಿ ಧೀರಮಹಿಳೆಯಾಗಿ ಕಥೆ, ಕವನಗಳಲ್ಲಿ ವಿಜೃಂಭಿಸುವ ಮೂಲಕ ಜನಪದ ನಾಯಕಿ ಎನ್ನುವ ಹೆಗ್ಗಳಿಕೆ ಪಡೆದಿದ್ದರು. ಡಾಲ್ ಹೌಸಿಯ ದತ್ತು ಮಕ್ಕಳಿಗೆ ಹಕ್ಕಿಲ್ಲವೆನ್ನುವ ಕಾನೂನನ್ನು ಉಲ್ಲಂಘಿಸುವ ಧೈರ್ಯ ತೋರಿ ಬ್ರಿಟಿಷರ ಆಡಳಿತಕ್ಕೆ ಸಡ್ಡು ಹೊಡೆದಿದ್ದರು. ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸಿ ಅದು ಜ್ವಾಲೆಯಾಗಿ ಬೆಳಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಚೆನ್ನಮ್ಮನ ನಂಬಿಕಸ್ತನಾಗಿ ಸಂಗೊಳ್ಳಿ ರಾಯಣ್ನ ಕೂಡ ತನ್ನ ಹೋರಾಟದ ಮೂಲಕ ಜನಮಾನದಲ್ಲಿ ನೆಲೆ ನಿಂತರು. ವಿದೇಶಿಯರ ಆಡಳಿತದಿಂದ ಮುಕ್ತರಾಗಬೇಕೆನ್ನುವ ಚೆನ್ನಮ್ಮನ ಕನಸು ಮತ್ತು ಹೋರಾಟ ಇಂದಿಗೂ ನಮಗೆಲ್ಲರಿಗೂ ಮಾದರಿಯಾಗಿದೆ ಎಂದರು. ಶಿರಸ್ತೇದಾರ್ ಶ್ರೀಪಾದ್ ನಲವತ್ವಾಡಕರ್, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ನಾಗರಾಜು, ಎಸ್ಐ ಜಮೀರ್ ಅಹಮದ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಧರ್ಮಾಪುರ ಕಾಳಪ್ಪ, ಚಲುವರಾಜ್, ಕಾಯಕ ಸಮಾಜದ ಮುಖಂಡ ಹೊನ್ನಪ್ಪ, ದೇವರಾಜ್, ಶಂಕರ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಎಸ್. ಜಯರಾಂ, ಪಿ.ಆರ್. ರಾಚಪ್ಪ ಇದ್ದರು.--------------
;Resize=(128,128))
;Resize=(128,128))
;Resize=(128,128))