ಸಾರಾಂಶ
ರೋಟರಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಿದರು. ಕಾಲೇಜಿನ ಪ್ರಾಂಶುಪಾಲೆ ಸವಿತಾ ವನಮಹೋತ್ಸವದ ಮಹತ್ವ ತಿಳಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಕಲ್ಯಾಣಪುರ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಸಯನ್ಸ್ ಮತ್ತು ಇಕೊ ಕ್ಲಬ್ ಜತೆ ಜಂಟಿಯಾಗಿ ರೋಟರಿ ಉಡುಪಿಯು ಅಲ್ಲಿ ಈ ರೋಟರಿ ಉಡುಪಿ ಮಾಡಿದ ಮಿಯಾವಾಕಿ ಕಾಡಿನ ಬಳಿ ರೋಟರಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಗಿಡಗಳನ್ನು ನಡುವುದರ ಮೂಲಕ ವನಮಹೋತ್ಸವ ಆಚರಿಸಿದರು.ಕಾಲೇಜಿನ ಪ್ರಾಂಶುಪಾಲೆ ಸವಿತಾ, ವಿದ್ಯಾರ್ಥಿಗಳಿಗೆ ವನಮಹೋತ್ಸವದ ಉದ್ದೇಶ ಮತ್ತು ಮಹತ್ವವನ್ನು ತಿಳಿಸಿ ರೋಟರಿ ಉಡುಪಿಯ ಸಹಕಾರಕ್ಕೆ ಧನ್ಯವಾದವಿತ್ತರು.
ಪ್ರಾರಂಭದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿ ಚಂದನ ಸ್ವಾಗತಿಸಿದ ನಂತರ ಪ್ರಾಂಶುಪಾಲೆ ಸವಿತಾ ಅವರು ಪರಿಸರ ಸಂರಕ್ಷಣೆ ಯ ಅಗತ್ಯತೆ, ವನಮಹೋತ್ಸವದ ಇತಿಹಾಸ ಮತ್ತು ಉದ್ದೇಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿದರು.ರೋಟರಿ ಅದ್ಯಕ್ಷ ರೋ. ಗುರುರಾಜ ಭಟ್ಟರು ಪ್ಲಾಸ್ಟಿಕ್ ಬಳಕೆ, ಅದರ ಅಸಮರ್ಪಕ ವಿಲೇವಾರಿಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳು ಮತ್ತು ವಿದ್ಯಾರ್ಥಿಗಳು ಈ ಬಗ್ಗೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಇಕೋ ಕ್ಲಬ್ ನ ಸಂಚಾಲಕಿ ಲೊಲೆಟಾ ಡಿಸೋಜ, ಸಹ ಸಂಚಾಲಕಿ ರೋಷನಿ ಸೋನ್ಸ್, ಕಾರ್ಯದರ್ಶಿ ರೋ. ವೈಷ್ಣವಿ ಆಚಾರ್ಯ ಉಪಸ್ಥಿತರಿದ್ದರು. ಸಮಾರಂಭದಲ್ಲಿ ರೋ. ರಘುಪತಿ ಉಪಾಧ್ಯ, ರೋ. ರಾಮಚಂದ್ರ ಉಪಾಧ್ಯಾಯ, ರೊ. ಹೇಮಂತಕಾಂತ, ರೋ. ಶುಭಲಕ್ಷ್ಮಿ ಭಟ್ ಮತ್ತು ರೋ. ಸಾಧನಾ ಮುಂಡ್ಕೂರ್ ಭಾಗವಹಿಸಿದ್ದರು.