ಬಸವನಬಾಗೇವಾಡಿ ಮತಕ್ಷೇತ್ರದ ಮುಳವಾಡ ಗ್ರಾಮದಿಂದ ತೊನಶ್ಯಾಳ ಗ್ರಾಮಕ್ಕೆ ಹೋಗುವ ರಸ್ತೆಯನ್ನು ಗುರುವಾರ ಎಇ ಎಂ.ಎಂ.ವಾಲೀಕಾರ ಅವರು ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಬಸವನಬಾಗೇವಾಡಿ ಮತಕ್ಷೇತ್ರದ ಮುಳವಾಡ ಗ್ರಾಮದಿಂದ ತೊನಶ್ಯಾಳ ಗ್ರಾಮಕ್ಕೆ ಹೋಗುವ ರಸ್ತೆಯನ್ನು ಗುರುವಾರ ಎಇ ಎಂ.ಎಂ.ವಾಲೀಕಾರ ಅವರು ಪರಿಶೀಲಿಸಿದರು. ಮುಳವಾಡ-ತೊನಶ್ಯಾಳ ರಸ್ತೆ ಹದಗೆಟ್ಟಿರುವುದರಿಂದ ವಾಹನ ಸವಾರರಿಗೆ, ಜನರಿಗೆ ತುಂಬಾ ತೊಂದರೆ ಉಂಟಾಗಿರುವ ಕುರಿತು ಆ.19ರಂದು ಕನ್ನಡಪ್ರಭ ಹದಗೆಟ್ಟ ರಸ್ತೆ ವಾಹನ ಸವಾರರ ಪರದಾಟ ಶೀರ್ಷಿಕಯಡಿ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಜಿಪಂ ಎಇಇ ವಿಲಾಸ ರಾಠೋಡ ಅವರು ಈ ಭಾಗದ ಸೆಕ್ಷನ್ ಅಧಿಕಾರಿ ಎಇ ಎಂ.ಎಂ.ವಾಲೀಕಾರ ಅವರಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ರಸ್ತೆ ಸುಧಾರಣೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದರು. ಮುಳವಾಡದಿಂದ ತೊನಶ್ಯಾಳಗೆ ಹೋಗುವ 8 ಕಿ.ಮೀ ರಸ್ತೆ ತುಂಬಾ ಹದಗೆಟ್ಟಿದೆ. 6 ಕಿಮೀ ಡಾಂಬರೀಕರಣ, 2 ಕಿಮೀ ಸಿಸಿ ರಸ್ತೆಗೆ ಪ್ರಸ್ತಾವನೆ ತಯಾರಿಸಿ ಮೇಲಧಿಕಾರಿಗಳ ಸೂಚನೆ ಮೇರೆಗೆ ಸಲ್ಲಿಸಲಾಗುವುದು ಎಂದು ಎಇ ವಾಲೀಕಾರ ಪತ್ರಿಕೆಗೆ ತಿಳಿಸಿದ್ದಾರೆ.