ತಾಳಿಕೋಟೆ ಪುರಸಭೆಗೆ ಅವಿರೋಧ ಆಯ್ಕೆ

| Published : Feb 11 2025, 12:45 AM IST

ಸಾರಾಂಶ

ಪುರಸಭೆಯ ಎರಡನೇ ಅವಧಿಗಾಗಿ ಸೋಮವಾರ ನಡೆದ ನೂತನ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಜುಬೇದಾ ಹುಸೇನಬಾಶ್ಯಾ ಜಮಾದಾರ, ಉಪಾಧ್ಯಕ್ಷರಾಗಿ ಗೌರಮ್ಮ ಅವ್ವಣ್ಣ ಕುಂಬಾರ ಅವಿರೋಧ ಆಯ್ಕೆ

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಪಟ್ಟಣದ ಪುರಸಭೆಯ ಎರಡನೇ ಅವಧಿಗಾಗಿ ಸೋಮವಾರ ನಡೆದ ನೂತನ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಜುಬೇದಾ ಹುಸೇನಬಾಶ್ಯಾ ಜಮಾದಾರ, ಉಪಾಧ್ಯಕ್ಷರಾಗಿ ಗೌರಮ್ಮ ಅವ್ವಣ್ಣ ಕುಂಬಾರ ಅವಿರೋಧ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಜುಬೇದಾ ಒಬ್ಬರೇ ಮಾತ್ರ ನಾಮಪತ್ರ ಸಲ್ಲಿಸಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಗೌರಮ್ಮ ಕುಂಬಾರ ಹಾಗೂ ಶಾಂತಾಬಾಯಿ ನಿಂಗಪ್ಪ ಹೊಟ್ಟಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಪರಿಶೀಲನೆ ನಂತರ ಶಾಂತಾಬಾಯಿ ಹೊಟ್ಟಿ ನಾಮಪತ್ರ ಹಿಂದಕ್ಕೆ ಪಡೆದಿದ್ದರಿಂದ ಅಧ್ಯಕ್ಷರಾಗಿ ಜಮಾದಾರ, ಉಪಾಧ್ಯಕ್ಷರಾಗಿ ಗೌರಮ್ಮ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ತಹಸೀಲ್ದಾರ್‌ ಕೀರ್ತಿ ಚಾಲಕ್ ಘೋಷಿಸಿದರು.

ಈ ವೇಳೆ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಮಾತನಾಡಿ, ಚುನಾವಣೆ ಬಂದಾಗ ಮಾತ್ರ ರಾಜಕಾರಣವಿರಲಿ. ಚುನಾವಣೆ ನಂತರ ಎಲ್ಲ ಸದಸ್ಯರ ವಿಶ್ವಾಸದೊಂದಿಗೆ ಸುಗಮ ಆಡಳಿತ ನಡೆಸಿಕೊಂಡು ಹೋಗಬೇಕು. ಪುರಸಭೆ ನೂತನ ಅಧ್ಯಕ್ಷ-ಉಪಾಧ್ಯಕ್ಷರು ಒಳಗೊಂಡು ಆಡಳಿತ ಮಂಡಳಿ ಎಲ್ಲ ಅಭಿವೃದ್ದಿ ಕಾರ್ಯಗಳಿಗೆ ಸಹಕರಿಸುತ್ತೇನೆಂದ ಅವರು, ಪಟ್ಟಣದ ಸೌಂದರ್ಯೀಕರಣದ ಜೊತೆಗೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡು ಉತ್ತಮ ಆಡಳಿತ ನೀಡಬೇಕೆಂದರು.

ನೂತನ ಅಧ್ಯಕ್ಷ-ಉಪಾಧ್ಯಕ್ಷರಗೆ ಶಾಸಕ ಸಿ.ಎಸ್.ನಾಡಗೌಡ, ಪುರಸಭೆ ಹಾಗೂ ಸಾರ್ವಜನಿಕರಿಂದ ಗೌರವಿಸಲಾಯಿತು. ಚುನಾವಣಾ ಸಹಾಯಕರಾಗಿ ಪುರಸಭೆ ಮುಖ್ಯಾಧಿಕಾರಿ ಮೋಹನ್ ಜಾಧವ, ತಹಸೀಲ್ದಾರ್‌ ಕಾರ್ಯಾಲಯದ ಬಾಬಾನಗರ, ವಿರೇಶ ಅಲ್ಲದೇ ಪುರಸಭೆ ಸಿಬ್ಬಂದಿ ಕಾರ್ಯನಿರ್ವಹಿಸಿದರು.

