ಬಂಡೀಪುರದ ಹೆಡಿಯಾಲ ವಲಯದಲ್ಲಿ ಹುಲಿ ಸಾವು

| Published : May 04 2024, 12:38 AM IST

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ವಲಯದಲ್ಲಿ ಗಂಡು ಹುಲಿಯೊಂದು ಸಾವನ್ನಪ್ಪಿದೆ. ಹೆಡಿಯಾಲ ವಲಯದ ವ್ಯಾಪ್ತಿಯ ಹೆಬ್ಬಳ್ಳ ಗಸ್ತಿನ ಚಾಮಲಾಪುರ ಕಟ್ಟೆಯ ಅರಣ್ಯ ಪ್ರದೇಶದಲ್ಲಿ ಹುಲಿಯ ಶವ ಪತ್ತೆಯಾಗಿದೆ.

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ವಲಯದಲ್ಲಿ ಗಂಡು ಹುಲಿಯೊಂದು ಸಾವನ್ನಪ್ಪಿದೆ. ಹೆಡಿಯಾಲ ವಲಯದ ವ್ಯಾಪ್ತಿಯ ಹೆಬ್ಬಳ್ಳ ಗಸ್ತಿನ ಚಾಮಲಾಪುರ ಕಟ್ಟೆಯ ಅರಣ್ಯ ಪ್ರದೇಶದಲ್ಲಿ ಹುಲಿಯ ಶವ ಪತ್ತೆಯಾಗಿದೆ. ಸಿಬ್ಬಂದಿ ಗಸ್ತು ಮಾಡುವಾಗ ಹುಲಿಯ ಶವ ಇರುವುದನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸತ್ತ ಹುಲಿಯ ಶವ ಪರೀಕ್ಷೆ ಸಮಯದಲ್ಲಿ ೧೧ ವರ್ಷದ ಗಂಡು ಹುಲಿ ವಯೋಸಹಜ ಅನಾರೋಗ್ಯ ಹಾಗೂ ಎಡಗೈ ಭುಜದ ಮೂಳೆ ಮುರಿದಿತ್ತು ಮತ್ತು ಮೃತ ಹುಲಿಯ ೪ ಕೋರೆ ಹಲ್ಲುಗಳು ಸವೆದಿರುವುದು ಕಂಡು ಬಂದಿದೆ. ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗು ಕ್ಷೇತ್ರ ನಿರ್ದೇಶಕ ಪ್ರಭಾಕರ್ ಎಸ್ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (NTCA) ನಿಯಾಮನುಸಾರ ಮೃತ ಹುಲಿಯನ್ನು ಬೆಂಕಿ ಹಾಕಿ ಸುಡಲಾಯಿತು. ಮೈಸೂರು ವಿಭಾಗದ ಕ್ಷೇತ್ರ ನಿರ್ದೇಶಕ ಡಾ. ರಮೇಶ್ ಕುಮಾರ್,ಎಸಿಎಫ್ ಜಿ.ರವೀಂದ್ರ,ಆರ್ ಎಫ್ ಒ ನಾರಾಯಣ ಕೆ.ಆರ್,ಪಶು ವೈದ್ಯ ಡಾ.ವಾಸೀಂ ಮಿರ್ಜಾ, ವನ್ಯಜೀವಿ ಪರಿಪಾಲಕ ಕೃತಿಕಾ ಆಲನಹಳ್ಳಿ,ಎನ್ ಟಿಸಿಎ ಪ್ರತಿನಿಧಿ ರಘುರಾಮ್ ಆರ್,ಎಂಸಿ ತಳಲು ಉಪಾಧ್ಯ ಕ್ಷ ಲಕ್ಷ್ಮಿ ಕೆ.ಸಿ ಇದ್ದರು.