ಹೊಳೆನರಸೀಪುರ: ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಸನ್ನಿಧಿಯಲ್ಲಿ ಆಶಾಢ ಮಾಸದ ದ್ವಾದಶಿ ಪ್ರಯುಕ್ತ ಜೇಷ್ಟ ನಕ್ಷತ್ರದಲ್ಲಿ ಶ್ರೀ ಸಿಕ್ಕಿನುಂಡೆ ನರಸಿಂಹಸ್ವಾಮಿಯವರಿಗೆವಿಶೇಷ ಪೂಜಾ ಮಹೋತ್ಸವ ಆಯೋಜನೆ ಮಾಡಲಾಗಿದೆ.ಶ್ರೀ ಸ್ವಾಮಿಯ ದೇವಾಲಯದ ಪ್ರಹಾಂಗಣದಲ್ಲಿ ಇರುವ ಶ್ರೀ ಸಿಕ್ಕಿನುಂಡೆ ನರಸಿಂಹಸ್ವಾಮಿ ಅವರಿಗೆ ಬೆಳಿಗ್ಗೆ ೧೦ ಗಂಟೆಗೆ ಅಭಿಷೇಕ, ವಿಶೇಷ ಅಲಂಕಾರ, ನೈವೇದ್ಯ, ಆರ್ಚನೆ, ಮಹಾಮಂಗಳಾರತಿ ನೆರವೇರಿಸಿ, ಪ್ರಸಾದ ವಿನಿಯೋಗ ಮಾಡಲಾಗುತ್ತದೆ.ಸೌಂದರ್ಯ ಲಹರಿ ಸಂಘದಿಂದ ನರಸಿಂಹ ಸಹಸ್ರನಾಮಾವಳಿ, ಭಜನೆ ಹಾಗೂ ದೇವರನಾಮ ಇರುತ್ತದೆ ಎಂದು ಅರ್ಚಕರು ಮಾಹಿತಿ ನೀಡಿದ್ದಾರೆ.
ಸಿಕ್ಕಿನುಂಡೆ ನರಸಿಂಹಸ್ವಾಮಿಯವರಿಗೆವಿಶೇಷ ಪೂಜೆ
ಹೊಳೆನರಸೀಪುರ ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಸನ್ನಿಧಿಯಲ್ಲಿ ಆಶಾಢ ಮಾಸದ ದ್ವಾದಶಿ ಪ್ರಯುಕ್ತ ಜೇಷ್ಟ ನಕ್ಷತ್ರದಲ್ಲಿ ಶ್ರೀ ಸಿಕ್ಕಿನುಂಡೆ ನರಸಿಂಹಸ್ವಾಮಿಯವರಿಗೆವಿಶೇಷ ಪೂಜಾ ಮಹೋತ್ಸವ ನಡೆಯಿತು. ಶ್ರೀ ಸ್ವಾಮಿಯ ದೇವಾಲಯದ ಪ್ರಹಾಂಗಣದಲ್ಲಿ ಇರುವ ಶ್ರೀ ಸಿಕ್ಕಿನುಂಡೆ ನರಸಿಂಹಸ್ವಾಮಿ ಅವರಿಗೆ ಬೆಳಿಗ್ಗೆ ೧೦ ಗಂಟೆಗೆ ಅಭಿಷೇಕ, ವಿಶೇಷ ಅಲಂಕಾರ, ನೈವೇದ್ಯ, ಆರ್ಚನೆ, ಮಹಾಮಂಗಳಾರತಿ ನೆರವೇರಿಸಿ, ಪ್ರಸಾದ ವಿನಿಯೋಗ ನಡೆಯಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.