ಕೆಪಿಸಿಸಿ ಸದಸ್ಯರಾದ ಬಿ.ಎಸ್.ಪಾಟೀಲ(ಯಾಳಗಿ), ಪ್ರಭುಗೌಡ ಮದರಕಲ್ಲ, ಮಾಸುಮಸಾಬ ಕೇಂಭಾವಿ, ಶರಣುದನಿ ದೇಶಮುಖ, ಮೈಹಿಬೂಬ ಕೇಂಭಾವಿ, ಸಿದ್ದನಗೌಡ ಪಾಟೀಲ, ಹುಸೇನಭಾಶ್ಯಾ ಜಮಾದಾರ, ಸಂಗನಗೌಡ ಅಸ್ಕಿ, ಫಯಾಜ ಉತ್ನಾಳ, ಮುನ್ನಾ ಅರ್ಜುಣಗಿ, ಮಂಜೂರ ಬೇಪಾರಿ, ಬಸವರಾಜ ಕುಂಭಾರ, ಪುರಸಭೆ ಸದಸ್ಯರುಗಳಾದ ಅಣ್ಣಾಜಿ ಜಗತಾಪ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಪರಶುರಾಮ ತಂಗಡಗಿ, ಮುತ್ತಣ್ಣ ಚಮಲಾಪೂರ, ಮುಸ್ತಫಾ ಚೌದ್ರಿ, ಯಾಸೀನ ಮಮದಾಪೂರ, ಡಿ.ವ್ಹಿ.ಪಾಟೀಲ, ನಿಂಗಪ್ಪ ಕುಂಟೋಜಿ, ಶ್ರೀಮತಿ ಅಕ್ಕಮಹಾದೇವಿ ಕಟ್ಟಿಮನಿ, ಮಹಬುಬಿ ಲಾಹೋರಿ, ಸಾಹೀದಾಬೇಗಂ ಬೇಪಾರಿ, ಕಸ್ತೂರಿಬಾಯಿ ಬಿರಾದಾರ, ಇಸ್ಮಾಯಿಲಬಿ ಮಕಾಂದಾರ, ಶಾಂತಾಬಾಯಿ ಹೊಟ್ಟಿ, ಮಹಿಬೂಬಿ ಮನಗೂಳಿ, ಮೊದಲಾದವರು ಇದ್ದರು.

ವಿಜಯೋತ್ಸವ:

ಪಟ್ಟಣದ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರು ತಮ್ಮ ಬೆಂಬಲಿಗರೊಂದಿಗೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರಲ್ಲದೇ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಜೈಕಾರ ಹಾಕುತ್ತಾ ತೆರಳಿದರು.

----

ಕೋಟ್‌...

ಚುನಾವಣೆಗಳಲ್ಲಿ ಸೋಲು ಗೆಲವು ಸಹಜ ಆದರೆ ಚುನಾವಣೆ ನಂತರ ಎಲ್ಲ ಸದಸ್ಯರ ಸಹಕಾರ ತೆಗೆದುಕೊಳ್ಳುವುದರೊಂದಿಗೆ ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಸಿ.ಎಸ್.ನಾಡಗೌಡರ ಮಾರ್ಗದರ್ಶನದೊಂದಿಗೆ ಮುನ್ನಡೆಯುತ್ತೇನೆ. ಅಲ್ಪ ಅವಧಿಯಲ್ಲಿಯೇ ಸಾಕಷ್ಟು ಅಭಿವೃದ್ಧಿ ಸವಾಲುಗಳಿದ್ದು ಅವುಗಳನ್ನು ಎದುರಿಸಿ ತಾಳಿಕೋಟೆ ಪಟ್ಟಣ ಮಾದರಿ ನಗರವನ್ನಾಗಿ ಮಾಡುವುದು ನನ್ನ ಗುರಿ ಇದೆ.

- ಜುಬೇದಾ ಜಮಾದಾರ, ಪುರಸಭೆ ನೂತನ ಅಧ್ಯಕ್ಷೆ