ಮುನಿಯಾಲು ಆಸ್ಪತ್ರೆಯಲ್ಲಿ 30ರ ವರೆಗೆ ಸ್ಥೂಲ ಕಾಯ ಚಿಕಿತ್ಸಾ ಶಿಬಿರ

| Published : Jan 25 2025, 01:00 AM IST

ಮುನಿಯಾಲು ಆಸ್ಪತ್ರೆಯಲ್ಲಿ 30ರ ವರೆಗೆ ಸ್ಥೂಲ ಕಾಯ ಚಿಕಿತ್ಸಾ ಶಿಬಿರ
Share this Article
  • FB
  • TW
  • Linkdin
  • Email

ಸಾರಾಂಶ

ಈ ಶಿಬಿರದಲ್ಲಿ ಬೊಜ್ಜುತನವನ್ನು ತಡೆಗಟ್ಟಲು ಮತ್ತು ಎದುರಿಸಲು ಆಯುರ್ವೇದದ ಪಂಚಕರ್ಮ, ಪಥ್ಯಾಹಾರ ಮತ್ತು ಯೋಗದಂತಹ ಅನೇಕ ವಿಶಿಷ್ಟ ಚಿಕಿತ್ಸಾ ವಿಧಾನಗಳನ್ನು ಅನುಸರಿಸಲಾಗುತ್ತದೆ ಮತ್ತು ಉಚಿತ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆಯು ಲಭ್ಯವಿದೆ. ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶುಕ್ರವಾರದಿಂದ ಜ.30ರ ವರೆಗೆ ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಆರೋಗ್ಯಕರ ತೂಕ ಜಾಗೃತಿ ಮಾಸಾಚರಣೆಯ ಅಂಗವಾಗಿ ಪಂಚಕರ್ಮ ಮತ್ತು ಸ್ವಸ್ಥ ವೃತ್ತ ವಿಭಾಗದಿಂದ ಸ್ಥೂಲ ಕಾಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ಶುಕ್ರವಾರ ಕಾಲೇಜಿನ ಪ್ರಾಂಶುಪಾಲ ಡಾ. ಸತ್ಯನಾರಾಯಣ ಬಿ., ಸಂಸ್ಥೆಯ ಆಡಳಿತಾಧಿಕಾರಿ ಯೋಗೀಶ್ ಶೆಟ್ಟಿ, ಶಿಬಿರದ ಮೇಲ್ವಿಚಾರಕರಾದ ಡಾ.ಪ್ರೀತಿ ಪಾಟೀಲ್, ಯೋಗ ಶಿಕ್ಷಕಿ ರೀನಿ ರವೀನಾ ಡಯಾಸ್ ಶಿಬಿರವನ್ನು ಉದ್ಘಾಟಿಸಿದರು.ಈ ಶಿಬಿರದಲ್ಲಿ ಬೊಜ್ಜುತನವನ್ನು ತಡೆಗಟ್ಟಲು ಮತ್ತು ಎದುರಿಸಲು ಆಯುರ್ವೇದದ ಪಂಚಕರ್ಮ, ಪಥ್ಯಾಹಾರ ಮತ್ತು ಯೋಗದಂತಹ ಅನೇಕ ವಿಶಿಷ್ಟ ಚಿಕಿತ್ಸಾ ವಿಧಾನಗಳನ್ನು ಅನುಸರಿಸಲಾಗುತ್ತದೆ ಮತ್ತು ಉಚಿತ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆಯು ಲಭ್ಯವಿದೆ. ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಶಿಬಿರದ ಹೆಚ್ಚಿನ ಮಾಹಿತಿಗಾಗಿ 8123403233 ಸಂಪರ್ಕಿಸುವಂತೆ ಕೋರಲಾಗಿದೆ.