ತ್ಯಾಜ್ಯ ವಿಲೇವಾರಿ ಮಾಡಲು ಸಾರ್ವಜನಿಕರ ಆಗ್ರಹ

| Published : Jun 28 2025, 12:19 AM IST

ತ್ಯಾಜ್ಯ ವಿಲೇವಾರಿ ಮಾಡಲು ಸಾರ್ವಜನಿಕರ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಬಸ್ ನಿಲ್ದಾಣದ ಬಳಿಯ ಕಾಲುವೆಯಲ್ಲೇ ಪ್ಲಾಸ್ಟಿಕ ತ್ಯಾಜ್ಯಗಳನ್ನ ಹಾಕಿದ್ದು, ಬಿಡಾಡಿ ದನಗಳು ತಿನ್ನುತ್ತಿದ್ದು, ಮೂಕ ಪ್ರಾಣಿಯ ದೇಹಕ್ಕೆ ವಿಷವನ್ನ ಉಣಿಸಲಾಗುತ್ತಿದೆ.

ಗೋಕರ್ಣ: ಪ್ರವಾಸಿ ತಾಣದಲ್ಲಿ ಸಂಗ್ರಹಿಸಿದ ತ್ಯಾಜ್ಯವನ್ನ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಸಮರ್ಪಕವಾಗಿ ವಿಲೇವಾರಿ ಮಾಡುವಂತೆ ಲೋಕಾಯುಕ್ತರು ಸೂಚಿಸಿದರು ಗ್ರಾಮ ಪಂಚಾಯತ ನಿರ್ಲಕ್ಷಿಸುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಕಸ ವಿಲೇವಾರಿ ಕುರಿತಂತೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತರು ಹಲವು ಕಡೆ ಪರಶೀಲನೆ ನಡೆಸಿ ಸೂಕ್ತ ಕ್ರಮತೆಗೆದುಕೊಳ್ಳಲು ಸೂಚಿಸಿದ್ದರು, ಆದರೂ ಯಾವುದೇ ಕಾರ್ಯವಾಗಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಮೇಲಿನಕೇರಿಯಿಂದ ಬಿದ್ರಗೇರಿ ಹೋಗುವ ಒಳ ರಸ್ತೆಯಲ್ಲಿ ಹಲವು ದಿನಗಳಿಂದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ರಾಶಿ ಬಿದ್ದಿದ್ದು, ಇದನ್ನ ತೆರವುಗೊಳಿಸುವಂತೆ ಗ್ರಾಮ ಪಂಚಾಯತಕ್ಕೆ ತಿಳಿಸಿದ್ದರು ಹಾಗೇ ಬಿಟ್ಟಿದ್ದು, ಮಣ್ಣಿನ ರಸ್ತೆಯಲ್ಲಿ ರಾಡಿಯ ಜೊತೆ ತ್ಯಾಜ್ಯ ಪದಾರ್ಥಗಳು ಮಿಶ್ರಣವಾಗಿ ಶಾಲಾ ಮಕ್ಕಳಿಗೆ ಸಂಚರಿಸಲು ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಇನ್ನೂ ಇದರಂತೆ ಇಲ್ಲಿನ ಬಸ್ ನಿಲ್ದಾಣದ ಬಳಿಯ ಕಾಲುವೆಯಲ್ಲೇ ಪ್ಲಾಸ್ಟಿಕ ತ್ಯಾಜ್ಯಗಳನ್ನ ಹಾಕಿದ್ದು, ಬಿಡಾಡಿ ದನಗಳು ತಿನ್ನುತ್ತಿದ್ದು, ಮೂಕ ಪ್ರಾಣಿಯ ದೇಹಕ್ಕೆ ವಿಷವನ್ನ ಉಣಿಸಲಾಗುತ್ತಿದೆ. ಇದರಂತೆ ಇನ್ನು ಹಲಾವರು ಕಡೆ ತ್ಯಾಜ್ಯಗಳಿದ್ದು ಮಳೆ ನೀರಿನೊಂದಿಗೆ ಬೆರೆತು ರೋಗರುಜಿನ ಹರಡುವ ಭೀತಿ ಎದುರಾಗಿದೆ.ಈ ಬಗ್ಗೆ ಗ್ರಾ. ಪಂ. ಸದಸ್ಯ ಗಣಪತಿ ನಾಯ್ಕ ಪ್ರತಿಕ್ರಿಯಿಸಿ ಈ ಹಿಂದೆ ಹಲವು ಬಾರಿ ಈ ಸಮಸ್ಯೆ ಕುರಿತು ಪಂಚಾಯತ ಅಧಿಕಾರಿಗಳಿಗೆ ಸರಿಪಡಿಸಲು ತಿಳಿಸಲಾಗಿದೆ , ಆದರೂ ನಿರ್ಲಕ್ಷಸುತ್ತಿರುವುದು ಗಮನಕ್ಕೆ ಬಂದಿದ್ದು,ಈ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದು ಸ್ವಚ್ಚಗೊಳಸಲು ತಿಳಿಸುತ್ತೇವೆ ಎಂದಿದ್ದಾರೆ.