ದೇಹಕ್ಕೆ ಅಯೋಡಿನ್ ಕೊರತೆಯಾಗದಂತೆ ಎಚ್ಚರಿಕೆ ಅಗತ್ಯ: ಜ್ಯೋತಿ

| Published : Jan 12 2025, 01:20 AM IST

ದೇಹಕ್ಕೆ ಅಯೋಡಿನ್ ಕೊರತೆಯಾಗದಂತೆ ಎಚ್ಚರಿಕೆ ಅಗತ್ಯ: ಜ್ಯೋತಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿ ಮಾತನಾಡಿ ದೇಹದಲ್ಲಿ ಅಯೋಡಿನ್ ಕೊರತೆಯಾದಲ್ಲಿ ಆರೋಗ್ಯದಲ್ಲಿ ತೊಂದರೆಯಾಗಲಿದ್ದು, ಅಯೋಡಿನ್ ರಹಿತ ಉಪ್ಪುಗಳನ್ನು ಎಂದಿಗೂ ಬಳಸಬಾರದು. ಉಪ್ಪುಗಳನ್ನು ಬಿಸಿಲು ಬೀಳುವ ಜಾಗದಲ್ಲಿ ಇರಿಸಿದಲ್ಲಿ ಅಯೋಡಿನ್ ಅಂಶ ನಾಶವಾಗುತ್ತದೆ. ಅಂಗಡಿಯವರು ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಪುತ್ತೂರು

ದೇಹಕ್ಕೆ ಅಯೋಡಿನ್ ಅಗತ್ಯ ಪೋಷಕಾಂಶವಾಗಿದ್ದು, ಅಯೋಡಿನ್ ಕೊರತೆಯಾದಲ್ಲಿ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ದೇಹಕ್ಕೆ ಅಯೋಡಿನ್ ಕೊರತೆಯಾಗದಂತೆ ಎಚ್ಚರಿಕೆ ವಹಿಸಿಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ತಿಳಿಸಿದರು. ಅವರು ಇನ್‌ಸ್ಟಿಟ್ಯೂಟ್ ಆಫ್ ಗ್ಲೋಬಲ್ ಡೆವಲಪ್‌ಮೆಂಟ್ (ಇಜಿಡಿ) ನೇತೃತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಕಾರದಲ್ಲಿ ಪುತ್ತೂರಿನ ಸಂಸಾರ (ಸಂಘಟನೆಗಾಗಿ ಸಾಮಾಜಿಕ ರಂಗಭೂಮಿ) ವತಿಯಿಂದ ದ.ಕ. ಜಿಲ್ಲೆಯಾದ್ಯಂತ ಆಯ್ದ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ನಡೆಯುವ ಅಯೋಡಿನ್ ಮತ್ತು ಪೋಷಕಾಂಶ ಕುರಿತ ಜನ ಜಾಗೃತಿ ಬೀದಿ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿ ಮಾತನಾಡಿ ದೇಹದಲ್ಲಿ ಅಯೋಡಿನ್ ಕೊರತೆಯಾದಲ್ಲಿ ಆರೋಗ್ಯದಲ್ಲಿ ತೊಂದರೆಯಾಗಲಿದ್ದು, ಅಯೋಡಿನ್ ರಹಿತ ಉಪ್ಪುಗಳನ್ನು ಎಂದಿಗೂ ಬಳಸಬಾರದು. ಉಪ್ಪುಗಳನ್ನು ಬಿಸಿಲು ಬೀಳುವ ಜಾಗದಲ್ಲಿ ಇರಿಸಿದಲ್ಲಿ ಅಯೋಡಿನ್ ಅಂಶ ನಾಶವಾಗುತ್ತದೆ. ಅಂಗಡಿಯವರು ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.

ಕಬಕ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುರೇಶ್‌ ಶುಭ ಹಾರೈಸಿದರು.

ಐಜಿಡಿ ಜಿಲ್ಲಾ ಸಂಯೋಜಕ ಗಣೇಶ್ ಬಂಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸಾರ ತಂಡದ ಸಂಚಾಲಕ ಸಂಶುದ್ದೀನ್ ಸಂಪ್ಯ ಸ್ವಾಗತಿಸಿದರು. ನಿರ್ದೇಶಕ ಕೃಷ್ಣಪ್ಪ ಬಂಬಿಲ ವಂದಿಸಿದರು. ಐಜಿಡಿ ಕಾರ್ಯಕರ್ತೆ ಪ್ರಜ್ಞಾ ನಿರೂಪಿಸಿದರು.