ವೈದ್ಯ ವೃತ್ತಿ ಪವಿತ್ರವಾದುದು: ಡಾ. ಜಗದೀಶ ಶಿರೋಳ

| Published : Jul 02 2024, 01:49 AM IST / Updated: Jul 02 2024, 09:05 AM IST

ಸಾರಾಂಶ

ವೈದ್ಯಕೀಯ ಕ್ಷೇತ್ರದಲ್ಲಿ ಇಂದು ಸಾಕಷ್ಟು ಪ್ರಗತಿ ಆಗಿದ್ದು, ಜನಸಮುದಾಯ ಆರೋಗ್ಯ ಕಾಯ್ದುಕೊಳ್ಳಲು ವೈದ್ಯರು ಬದ್ಧತೆಯಿಂದ ಹಗಲಿರುಳು ಕಾರ್ಯ ಮಾಡುತ್ತಿದ್ದಾರೆ ಎಂದು ವೈದ್ಯ ಡಾ. ಜಗದೀಶ ಶಿರೋಳ ಹೇಳಿದರು.

ಗದಗ: ವೈದ್ಯ ವೃತ್ತಿ ಅತ್ಯಂತ ಪವಿತ್ರವಾದುದು. ರೋಗಿಗಳಿಗೆ ವೈದ್ಯಕೀಯ ಸೇವೆ ಒದಗಿಸುವ ಮೂಲಕ ಸಂತೃಪ್ತಿ ಕಾಣಬಹುದಾಗಿದೆ ಎಂದು ವೈದ್ಯ ಡಾ. ಜಗದೀಶ ಶಿರೋಳ ಹೇಳಿದರು.

ಅವರು ಸೋಮವಾರ ರೋಟರಿ ಐಕೇರ್ ಸೆಂಟರ್‌ದಲ್ಲಿ ರೋಟರಿ ಕ್ಲಬ್, ಇನ್ನರ್‌ವೀಲ್ ಕ್ಲಬ್, ವಿಜಯ ಕಾಲೇಜ್ ಆಫ್ ಫೈನ್ ಆರ್ಟ್ಸ್ ಹಾಗೂ ಬಸವೇಶ್ವರ ಬ್ಲಡ್ ಸೆಂಟರ್ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಡಾ. ಬಿ.ಸಿ. ರಾಯ್ ಅವರು ವೈದ್ಯಕೀಯ ಲೋಕಕ್ಕೆ ಸಲ್ಲಿಸಿದ ಅನುಪಮ ಸೇವೆಯ ಹಾಗೂ ಅವರ ಜನ್ಮದಿನಾಚರಣೆಯ ಸ್ಮರಣೆಯಲ್ಲಿ ಪ್ರತಿ ವರ್ಷ ಜು. 1ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತಿದೆ. ಡಾ. ರಾವ್ ಜನಿಸಿದ್ದು ಮತ್ತು ನಿಧನರಾದದ್ದು ಜು. 1 ಎಂಬುದು ವಿಶೇಷ. ವೈದ್ಯಕೀಯ ಕ್ಷೇತ್ರದಲ್ಲಿ ಇಂದು ಸಾಕಷ್ಟು ಪ್ರಗತಿ ಆಗಿದ್ದು, ಜನಸಮುದಾಯ ಆರೋಗ್ಯ ಕಾಯ್ದುಕೊಳ್ಳಲು ವೈದ್ಯರು ಬದ್ಧತೆಯಿಂದ ಹಗಲಿರುಳು ಕಾರ್ಯ ಮಾಡುತ್ತಿದ್ದಾರೆ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಡಾ. ಆರ್.ಬಿ. ಉಪ್ಪಿನ ಅಧ್ಯಕ್ಷತೆ ವಹಿಸಿ ಮತನಾಡಿದರು. ಹಿರಿಯ ವೈದ್ಯ ಡಾ. ಜಗದೀಶ ಶಿರೋಳ ಅವರನ್ನು ಗೌರವಿಸಲಾಯಿತು. ರೋಟರಿ ಕ್ಲಬ್‌ನ ಅಸಿಸ್ಟಂಟ್ ಗವರ್ನರ್‌ ಶಿವಾಚಾರ್ಯ ಹೊಸಳ್ಳಿಮಠ, ಶ್ರೀಧರ ಸುಲ್ತಾನಪುರ, ಸಂತೋಷ ಅಕ್ಕಿ, ನಾಗರತ್ನಾ ಮಾರನಬಸರಿ, ಪ್ರಾಚಾರ್ಯ ಸಿ.ವಿ. ಬಡಿಗೇರ, ಹಿರಿಯ ವೈದ್ಯರಾದ ಡಾ. ರಾಜಶೇಖರ ಬಳ್ಳಾರಿ, ಡಾ. ಶೇಖರ ಸಜ್ಜನರ, ಡಾ. ಪ್ರದೀಪ ಉಗಲಾಟ, ಎಚ್.ಎಸ್. ಪಾಟೀಲ, ವಿಶ್ವನಾಥ ಯಳಮಲಿ, ಶ್ರೀಧರ ಧರ್ಮಾಯತ, ಬಾಲಕೃಷ್ಣ ಕಾಮತ, ವೀಣಾ ತಿರ್ಲಾಪುರ, ಚನ್ನವೀರ ಹುಣಶೀಕಟ್ಟಿ, ಸುರೇಶ ಕುಂಬಾರ, ಸುವರ್ಣಆ ವಸ್ತ್ರದ, ಪುಷ್ಪಾ ಭಂಡಾರಿ, ಹೇಮಾ ಪುಂಗಾಲಿಯಾ, ಅಶ್ವಿನಿ ಜಗತಾಪ, ನೀಲಾಂಬಿಕಾ ಉಗಲಾಟ, ಜ್ಯೋತಿ ಭರಮಗೌಡರ ಇದ್ದರು.